ಪುಟ:KELAVU SANNA KATHEGALU.pdf/೩೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ



"ಎಣ್ಣೆ !ಚಿಮಿಣಿ ಎಣ್ಣೆ!”

13

ಮೂರನೆಯ ದಿನ ಅಕ್ಕಸಾಲಿಗ ಹೇಳಿದ:
“ನಾವೆಲ್ಲ ಒಂದಾಗಿ ಅಧಿಕಾರಿಗಳಲ್ಲಿಗೆ ಹೋಗ್ವೇಕು!”

****

ಆ ರಾತ್ರೆ ಕೂಳಿಲ್ಲದೆ ಬೆಳಕಿಲ್ಲದೆ ಇರಬೇಕಾಯಿತು.
ಹಗಲು ವ್ಯಾಪಾರ ಇರಲಿಲ್ಲ.
ರಾತ್ರೆ ಜಡಿಮಳೆ ಬೀಸಿತು, ಮಾಡು ಹಾರಿತು; ಗೋಡೆ ಕುಸಿಯಿತು.
ಬೆಳಗ್ಗೆ ನೋಡುವಾಗ ಮಗುವಿನ ಮೈ ಕೆಂಡದಂತೆ ಕಾದಿತ್ತು. ಸೋಮ ತಲೆ
ಯನ್ನು ಕೆದರಿಕೊಂಡ.. ಕಣ್ಣುಗಳು ಊದಿದ್ದುವು.
“ಅನ್ಯಾಯ!” ಎಂದು ಕೂಗಿದ.
ಎದ್ದು, ಪುನಃ ಅದೇ ಶಬ್ದವನ್ನು ಉಚ್ಛರಿಸಿದ.
ಬರಿದಾಗಿದ್ದ ದೀಪದ ಬುಡ್ಡಿಯನ್ನೆತ್ತಿಕೊಂಡು, ಹೊರಕ್ಕೆ ಧಾವಿಸಿದ.
ನೆಲಗಡಲೆಯ ಡಬ್ಬ ಉರುಳಿತು.
ಉರುಳಲಿ, ನನಗದು ಬೇಡ-ಎಂದುಕೊಂಡ.
ಅವನು ನಡೆದದ್ದು ಊರಿನ ಮೈದಾನಕ್ಕೆ.
ಪೋಲೀಸ್ ಸೂಪರಿಂಟೆಂಡೆಂಟರು ಕವಾಯತು ನೋಡುತ್ತಿದ್ದರು.
ಸೋಮ ಅವರ ಬಳಿಗೆ ಓಡಿ “ಎಣ್ಣೆ!” ಎಂದ.
ಸಾಹೇಬರು ಕ್ಷಣಹೊತ್ತು ಅವನನ್ನು ದಿಟ್ಟಿಸಿದರು.
ಸೋಮ ಅವರ ಮುಖದ ಹತ್ತಿರಕ್ಕೆ ದೀಪದ ಬುಡ್ಡಿಯನ್ನು ನೂಕಿ,
“ಎಣ್ಣೆಕೊಡು!" ಎಂದ.

****

....ಹೋಟಲಿನವರು ಮುಖದ ಮೇಲೆ ಬಿಸಿನೀರೆರಚಿದರೇನೊ. ಬಿಸಿಲಲ್ಲಿ
ಬಿದ್ದಿದ್ದ ಸೋಮನಿಗೆ ಎಚ್ಚರವಾಯಿತು. ಸುತ್ತಲೂ ಪೋಕರಿ ಹುಡುಗರು,
ಒಬ್ಬ ಕೂಗಿದ: "ಎಣ್ಣೆ!" ಹಲವರು ಮಾರ್ದನಿ ಕೊಟ್ಟರು. ಸೋಮ ತನ್ನ
ಕೈಯತ್ತ ನೋಡಿದ. ಜಜ್ಜಿ ಹೋಗಿದ್ದ ದೀಪದ ಬುಡ್ಡಿ ಸಮಿಪದಲ್ಲೇ ಇತ್ತು.
ಸ್ಫೂರ್ತಿಗೊಂಡವನಂತೆ ಸೋಮ , ಆ ಬುಡ್ಡಿಯನ್ನು ಹಿಡಿದೆತ್ತಿ, “ఎణ్ణి!"
ಎಂದು ಕಿರಿಚುತ್ತ ಎದ್ದುನಿಂತ. ಹುಡುಗರು “ಎಣ್ಣೆ!” ಎಂದರು; “ಹುಚ್ಚ!”
ಎಂದರು. ಸೋಮ ಓಡಿದ. ಹುಚ್ಚನಂತೆ ಓಡಿದ.

ಒಂದು ಕಾರು ಬೇರೆ ಬೀದಿಯಿಂದ ಸರಕ್ಕನೆ ತಿರುಗಿ ಬಂದು, ಎದುರಾದ
ಸೋಮನನ್ನು ಚರಂಡಿಗೆ ಎಸೆದು, ನಿಲ್ಲದೆ ಮುಂದಕ್ಕೆ ಧಾವಿಸಿತು. ನಿಂತು
ಹೊರಡುವುದೆಂದರೆ ವೃಥಾ ಪೆಟ್ರೋಲ್ ಖರ್ಚು!

一೧೯೪೨