ಈ ಪುಟವನ್ನು ಪ್ರಕಟಿಸಲಾಗಿದೆ
ಬಾಪೂಜಿ!ಬಾ...ಪೊ!.. 5
ರಾತ್ರೆಯ ಹನ್ನೆರಡು ಬಡೆಯಿತು. ತಮ್ಮ ಆಫೀಸಿನಲ್ಲಿ ತಮ್ಮ ದಫ್ತರುಗಳ ಮೇಲೆಯೇ
ಪ್ರಜಾಧಿಕಾರಿ ಸೋಜಾಜಿ ನಿದ್ದೆ ಹೊಗ್ಗಿದ್ದರು. ಅಲ್ಲಲ್ಲಿ ತಲೆಯೆತ್ತಿದ್ದ ಇತರ ಪಕ್ಷಗಳನ್ನು ಹೇಗೆ
ಸದೆಬಡೆಯಲೆಂದು ಯೋಚಿಸಿ ಯೋಚಿಸಿ ಅವರಿಗೆ ನಿದ್ದೆ ಬಂದಿತ್ತು, ವಿದ್ಯುದ್ದೀಪಗಳು
ಉರಿಯುತ್ತಲೇ ಇದ್ದುವು. ಆಗಲೇ ಅವರು ಕನವರಿಸತೊಡಗಿದ್ದರು.
ಆಗ ಸ್ವರ ಕೇಳಿಸಿತು:
'ಹೊ! ನನ್ನನ್ನು ನೀವೆಲ್ಲರೂ ವಂಚಿಸಿಬಿಟ್ಟಿರಿ!'
ಸೋಜಾಜಿ ದೃಷ್ಟಿ ಮೇಲೆತ್ತಿ ನೋಡಿದರು.
ಅರ್ಧ ನಗ್ನ ಶರೀರವೊಂದು ತನ್ನ ಊರುಗೋಲಿನ ಮೆಲೆ ಬಾಗಿ ನಿಂತಿದೆ.
ಅದರ ತಲೆಯ ಹಿಂದುಗಡೆಯಿಂದ ಜಾಜ್ವಲ್ಯಮಾನವಾದ ಬೆಳಕೊಂದು ಪ್ರಕಾಶಿಸುತ್ತಿದೆ. ಅದರ
ಉಪನಯನಗಳಿಂದ ತೀಕ್ಷ್ಮನೋಟ ಸೋಜಾಜಿಯವರನ್ನು ನೋಡುತ್ತಿದೆ.
ಸೋಜಾಜೆ ದಿಗ್ಭ್ರಮೆಗೊಂಡು ಎದ್ದರು.
ಬಾಪೂಜಿ ಎದುರಿಗಿದ್ದರು.
'ನಮಸ್ತೇ' ಎನ್ನೋಣವೇ ಎಂದರೆ ಸ್ವರ ಗಂಟಲಲ್ಲೇ ಇಂಗಿ ಹೋಗಿತ್ತು;
ಕೈ 'ಕಾಲ್ಬೆಲ್ಲಿನತ್ತ ಧಾವಿಸುತಿತ್ತು.
"ತಡೆ!"
ಎಂದಿತು ಬಾಪುಜಿಯ ಪ್ರತಿಮೆ_
"ನಿನ್ನ ವಿಚಾರಣೆಗೆ ಬಂದಿದ್ದೇನೆ!"
ಸೋಜಾಜಿಯವರ ಕರ್ಣಕುಹರಗಳನ್ನು ಆ ಅಮೃತಗಾನ ಪ್ರವೇಶಿತು.
ಅದರ ನುಡಿಯಲ್ಲಿ ಕಠೋರತೆಯಿದ್ದರೂ ಸೊರಹಿನಲ್ಲಿ ಮಾರ್ದವತೆ ಇತ್ತು.
“ನನ್ನ ನಾಡನ್ನು ಅಧೋಗತಿಗಿಳಿಸಿದ್ದೀರಿ!”
".........."
" ನನ್ನನ್ನು...ನನ್ನಲ್ಲಿ ವಿಶಾಸವಿಟ್ಟಿದ್ದ ಅಪಾರ ಜನಸ್ತೋಮವನ್ನು ನೀವು
ಉಪಾಯದಿಂದ ವಂಚಿಸಿದ್ದೀರಿ!”
"...ಕ್ಷಮಿಸಬೇಕು ಬಾಪೂಜಿ...ಅರ್ಥವಾಗುವದಿಲ್ಲ.”
"ಆ!....... ಅರ್ಥವಾಗುವುದಿಲ್ಲ? ನಾನು ಯಾವುದನ್ನು ನನ್ನ ಜೀವಿತದ
ಧ್ಯೇಯವೆಂದೆಣಿಸಿದ್ದೆನೋ ಅದನ್ನು ನೀವು ಕಡೆಗಣಿಸಿದ್ದೀರಿ. ಯಾವ ಶಾಂತಿಮಯ ಜಗತ್ತಿನ
ಕಲ್ಪನೆಯನ್ನು ನಾನು ಮಾಡುತ್ತಿದ್ದೆನೋ ಅದನ್ನು ಮಣ್ಣು ಗೂಡಿಸಿದ್ದೀರಿ...."