ಪುಟ:KELAVU SANNA KATHEGALU.pdf/೬೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

44

ನಿರಂಜನ: ಕೆಲವು ಸಣ್ಣ ಕಥೆಗಳು

"ಬುಡ್ದಿ"

నాలు ಜನ ತಿರುಕಣ್ಣನನ್ನು ಪಿಸುನುಡಿಯುತ್ತ ಸುತ್ತುವರಿದರು. ಉಳಿದವರು ಹಿಂದೂ ಮುಂದೂ ಓಡಾಡಿದವರು. ಪ್ರತಿಭಟಿಸುವ ಶಕ್ತಿ ಇರಲಿಲ್ಲ ತಿರುಕಣ್ಣನಿಗೆ.ಅವನ ತೆರೆದ ತುಟಿಗಳು ನಗುತ್ತಲೇ ಇದುವು.

ಒಬ್ಬ ಪೋಲೀಸಿನವನು ಬಂದು ತಿರುಕಣ್ಣನನ್ನು ಕೆಂಗಣ್ಣಿನಿಂದ ನೋಡಿದ.

“ಏನಾರ್? ಗಲಾಟೆ ಮಾಡ್ತಿದಾನಾ? ಇಲ್ಕೊಡಿ....... ಲಾಕಪ್ಪಿಗೆ ಸೇರಿಸ್ತೀನಿ."

ತಿರುಕಣ್ಣನ ಮುಖ ಬಿಳಿಚಿಕೊಂಡಿತು. ಆದರೆ ಓಟಿನವರು ಪೋಲೀಸಿನವರನ್ನು ದಿಗ್ಭ್ರಮೆಗೊಳಿಸಿದರು. "ಇನ್ನೊಂದೇ ನಿಮಿಶ ಉಳಿದಿರೋದು. ಹೀಗೆ ಬನ್ನಿ.." "೯ಎ ೦೦೬೮೩ ತಿರುಕಣ್ಣನ್! ೯ಎ ೦೦೬೮೪ ಹೆಂಡತಿ ಆರೊಗ್ಯಮ್ಮ ಸತ್ಹೋಗಿದಾಳೆ."


ತಿರುಕಣ್ಣನಿಗೆ ಬವಳಿ ಬಂತು. ಕೈಕಾಲುಗಳು ಕುಸಿದು ಬೀಳುವ ಹಾಗಾಯಿತು.

ಅಷ್ಟರಲ್ಲೇ-ಗಂಟೆ ಬಾರಿಸಿದರು.

"ಅನ್ಯಾಯವಾಗಿ ನಮ್ಮ ಒಂದು ಓಟು, ತಿರುಕಣ್ಣನ ಓಟು ವ್ಯರ್ಥವಾಯಿತಲ್ಲ."

“ಅನ್ಯಾಯ! ಅನ್ಯಾಯ!”

ಚೀತರಿಸಿಕೊಂಡು ತಿರುಕಣ್ಣ ಹೇಳಿದ:

“ಓಗ್ಲೇಳಿ..ಅನಾಯ ಏನ್ಬಂತು?” 

ದೊಡ್ಡ ಮನುಷ್ಯರೊಬ್ಬರು ರೇಗಿಕೊಂಡು ಕೂಗಿದರು:

“ನಿನಗೇನು ಗೊತ್ತೊ ಮುಠಾಳ? ಒಂದು ಓಟಿನ ಬೆಲೆ ನಿನಗೇನು ಗೊತ್ತು?”

ಇನ್ನೊಬ್ನರು ಬಂದು ಕೇಳಿದರು:

“ತಿರುಕಣ್ಣನ್ ಓಟು ಪೋಲು ಮಾಡಿದರೆ?

ಯಾರೋ ಉತ್ತರ ಕೊಟ್ಟರು:

"ಇಲ್ಲ, ತಿರುಕನ್ಣ ಇ ಸಾರಿ ಓಟು 'ಪೋಲು' ಮಾಡಲಿಲ್ಲ.