ಪುಟ:KELAVU SANNA KATHEGALU.pdf/೭೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಒಂದೇ ನಾಣ್ಯದ ಎರಡು ಮೈ

53

ಥೂ-ನೆನೆಸ್ಕೊಂಡ್ರೆ ಮೈ ಉರಿಯುತ್ತೆ."

ಅಷ್ಟು ಹೇಳಿ, "ಹೂಂ' ಎಂದು ನಿಟ್ಟುಸಿರುಬಿಟ್ಟು, ಅವರು ಸುಮ್ಮನಾದರು.

ಇಬ್ಬರನ್ನೂ ಬೇಸರದ ಮಹಾ ಸಾಗರದಲ್ಲಿ ಅದ್ದಿತು ಆ ಮೌನ. ನಡೆದು ಸಾಕಾಗಿ ಮರಳದಿಣ್ಣೆಯ ಮೇಲೆ ಕುಳಿತೆವು. ಸವಿೂಪದಲ್ಲೆ ಎಳೆಯ ಹುಡುಗರು ಆಟನಾಡುತ್ತಿದ್ದರು. ಒದ್ದೆ ಮರಳನ್ನು ತಟ್ಟಿ ಕಟ್ಟುತ್ತಿದ್ದ ಗೂಡು ಮನೆಗಳು. ಬೇರೇನೂ ಮಾಡಲಾಗದಿದ್ದರೂ ಆ ಮನೆಗಳನ್ನು ಕಬಳಿಸಿ, ಮಕ್ಕಳನ್ನು ಹೆದರಿಸಿ, ಪಿಸಿ ಪಿಸಿ ಪಿಸಿ ಎಂದು ನಗುತ್ತ ಹಿಂತಿರುಗುತ್ತಿದ್ದ ತೆರೆಗಳು. ಪುನಃ ಮಕ್ಕಳ ಯತ್ನ. ಪುನಃ ಕಣ್ಣುಮುಚ್ಚಾಲೆ...

ಅಟ್ಟಹಾಸ ಮಾಡುತ್ತ, ಬಲು ದೂರದಿಂದಲೇ ಗರ್ಜಿಸುತ್ತ ತೆರೆಯೊಂದು ಬಂತು. ಆ ಸದ್ದನ್ನು ಭೇದಿಸಿಕೊಂಡು ಗಟ್ಟಿಯಾದ ಸ್ವರದಲ್ಲಿ ನನ್ನ ಸ್ನೇಹಿತರೆಂದರು:

“ಗುಂಡಾಗಳ್ನ ಬಾಡ್ಗೆಗೆ ನೇಮಿಸ್ಕೊಂಡಿದಾರೆ. ಪೋಲಿ ಅಲೆಯೋ ಜನಕೈಲ್ಲ, ಕಳ್ಳಕಾಕರಿಗೆಲ್ಲ, ಈಗ ಕೆಲಸ. ಏನ್ಸೇಳ್ತೀರಾ....?

ಮಾರನೆಯ ದಿನ ಸ್ನೇಹಿತರಿಗೆ ಬಿಡುವಿತ್ತು. ನದಿ ದಾಟಿ ಸುತ್ತಾಡಿ ಬರೋಣವೆಂದು ನಾವು ಹೊರಟಿವು.

“ಕೋಡಿಬಾಗದ ಈ ದಡದಲ್ಲಿ ದೋಣಿ ಇರಲಿಲ್ಲ. ಆಚೆಯ ದಡದಿಂದ ಅದೇ ತಾನೆ ಅದು ಹೊರಡುತ್ತಿತ್ತು.”

ನಮ್ಮ ಸಮೀಪದಲ್ಲೆ ಹತ್ತು ಜನ ಸಶಸ್ತ್ರ ಪೋಲೀಸರು ದಡದ ರಕ್ಷಣೆಗೆ ನಿಂತಿದ್ದರು.

“ಇವತ್ತು ಸತ್ಯಾಗ್ರಹ ಇದೆಯೇನಪ್ಪಾ?” ಎಂದರು ನನ್ನ ಸ್ನೇಹಿತರು. 'ಹೂಂ ಸ್ವಾಮೀ, ಮಧ್ಯ್ಯಾಹ್ನ ಒಂದು ತಂಡ ಹೊರಡುತ್ತಂತೆ.'

ಆ ಕ್ಷಣವೇ ಅವರಲ್ಲೊಬ್ಬ ಪೋಲೀಸಿನನನು ನನಗೆ ಸಲಾಂ ಮಾಡಿದ. ಬಡಕಲು ಮುಖದ ಮೇಲಿನ ನಿರ್ದುಷ್ಟವಾದ ನಗೆ. ಆತನೇ-ವರ್ಷಗಳ ಹಿಂದೆ ಬಂದೂಕು ಹಿಡಿದು ನಾವಿದ್ದ ಲಾಕಪ್ಟಿನೆದುರು ಕಾವಲು ಕುಳಿತಿದ್ದ ವ್ಯಕ್ತಿ. ಅನಂತರವೂ ವಿಚಾರಣೆಗೆಂದು ಕಾರವಾರಕ್ಕೆ ಬರುತ್ತಿದ್ದಾಗಲೆಲ್ಲ ಅವನನ್ನು ಕಂಡಿದ್ದೆ. ಆತ ಕೇಳಿದ:

“ಆರೋಗ್ಯವಾಗಿದೀರಾ ಸ್ವಾಮಿ?”

“ಇಷ್ಟರ ಮಟ್ಟಗಿದೀನಪ್ಪ-ನೀವೆಲ್ಲಾ ಜೆನ್ನಾಗಿದ್ದೀರೋ?"

ಆತ ಪುನಃ ಹಲ್ಲುಕಿರಿದ.