ಪುಟ:KELAVU SANNA KATHEGALU.pdf/೬೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

38

ನಿರಂಜನ: ಕೆಲವು ಸಣ್ಣ ಕಥೆಗಳು

ಹುಡುಗರೋ ಕಾರು ಬಂದಿದ್ದ ವಿಷಯ ಹೇಳುತ್ತಾರೆ. ಅಂತೂ ನಡೆದದ್ದನ್ನು
ತಾನು ಹೇಳಲೇಬೇಕು.
ಮಧ್ಯಾಹ್ನವಾದ ಮೇಲೆ, ತಿರುಕಣ್ಣನ್ ಮೆಲ್ಲನೆ ಈ ವಿಷಯ ಸೌದೆ
ಡಿಪೋದ ವೆಂಕಟಪ್ಪನಿಗೆ ತಿಳಿಸಿ ಸಲಹೆ ಕೇಳಿದ.
“ಅಯ್ಯೋ ಬೆಪ್-ಮಗ್ನೇ... ಇನ್ನೂ ಬತ್ತಾರೆ ಕಣೋ ಒಂದಷ್ಟು
ಜನಾ....ಎಲ್ರೂ ಬೇಡ್ಕೊಂಡು ಬರ್ತಾರೆ. ನನಕ್ಕೊಡಿ ಓಟು ನನಕ್ಕೊಡಿ
ಅಂತ....ಎಲ್ಲಾ ಮೋಸ. ಮಕ್ಳು...”
ತಿರುಕಣ್ಣನಿಗೆ ತುಂಬ ನಿರಾಸೆಯಾಯಿತು.
ಕೇರಿಯವರ ಕಾಟ ತಪ್ಪಿಸಿಕೊಳ್ಳಲು ಆ ಸಂಜೆ ತಡವಾಗಿ ತಿರುಕಣ್ಣ
ವಾಪಸು ಹೋದ. ಬೆಳಗ್ಗೆ ನಡೆದದ್ದು ಅವನ ಮನಶ್ಯಾಂತಿಯನ್ನು ಕದಡಿತ್ತು.
ಅದಕ್ಕೆ ಪರಿಹಾರವಾಗಿ ಅವನು ಆ ಸಂಜೆ ನಾಲ್ಕಾಣೆಯಷ್ಟನ್ನು ಕುಡಿದ;
ಬಿಮ್ಮನೆ ಮುಖ ಮಾಡಿಕೊಂಡು, ನಾಲಿಗೆಯನ್ನು ಬಿಗಿಹಿಡಿದು, ಒಂದು ಸ್ವರ
ವನ್ನೂ ಹೊರಡಿಸದೆ, ಬೀದಿಯುದ್ದಕ್ಕೂ ನಡೆದ.
ಮರುದಿನ ಭಾನುವಾರ ಅವನ ಎಲ್ಲ ಭ್ರಮೆಯೂ ಹೊರಟು
ಹೋಯಿತು. ಕೇರಿಯ ಬೇರೆ ನಾಲ್ಕಾರು ಜನರಿಗೂ ಅದೇ ನೂರು ರೂಪಾ
ಯಿಯ ಆಶ್ವಾಸನೆ ದೊರೆತಿತ್ತಂತೆ!
“ಎಲ್ಲಾ ಮೋಸ! ಥೂ!” ಎಂದು ತಿರುಕಣ್ಣನ್ ಉಗುಳಿದ.
ಅನಂತರದ ದಿನಗಳೆಲ್ಲ ತಮಾಷೆಯಾಗಿದ್ದುವು. ಆ ಕಾರುಗಳ ಓಡಾಟ
ವೇನು! ಗಟ್ಟಿ ಸ್ವರಗಳ ಕಿರಿಚಾಟವೇನು! ಆ ಅಂಗಲಾಚಿ ಬೇಡುವ ಸೌಜನ್ಯ
ವೇನು!
ಒಂದು ಮರವನ್ನೇ ಕಡಿದು ಲಾರಿಯೊಳಗೆ ಇರಿಸಿಕೊಂಡು “ಮರಕ್ಕೆ
ಓಟು ಕೊಡಿ!” ಎನ್ನುತ್ತಿದ್ದರು.
ಇನ್ನೊಂದು ವ್ಯಾನಿನ ಮೇಲೆ ಒಂದು ಗುಡಿಸಲನ್ನೇ ಕಟ್ಟಿದ್ದರು,
“ಗುಡಿಸಲು ನಮ್ಮ ಗುರುತು, ನಮ್ಮ ಗುರುತು ಗುಡಿಸಲು” ಎನ್ನುತ್ತಿದ್ದರು.
ಕೇರಿಯ ಮಕ್ಕಳಂತೂ ದಿನವೂ ಧೂಳೆಬ್ಬಿಸುತ್ತಿದ್ದುವು: “ಯಾರಿಗೆ
ಓತ್-ಮರಕ್ಕೆ ನೇತ್_ಕೋತಿಗೆ ಓತ್-ಓತ್ ಫಾ ಕಾಂಗ್ ಲೇಸ್,”....
ಒಬ್ಬ ಕೆಲಸದಾಕೆ ಎಂಬುದನ್ನು ಮರೆತು ತಿರುಕಣ್ಣನ ಮಗಳೂ ಆ
ಹುಡುಗರ ಜತೆ ಸೇರುತ್ತಿದ್ದಳು.
ಹಾಗೇ, ದಿನ ಕಳೆಯಿತು.
ತಿರುಕಣ್ಣನನ್ನು ಕೇಳಿಕೊಂಡು ಬರುತ್ತಿದ್ದ ಜನ ಬಹಳ.