ಪುಟ:KELAVU SANNA KATHEGALU.pdf/೨೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

20


ಎರಡು ಮೂರು ತಲೆಮಾರುಗಳ ಪ್ರಸ್ತಾಪವಿರುವ ಇಲ್ಲಿನ ಕೆಲವು ಕಥೆಗಳಲ್ಲಿ ವಿಶಿಷ್ಟ ಆಶಯವೊಂದು ಹೊಳಲುಗೊಡುತ್ತಿದೆ. ಅಜ್ಜ-ಮೊಮ್ಮಕ್ಕಳು ಒoದೇ ಕಥೆಯಲ್ಲಿ ಅರ್ಥಪೂರ್ಣವಾಗಿ ಕಾಣಿಸಿಕೊಳ್ಳುತ್ತಾರೆ. ವಯಸ್ಸಿನ ಅಂತರದೊಂದಿಗೆ ಬದಲಾದ ಬದುಕಿನ ವೈದೃಶ್ಯವೂ ಪ್ರಕಟಗೊಂಡಿದೆ. ಹೊಸ ನಾಗರಿಕತೆಯ ಪ್ರವೇಶದಿಂದ ಆಗಿರುವ ವ್ಯತ್ಯಾಸಗಳ ಧ್ರುವಗಳನ್ನು ತೋರಿಸಲಾಗಿದೆ.

ನಿರಂಜನ ಯಾವ ಪೂರ್ವ ಗ್ರಹಿಕೆಗಳೂ ಇಲ್ಲದ ಮುಕ್ತ ಮಣಸ್ಸಿನ ಲೇಖಕರು. ಅವರು ತೆರೆದ ಕಣ್ಣುಗಳಿಂದ ಬದುಕನ್ನು ನೋಡುತ್ತಾರೆ. ಈ ನಿಡುಬಾಳಿನ ಒಳಿತು ಕೆಡಕುಗಳಿಗೆ ತುಡಿಯುತ್ತಾರೆ. ತಮ್ಮ ಮಿಡಿತಗಳಿಗೆ ಸ್ಪಂದನಗಳಿಗೆ ನುಡಿಯ ಆಕಾರ ಕೊಟ್ಟು ಕಥೆಯ ಕವಚ ತೊಡಿಸುತ್ತಾರೆ. ಅವರ ಕಥೆಗಳ ಒಟ್ಟು ಪ್ರೇರಣೆಗಳು ಯಾವುವು, ಪರಿಕಲ್ಪನೆಗಳೇನು, ಧೋರಣೆಯ ಸ್ವರೂಪ ಯಾವುದೆಂಬುದನ್ನು ඒಈ ಹಿನ್ನಲೆಯಿoದ ಖಚಿತವಾಗಿ ಗುರುತಿಸಬಹುದಾಗಿದೆ. ಬಿರುಕು ಬಿಡುತ್ತಾ ಮನುಶ್ಯತ್ವ ಕುಸಿಯುತ್ತಿರುವುದಕ್ಕಾಗಿ ದಟ್ಟವಾದ ನಿಟ್ಟುಸಿರೊಂದು ಎಲ್ಲ ಕಥೆಗಳಲ್ಲಾ ಕೇಳಿಬರುತ್ತದೆಯಲ್ಲವೆ? ಮಧುರತಮವಾದ ಮನುಶ್ಯ ಸoಬoಧಗಳು ಹಳಸಿಕೊoಡು ಬದುಕು ಅಸಹ್ಯವಾಗುತ್ತಿರುವುದು ನಿಜ. ಎಲ್ಲಿಂದ ಬಂದುವು ಈ ಕಂದರಗಳು? ಜೀವಂತವಿದ್ದ ಆ ಸುಖ ಸೌಹಾರ್ದ ಎಲ್ಲಿ ಮಾಯವಾಯಿತು? ಅಮೃತ ಸ್ವರೂಪಿಯಾಗಿದ್ದ ಪ್ರೀತಿಯ ಸೆಲೆ ಬತ್ತಿದ್ದಾದರೂ ಹೇಗೆ? ಜಿನುಗುವ ಅಂತಃಕರಣ ನಿoತಿದ್ದಾದರೂ ಏಕೆ? ತೇವವಿಲ್ಲದೆ ಒಣಗಿದ ಎದೆಗಳ ನಡುವೆ ಹೇಗೆ ಬಾಳುವುದು? ಕಣ್ಣರಳಿಸುವ ಕಡೆ ಬದುಕಿನ ಕ್ರೂರ ಮುಖ ಕಾಣಿಸುತ್ತದೆ. ನಿರ್ದಯ ನಿಷ್ಟುರ ವರ್ತನೆಯ ಜನ ಬದುಕನ್ನು ಅಮಾನವೀಯ ಹ್ರುದಯಶೂನ್ಯ ಗೋರಿಯನ್ನಾಗಿಸುತ್ತಾ ಹೊರಟಿರುವುದನ್ನು ಇಲ್ಲಿನ ಕಥೆಗಳು ಪ್ರಬಲವಾಗಿ ಬಿಂಬಿಸಿವೆ. ನಂಬಿಕೆಯ ತಾಳಿ ಕಿತ್ತುಹೋದ ಮೇಲೆ ಸಂಶಯ ಪಿಶಾಚಿ ಕ್ಲಾಡುತ್ತದೆ. ಪ್ರತಿಯೊoದನ್ನೂ ಗುಮಾನಿಯಿಂದಲೇ ನೋಡುವವರ ನಡುವೆ, ಬದುಕು ದುರ್ಭರವಾಗುತ್ತದೆ, ತನ್ನ ಅರ್ಥವಂತಿಕೆಯನ್ನು ನೀಗಿಕೊಳ್ಳುತ್ತದೆ. ಇoಥ ಕಠೋರತೆಯ ಅದುರಿನಲ್ಲಿ ಇನ್ನೂ ಅಲ್ಲಲ್ಲಿ ಕೋಮಲತೆ ಮಾನವೀಯತೆಯ ರೇಖೆಗಳು ಮಿoಚುತ್ತಿರುತ್ತವೆ ಎoಬುದನ್ನೂ ಕಥೆಗಳು ಧ್ವನಿಸುತ್ತವೆ.

ಇಲ್ಲಿನ ಕಥೆಗಳಲ್ಲಿ ಪ್ರತಿಪಾದಿತವಾಗುವ ಈ ಬಗೆಯ ಪ್ರಕ್ರಿಯೆ ಪರಿಕಲ್ಪನೆಗಳಿಗೆ ಪ್ರಧಾನವಾಗಿರುವ ಪ್ರೇರಣೆಯೆಂದರೆ ಬದ್ಧತೆ, ನಿರಂಜನ ಹೇಗೆ