ಪುಟ:KELAVU SANNA KATHEGALU.pdf/೭೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

54

ನಿರಂಜನ: ಕೆಲವು ಸಣ್ಣ ಕಥೆಗಳು


ದೋಣಿ ಇನ್ನೂ ಎಷ್ಟೋ ದೂರದಲ್ಲಿತ್ತೆಂದು ಆ ಪೋಲೀಸನೊಡನೆ ನಾನು ಮಾತನಾಡುತ್ತ ನಿಂತೆ.

ಗಂಭೀರ ಧ್ವನಿಯಲ್ಲಿ ಪ್ರತಿಯೊಂದು ಮಾತನ್ನೂ ತೂಗಿ ತೂಗಿ ಆತನೆಂದ:

“ಯುದ್ಧ ಶುರುವಾದರೂ ಆಗ್ಬಹುದು."

ನನಗೆ ನಗು ಬಂತು. ತನ್ನ ಮಾತಿಗೆ ನಾನು ಬೆಲೆ ಕೊಡಲಿಲ್ಲವೆಂದು ಆತನಿಗೆ ಬೇಸರವೇನೂ ಆಗಲಿಲ್ಲ. ಯೋಚಿಸುತ್ತಿದ್ದಂತೆ ಹಣೆಯನ್ನು ನೆರಿಗೆ ಕಟ್ಟುತ್ತ ಆತ ಹೇಳಿದ.

“ಬಹಳ ಕಷ್ಟ. ಅವರು ಸಿದ್ಧವಾಗಿದಾರೆ. ಎಂಥೆಂಥೋರೆಲ್ಲ-ನೋಡಿ, ಆ ನಾಯಕ. ಹ್ಞಾ! ನಿಮಗೆ ಆವತ್ತು ಹೇಳಿರ್‍ಲಿಲ್ವೆ ಅವನ ವಿಷಯ?"

ನನ್ನ ಕುಶೂಹಲ ಕೆರಳಿತು.

“ಯಾರು? ಆ ನಾಯಕ? ಟೋನಿ? ಏನಾಯ್ತು?”

"ನಿಮಗೆ ಗೊತ್ತೇ ಇಲ್ವೇನು? ಈ ಭಾಗದಲ್ಲೆಲ್ಲ ಆಚೆ ಕಡೆ ಆವನದೇ ರಕ್ಷಣೆ. ಈಗ ಕಮಾಂಡರ್‌ ಆಗಿದಾನೆ. ಆ ನಾಯಿಗಳಿಗೆಲ್ಲಾ ಯೂನಿಫಾರ್ಮ್ ಕೊಟ್ಟಿದಾನೆ. ಬಂದೂಕು ಸಹ. ಕಳ್ಳ ಸಾಮಾನು ಸಾಗ್ಸೋ ಕೆಲಸ ಮಾಡಿ ಅವನ ಕೂಳು ತಿನ್ತಿದ್ದೋರೆಲ್ಲ ಈಗ ಸೈನಿಕರು. ಹ್ಯಾಗಿದೆ? ಹ್ಞೆ? ಅಯ್ಯೋ!"

ಈ ಮಾತುತತೆಗೆ ವಿಸ್ಮಯದಿಂದಲೂ ಆಸಕ್ತಿಯಿಂದಲೂ *ಕಿವಿಗೊಡುತ್ತಿದ್ದ ನನ್ನ ಸ್ನೇಹಿತರು ಅಂದರು:

“ಅಂತರರಾಷ್ಟ್ರೀಯ ಖದೀಮ ಆ ಟೋನಿ! ಗೋವಾ ವಿಮೋಚನೆಯಾದ್ಮೇಲೆ ಅವನಿಗೂ ಅನ್ನ ಇರೋದಿಲ್ಲ; ಅವನ ಅನ್ನದಾತರಿಗೂ ಇಲ್ಲಿ ಅನ್ನವಿರೋದಿಲ್ಲ...ಅದಕ್ಕೇ ಈಗ ಕಮಾಂಡರ್ ಆಗಿದಾನೆ."

..ದೋಣಿ ಬಂತು__ಉಗಿಯಂತ್ರವಿದ್ದ ದೋಣಿ, ಇತರ ಹಲವರೊಡನೆ ನಾವೂ ಕುಳಿತೆವು. ನನ್ನ ಗೆಳೆಯರು ನಮ್ಮಿಬ್ಬರ ಪರವಾಗಿ ಎರಡಾಣೆ ತೆತ್ತರು.

ಯಾರೋ ಒಬ್ಬರು ಕೊಟ್ಟಿದ್ದ ನಾಣ್ಯ ಸವೆದಿತ್ತೆಂದು ಗದ್ದಲವಾಯಿತು.

ಸವಕಲು ನಾಣ್ಯ__

-ಬಡಕಲಾಗಿ ಕುಸಿದು ಸಾಯುತ್ತಲಿರುವ ಸಾಮ್ರಾಜ್ಞಶಾಹಿಯ ಹಾಗೆ.

ಸೀಮೆ ನಾಯಿಯನ್ನು ಕೈಲಿ ಹಿಡಿದಿದ್ದ ಆ ನಾಯಕನ ಚಿತ್ರ...

ಲೂಟ, ದರೋಡೆ, ಸುಲಿಗೆ ಕಳ್ಳವ್ಯಾಪಾರ; ಲಂಚರುಷುವತ್ತಿನ ರಾಜ್ಯ. ಇದು ಆತನ ಜೀವನದ ಒಂದು ಮುಖ; ಸ್ವಾತಂತ್ರ್ಯ ಶಕ್ತಿಯ ದಮನ