ಪುಟ:KELAVU SANNA KATHEGALU.pdf/೪೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ರಕ್ತ ಸರೋವರ 23

    ಎಪ್ಪತ್ತಾರು ಕಂಠಗಳೂ ಒಮ್ಮೆಲೆ ಘೋಷಿಸಿದುವು
    "ಜಿಂದಾಬಾದ್!"
    "ಕಶ್ಮೀರ್ ಬಾಗಿ_"
    "ಜಿಂದಾ ಹೈ!"
    "ಛೋಡ್‍ದೋ"
    "ಇಂಕ್ವಿಲಾಬ್!_"
    "ಜಿಂದಾಬಾದ್"
    ಢಂ_ಢಂ_ಢಂ_ಎಂದು ಹತ್ತಾರು ಬಂದೂಕುಗಳಿಂದ  ಗುಂಡು  ಹಾರಿ

ಬಂತು. ಮುಂದಿದ್ದ ದೋಣಿಯಿಂದೋಬ್ಬ ಕಾಶ್ಮೀರದ ರಾಷ್ಟ್ರೀಯ ಗೀತೆಯನ್ನು ಹಾಡತೊಡಗಿದ. ಢಂ-ಢಂ-ತಾಳ ಮೇಳದೊಡನೆ ಆ ಗೀತ ಮಹಾ ಸಂಗೀತ ವಾಯಿತು. ಶೇಕ ಪಲ್ಲವಿ ಹಾಡಿದ; ಕಿಶನ್ ಪಲ್ಲವಿ ಹಾಡಿದ. ಎಲ್ಲರೂ ಹಾಡಿದರು. "ಸ್ವಾತಂತ್ರ್ಯ ಸಮತೆಯ ನೂತನ ಕಾಶ್ಮೀರವನ್ನು ಕಟ್ಟುವ ವೀರರು ನಾವ್! ವೀರರು ನಾವ್! ಸೋಲನರಿಯದ ಸಿಂಹಹೃದಯದ ವೀರರು ನಾವ್ ವೀರರು ನಾವ್!"

   ಮತ್ತೆ ಅದೇ ಎಪ್ಪತ್ತಾರು ಕಂಠಗಳಿಂದ ರಣ ಗರ್ಜನೆ “ಇಂಕ್ವಿಲಾಬ್-

ಜಿಂದಾಬಾದ್!"

   ಎಪ್ಪತ್ತಾರೂ, ಎಪ್ಪತ್ನನಾಲ್ಕೊ,ಎಪ್ಪತ್ತೆರಡೊ!  ಬಲಿದಾನಕ್ಕೆ ಆರಂಬ

ವಾಗಿತ್ತು. ಆಚೆ ದಡದ ಸಿಪಾಯಿಗಳೆಲ್ಲ ಎಚ್ಚತ್ತಿದ್ದರು. ರಾಜರ ಸುಖ ಸ್ವಪ್ನ ಕಡಿದು ಹೋಯಿತು. ಬಾಹುಬಲದ ವಜ್ರಹೃದಯದ ಸ್ವಾತಂತ್ರ್ಯಯೋಧ ರೆಡೆಗೆ ಮರ್ದನದ ಶೋಷಣೆಯ ಕ್ರೂರ ಗುಂಡುಗಳು ಧಾವಿಸಿಬಂದವು.

    ದೋಣಿಗಳು ಮುಂದೆ ಸಾಗುತ್ತಲೆ ಹೋದುವು.   ಜಯಘೋಷ ನಡೆ

ಯುತ್ತಲೇ ಇತ್ತು. ಆ ಯುವಕ ಹಾಡುತ್ತಲೇ ಇದ್ದ. ಶೇಕ-ಕಿಶನರು ಪಲ್ಲವಿಗೆ ದನಿ ಕೂಡಿಸುತ್ತಲೆ ಇದ್ದರು.

   ಒಂದು ದೋಣಿಗೆ ಗುಂಡು ತಗಲಿ ತೂತು ಬಿದ್ದು  ಜನ  ನೀರುಪಾಲಾ

ದರು. ಸರೋವರಕ್ಕೆ ಬಿದ್ದ ಜನ ಈಸಾಡಿದರು. ಇನ್ನೊಂದು ದೋಣಿ ದಡದ ತೀರಕ್ಕೆ ಬಂತು. ಆ ಇರುಳಲ್ಲಿ ಬಯನೆಟುಗಳು ಬೇಟೆ ಸಿಗದೆ ಒಂದಕ್ಕೊಂದು ತಗಲಿದುವು.

   ದೋಣಿಗಳಲ್ಲಿದ್ದ    ಜನ  ನೋಡುತ್ತಲೇ   ಇದ್ದರು.   ವಿದ್ಯುದ್ದೀಪದ