ಈ ಪುಟವನ್ನು ಪರಿಶೀಲಿಸಲಾಗಿದೆ
ಕತೆಗಾರನ ಟಿಪ್ಪಣಿ
93
- ಮೂವತ್ತಮೂರು ವರ್ಷಗಳ ಬಳಿಕ ೧೯೭೫ರಲ್ಲಿ, ಮಂಗಳೂರಿನ
- "ಅರುಣ' ಸಾಪ್ತಾಹಿಕ ನನ್ಸ್ಟಿಂದ ಒಂದು ಕತೆ ಬಯಸಿತು. ಸಂಪಾದಕ
- ಯು, ಎನ್. ಶ್ರೀನಿವಾಸ ಭಟ್ಟರು "ಹಳೆಯದೂ ಆಗಬಹುದು' ಎಂಬ
- ಸೂಚನೆಯನ್ನೂ ಇತ್ತಿದ್ದರು. ಈ ಕತೆಯನ್ನು ಪ್ರತಿ ಮಾಡಿ ಕಳಿಸಿದೆ.
- ಅದು ಎಮರ್ಜೆನ್ಸಿ ಕಾಲಾವಧಿ. ಯಾವುದೇ ಪತ್ರಿಕೆಯ ಅಂತಿಮ
- ಪ್ರೂಫ್ ಡಿ. ಸಿ. (ಡೆಪ್ಯೂಟಿ ಕಮಿಷನರ್) ಅವರಿಂದ 'ಓ.ಕೆ.' ಆಗ
- ಬೇಕು. 'ಎಣ್ಣೆ! ಚಿಮಿಣಿ ಎಣ್ಣೆ' ಪುಟ ಸೆನ್ಸಾರ್ ಆಯಿತು. "ಈ ಕತೆ
- ಅಚ್ಚು ಮಾಡಬೇಡಿ” ಎಂಬ ಆಜ್ಞೆಯೊಂದಿಗೆ ಹಿಂದಿರುಗಿ ಬಂತು!
ಮೈಖೆಲ್ಮಾಸ್ ಪಿಕ್ನಿಕ್
- ಕ್ರಿಸ್ತೀಯ ಬದುಕು, ಆಚಾರ-ವಿಚಾರ, ಬಹಳ ಹಿಂದಿನಿಂದಲೂ ನನಗೆ
- ಕುತೂಹಲದ ವಿಷಯ. ಆದರೆ, ಅಲ್ಲಿಯೂ ಎರಡು ವರ್ಗಗಳನ್ನು ನಾನು
- ಗಮನಿಸಿದ್ದೆ, ಸಮಾಜದ ಇತರ ಮತ-ಪಂಗಡಗಳಲ್ಲಿ ಇರುವಂತೆ.
- ಈ ಕತಿ ಮೊದಲು ಅಚ್ಚಾದದ್ದು 'ರಾಷ್ಟ್ರಬಂಧು'ವಿನಲ್ಲಿ, ೧೯೪೩ ರಲ್ಲಿ.
ರಕ್ತ ಸರೋವರ
- ೧೯೪೬ರಲ್ಲಿ ಕಾಶ್ಮೀರದಲ್ಲಿ, ಡೋಗ್ರಾ ಅರಸೊತ್ತಿಗೆಯ ವಿರುದ್ಧ ಜನ
- ದಂಗೆ ಎದ್ದರು. ಅಲ್ಲೂ ಬೇರೆ ಆಶ್ರಿತ ರಾಜ್ಯಗಳಲ್ಲೂ ನಡೆದ ಜನತೆಯ
- ಸಮರ ಭಾರತೀಯ ಸ್ವಾತಂತ್ರ್ಯ ಸಂಗ್ರಾಮದ ಒಂದಂಗವಾಗಿತ್ತು.
- ಅಲ್ಲಿಂದ ತೊಟ್ಟಿಕ್ಕಿ ಹರಿಯತೊಡಗಿದ ಸುದ್ದಿ ದೇಶದ ಮೈಯಲ್ಲಿ
- ರೋಮಾಂಚ ಉಂಟಿಮಾಡುತ್ತಿತ್ತು. ನನ್ನ್ನ ಕಣ್ಣಿಗೆ ಕಂಡುದು ಕೆಂಪಗಿನ
- ದಲ್ತಟಾಕ. ಧಾರವಾಡದ ಪ್ರೊ. ಶಿ.ಶಿ. ಬಸವನಾಳರು ತಮ್ಮ 'ಜಯ
- ಕರ್ನಾಟಕ' ಪತ್ರಿಕೆಯಲ್ಲಿ ಇದನ್ನು ಪ್ರಕಟಿಸಿದರು.
ಕೊನೆಯ ಗಿರಾಕಿ
- ನನ್ನ ಮೂರು ವರ್ಷಗಳ ಭೂಗತ ಜೀವನದ ಕೊನೆಯ ವರ್ಷ-೧೯೫೦.
- ಶಾತಾ ವಿಜ್ಞಾನ ಮಂದಿರ ಮತ್ತು ಮಲ್ಲೇಶ್ವರಂ ಹೈಸ್ಕೂಲುಗಳ ನಡುವೆ
- ಒಂದು ವೃತ್ತ. (ಕಾರಂಜಿ ಇರಲಿಲ್ಲ.) ಸುತ್ತಲೂ ಒಂದುವರೆ ಅಡಿ ಎತ್ತ
- ರದ ಕಟಿಕಟೆ. ಅಲ್ಲಿ, ಮೊದಲೇ ಗೊತ್ತುಪಡಿಸಿದ ದಿನಗಳಲ್ಲಿ, ರಾತ್ರೆ
- ಒಂಭತ್ತೂವರೆಯಿಂದ ನಾನು ಕುಳಿತಿರಬೇಕು, ಒಂದು ಚೀಲದೊಡನೆ.
- ಹತ್ತರೊಳಗೆ ಜಾಲಹಳ್ಳಿ ಕಡೆಯಿಂದ ಯಾರಾದರೂ ಬರುವರು. ಅವರಿಗೆ