ಪುಟ:KELAVU SANNA KATHEGALU.pdf/೩೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

"ಎಣ್ಣೆ! ಚಿಮಿಣಿ ಎಣ್ಣೆ!"

9


ತ್ತಿದ್ದ. ಸೋಮ ಅಂಗಡಿಕಾರನಾದಾಗಿನಿಂದಲೂ ರಾಯರ ಪಡಸಾಲೆಯ
ಖಾಯಂ ಗಿರಾಕಿ. ನಗದು ಹಣ ಪಡೆದು ಸಾಮಾನು ಕೊಳ್ಳುತ್ತಿದ್ದ ಸೋಮ
ರಾಯರಿಗೆ ಇಷ್ಟನಾದ ವ್ಯಕ್ತಿ. ಅವನೊಡನೆ ನಯವಾಗಿ ಮಾತನಾಡುತ್ತಿದ್ದರು.
ಆ ದೊಡ್ಡ ಅಂಗಡಿಯ ರಾಯರು ತನಗೆ ತೋರುತ್ತಿದ್ದ ಗೌರವದಿಂದ ಸೋಮ ಸಂತೃಪ್ತ.
ಯುದ್ಧ ಯುದ್ದ ಎಂದೆಲ್ಲ ಜನರು ಹೇಳುತ್ತಿದ್ದರು. ಅದೇನೆಂದು ತಿಳಿದು
ಕೊಳ್ಳಲು ಸೋಮ ಯತ್ನಿಸುತ್ತಿದ್ದ. ಆದರೆ, ತಲೆಗೆ ಒಂದೂ ಹೋಗದು.
ಒಬ್ಬರು ಇನ್ನೊಬ್ಬರ ಮೇಲೆ ಯುದ್ಧ ಹೂಡುವುದಾದರೂ ಯಾಕೆ? ಅದು
ಅವನಿಗೆ ಬಗೆಹರಿಯದ ಪ್ರಶ್ನೆ.ಆದರೂ, ದಿನಾಲೂ ತನ್ನ ಅಂಗಡಿಯನ್ನು
ಹಾದುಹೋಗುತ್ತ ಎರಡು ಪೈಗಳ ಬೀಡಿ ಕೊಳ್ಳುತ್ತಿದ್ದ ಅಕ್ಕಸಾಲಿಗರ ಜವ್ವನಿಗ
ರಾಮಪ್ಪನೊಡನೆ, ಯುದ್ಧದ ಬಗೆಗೆ ಸೋಮ ಪ್ರಶ್ನೆ ಕೇಳದ ದಿನವಿಲ್ಲ. ಅನು
ದಿನದ ವೃತ್ತಾಂತವೇನೂ ಅವನಿಗೆ ಬೇಕಾಗಿರಲಿಲ್ಲ. ಯುದ್ಧದ ಅಂತ್ಯ ಏನಾ
ಗುವುದು? ಮಂಗಳೂರಿಗೆ ವೈರಿಗಳು ಬರುವರೊ? ದವಸಧಾನ್ಯಗಳ ಏರಿದ ಬೆಲೆ
ತಗ್ಗುವುದೊ?
ಊರಿನಲ್ಲಿ ಜಿನಸಿನ ಅಂಗಡಿಗಳ ಲೂಟಿ ನಡೆದು ಅಕ್ಕಿಮುಡಿಗಳು ಸೂರೆ
ಯಾದಾಗ, ರಾಯರು ಹೆದರಿದರು. ಅವರು ಬಾಗಿಲು ಮುಚ್ಚಿದರು.
ಆಗ ಸೋಮ ಹೇಳಿದ:
“ಬರಲಿ ನೋಡುವ, ನಾನಿದ್ದೇನೆ, ನಿಮ್ಮ ಭಂಡಸಾಲೆಯಿಂದ ಒಂದು
ಕಾಳು ಕೂಡ ಮಿಸುಕದ ಹಾಗೆ ನೋಡಿಕೊಳ್ಳುತ್ತೇನೆ.ಲುಚ್ಚರು! ದರೋಡೆ
ಗಾರರು! ಮೈಮುರಿದು ದುಡಿಯುವುದಕ್ಕೆ ಇವರಿಗೆ ರೋಗ!”
ರಾಯರ ಭಂಡಸಾಲೆ ಲೂಟಿಯಾಗಲಿಲ್ಲ.ಸೋಮನಂತಹ ಧೈರ್ಯವಂತ
ಹತ್ತಿರ ಇರುವನೆಂದು ಅವರು ಸಮಾಧಾನ ತಳೆದರು.
ದವಸಧಾನ್ಯಗಳ ಎಣ್ಣೆ ಜಿನಸುಗಳ ಬೆಲೆ ಏರುತ್ತ ಸಾಗಿತ್ತು.ವ್ಯಾಪಾರಿ
ಗಳೆಲ್ಲ ಬಡವರನ್ನು ಸುಲಿಯುತ್ತಿದ್ದಾರೆ ಎಂದು ಅಕ್ಕಸಾಲಿಗ ಹೇಳುತ್ತಿದ್ದ.
“ಛೆ! ಛೆ! ಹಾಗೂ ಉಂಟೆ?” ಎಂದು ಉತ್ತರಿಸುತ್ತಿದ್ದ ಸೋಮ.
ರಾಯರಂತಹ ವ್ಯಾಪಾರಿಗಳ ಮೇಲೂ ಆರೋಪವೆ? ಅವರೆಷ್ಟು ಸತ್ಯ
ಸಂಧರು!-ಎಂದುಕೊಳ್ಳುತ್ತಿದ್ದ ಮನಸ್ಸಿನಲ್ಲೆ.

2