ಪುಟ:KELAVU SANNA KATHEGALU.pdf/೭೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಒಂದೇ ನಾಣ್ಯದ ಎರಡು ಮೈ

49

ತಗಲಿದ ಅಂಗೈಯನ್ನು ಎತ್ತಿ ನೋಡಿದೆ. ಧೂಳು ಮೆತ್ತಿಕೊಂಡಿತ್ತು. ಚಾದರವೂ
ಕೆಂಪು, ಪ್ರವಾಸದಿಂದ ಕಂಗೆಟ್ಟಿದ್ದ ಬಿಳಿಯ ಪೋಷಾಕೂ ಕೆಂಪು. ನನ್ನ ಸ್ಥಿತಿ
ಕಂಡು ನನಗೇ ನಗು ಬಂತು.

ಅಲ್ಲಿದ್ದ ಕೈದಿಗಳಲ್ಲೊಬ್ಬ ಕೇಳಿದ:
“ಯಾವೂರು?”
ಆ ಯುವಕರಿಗೆಲ್ಲಾ ಆತನೆ ಹಿರಿಯನೆಂಬುದು ಸ್ಪಷ್ಟವಾಗಿತ್ತು.
ನಾನು ಧ್ವನಿಯಲ್ಲಿ ಆತ್ಮೀಯತೆಯನ್ನು ತುಂಬಲು ಯತ್ನಿಸುತ್ತ,
“ಮೈಸೂರು ಕಡೆ” ಎಂದೆ.
ಇನ್ನೊಂದು ಪ್ರಶ್ನೆ ಬಂತು:
“ಯಾವ ಕೇಸು?”
ಅದನ್ನು ತಿಳಿಯ ಹೇಳುವುದು ಸುಲಭವಾಗಿರಲಿಲ್ಲ. ಆದರೂ ಪ್ರಯತ್ನ
ಪಟ್ಟೆ. ಏನೋ ಬರೆದು ಸರಕಾರದ ಕೈದಿಯಾದೆನೆನ್ನುವುದನ್ನು ಅವರು ನಂಬು
ವುದು ಕಷ್ಟವಾಗಿತ್ತು.
"ಅಂತೂ ನೀವು ಸರಕಾರದ ವಿರುದ್ಧ ತಾನೆ?” ಎಂದು ಆತ ಕೇಳಿದ.
“ಹೌದು! ಹೌದು!”
“ಹಾಗಾದರೆ, ನಾವೂ ನೀವೂ ಸ್ನೇಹಿತರೇ!”
ಆ ಸ್ನೇಹಿತರು ತಮ್ಮ ಕತೆ ಹೇಳಿದರು.
ಪಾನನಿಷೇಧವಿದ್ದ ಕಾರವಾರ
ಪ್ರದೇಶಕ್ಕೆ ಗೋವಾದಿಂದ ವಿದೇಶೀ ಪಾನೀಯಗಳನ್ನು ಸಾಗಿಸುತ್ತಿದ್ದರೆಂದು ಆ
ಏಳು ಜನರನ್ನೂ ಹಿಡಿದಿದ್ದರಂತೆ.
ಅದು ಗೌರವದ ಕೆಲಸವೆನ್ನುವಂತೆ ಮುಖ್ಯಸ್ಥ ಹೇಳಿದ:
“ಇದೆಲ್ಲಾ ನಮಗೆ ಹೊಸತಲ್ಲ. ನಮ್ಮ ನಾಯಕರಿದ್ದಾರೆ. ಬಂದು
ಒಂದು ಮಾತು ಹೇಳಿದರೆ ಸಾಕು. ಕೇಸು ಬಿಟ್ಹೋಗ್ತದೆ. ಹಿಂದೆಯೂ ಎಷ್ಟೋ
ಸಲ...”
ಅವರ ನಾಯಕರ ಪ್ರತಾಪದ ಕಥೆ ಸ್ವಾರಸ್ಯಪೂರ್ಣವಾಗಿತ್ತು.
"ಅವರ ಹೆಸರೇನು?” ಎಂದು ನಾನು ಕೇಳಿದೆ.
“ನಾಯಕ್ ಅನ್ನೋದೆ ಅವರ ಹೆಸರು” ಎಂದ ಆತ...ಆದರೆ ಅವನ
ಕಣ್ಣಂಚಿನಲ್ಲಿ ತುಂಟತನದ ನಗೆಯನ್ನು ಕಂಡಂತಾಗಿ, ನನಗೆ ಬೇಸರವೆನಿಸಿತು.
ಪ್ರಭಾವಶಾಲಿಗಳಾದ ಸಮರ್ಥರ ಕಥೆ ಯಾರಿಗೆ ತಿಳಿಯದು? ಇವರ
ನಾಯಕನೂ ಅಂತಹ ವ್ಯಕ್ತಿಯಾಗಿರಬಹುದು ಎಂದುಕೊಂಡೆ ನಾನು. ಎತ್ತರದ
ದೇಹ, ಅಗಲವಾದ ಎದೆ, ನೀಳವಾದ ಬಾಹು... 7