ಪುಟ:KELAVU SANNA KATHEGALU.pdf/೧೧೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಕತೆಗಾರನ ಟಿಪ್ಪಣಿ

93


ಮೂವತ್ತಮೂರು ವರ್ಷಗಳ ಬಳಿಕ ೧೯೭೫ರಲ್ಲಿ, ಮಂಗಳೂರಿನ
"ಅರುಣ' ಸಾಪ್ತಾಹಿಕ ನನ್ಸ್ಟಿಂದ ಒಂದು ಕತೆ ಬಯಸಿತು. ಸಂಪಾದಕ
ಯು, ಎನ್‌. ಶ್ರೀನಿವಾಸ ಭಟ್ಟರು "ಹಳೆಯದೂ ಆಗಬಹುದು' ಎಂಬ
ಸೂಚನೆಯನ್ನೂ ಇತ್ತಿದ್ದರು. ಈ ಕತೆಯನ್ನು ಪ್ರತಿ ಮಾಡಿ ಕಳಿಸಿದೆ.
ಅದು ಎಮರ್ಜೆನ್ಸಿ ಕಾಲಾವಧಿ. ಯಾವುದೇ ಪತ್ರಿಕೆಯ ಅಂತಿಮ
ಪ್ರೂಫ್‌ ಡಿ. ಸಿ. (ಡೆಪ್ಯೂಟಿ ಕಮಿಷನರ್‌) ಅವರಿಂದ 'ಓ.ಕೆ.' ಆಗ
ಬೇಕು. 'ಎಣ್ಣೆ! ಚಿಮಿಣಿ ಎಣ್ಣೆ' ಪುಟ ಸೆನ್ಸಾರ್‌ ಆಯಿತು. "ಈ ಕತೆ
ಅಚ್ಚು ಮಾಡಬೇಡಿ” ಎಂಬ ಆಜ್ಞೆಯೊಂದಿಗೆ ಹಿಂದಿರುಗಿ ಬಂತು!

ಮೈಖೆಲ್‌ಮಾಸ್‌ ಪಿಕ್‌ನಿಕ್‌

ಕ್ರಿಸ್ತೀಯ ಬದುಕು, ಆಚಾರ-ವಿಚಾರ, ಬಹಳ ಹಿಂದಿನಿಂದಲೂ ನನಗೆ
ಕುತೂಹಲದ ವಿಷಯ. ಆದರೆ, ಅಲ್ಲಿಯೂ ಎರಡು ವರ್ಗಗಳನ್ನು ನಾನು
ಗಮನಿಸಿದ್ದೆ, ಸಮಾಜದ ಇತರ ಮತ-ಪಂಗಡಗಳಲ್ಲಿ ಇರುವಂತೆ.
ಈ ಕತಿ ಮೊದಲು ಅಚ್ಚಾದದ್ದು 'ರಾಷ್ಟ್ರಬಂಧು'ವಿನಲ್ಲಿ, ೧೯೪೩ ರಲ್ಲಿ.

ರಕ್ತ ಸರೋವರ

೧೯೪೬ರಲ್ಲಿ ಕಾಶ್ಮೀರದಲ್ಲಿ, ಡೋಗ್ರಾ ಅರಸೊತ್ತಿಗೆಯ ವಿರುದ್ಧ ಜನ
ದಂಗೆ ಎದ್ದರು. ಅಲ್ಲೂ ಬೇರೆ ಆಶ್ರಿತ ರಾಜ್ಯಗಳಲ್ಲೂ ನಡೆದ ಜನತೆಯ
ಸಮರ ಭಾರತೀಯ ಸ್ವಾತಂತ್ರ್ಯ ಸಂಗ್ರಾಮದ ಒಂದಂಗವಾಗಿತ್ತು.
ಅಲ್ಲಿಂದ ತೊಟ್ಟಿಕ್ಕಿ ಹರಿಯತೊಡಗಿದ ಸುದ್ದಿ ದೇಶದ ಮೈಯಲ್ಲಿ
ರೋಮಾಂಚ ಉಂಟಿಮಾಡುತ್ತಿತ್ತು. ನನ್ನ್ನ ಕಣ್ಣಿಗೆ ಕಂಡುದು ಕೆಂಪಗಿನ
ದಲ್‌ತಟಾಕ. ಧಾರವಾಡದ ಪ್ರೊ. ಶಿ.ಶಿ. ಬಸವನಾಳರು ತಮ್ಮ 'ಜಯ
ಕರ್ನಾಟಕ' ಪತ್ರಿಕೆಯಲ್ಲಿ ಇದನ್ನು ಪ್ರಕಟಿಸಿದರು.

ಕೊನೆಯ ಗಿರಾಕಿ

ನನ್ನ ಮೂರು ವರ್ಷಗಳ ಭೂಗತ ಜೀವನದ ಕೊನೆಯ ವರ್ಷ-೧೯೫೦.
ಶಾತಾ ವಿಜ್ಞಾನ ಮಂದಿರ ಮತ್ತು ಮಲ್ಲೇಶ್ವರಂ ಹೈಸ್ಕೂಲುಗಳ ನಡುವೆ
ಒಂದು ವೃತ್ತ. (ಕಾರಂಜಿ ಇರಲಿಲ್ಲ.) ಸುತ್ತಲೂ ಒಂದುವರೆ ಅಡಿ ಎತ್ತ
ರದ ಕಟಿಕಟೆ. ಅಲ್ಲಿ, ಮೊದಲೇ ಗೊತ್ತುಪಡಿಸಿದ ದಿನಗಳಲ್ಲಿ, ರಾತ್ರೆ
ಒಂಭತ್ತೂವರೆಯಿಂದ ನಾನು ಕುಳಿತಿರಬೇಕು, ಒಂದು ಚೀಲದೊಡನೆ.
ಹತ್ತರೊಳಗೆ ಜಾಲಹಳ್ಳಿ ಕಡೆಯಿಂದ ಯಾರಾದರೂ ಬರುವರು. ಅವರಿಗೆ