ಪುಟ:KELAVU SANNA KATHEGALU.pdf/೮೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಒಂಟಿ ನಕ್ಷತ್ರ ನಕ್ಕಿತು

61

ಕಡೆಗಳಿಂದ ಬಂದಿದ್ದ ಅಣೆಕಟ್ಟು ನಡುವೆ ಕೂಡಿಕೊಂಡಿತು. ನೀರು ನಿಂತು ಕೆರೆಯಾಯಿತು. ನದಿ ಆಳನಾಯಿತು.

ಆಗ ಬಲ್ಲಿದನಾಗಿದ್ದ ರಾಮನನ್ನು. ಕೆಣಕಿ ಕೇಳಿಜಿ.

“ಅಳ್ಳಿಗಳನ್ನ ಯಾವತ್ತು ಮುಣುಗಿಸ್ತಾರೆ?”

"ಇನ್ನೇನು, ಮುಣುಗೋಗ್ತವೆ.?

“ಉಂ! ಅನುಮಂತರಾಯನ ಗುಡಿಯೊಳಕ್ಕೆ ನೀರು ನುಗ್ಲಿ. ಅಮ್ಯಾಕೆ ಯೋಳ್ತೀನಿ!

ಗುಡಿಯೊಳಕ್ಕೆ ನೀರು ನುಗ್ಗಿತು. ಗುಡಿ ಮುಳುಗಿತು. ಹನುಮಂತರಾಯ ಆಕ್ಷೇಪಿಸಲಿಲ್ಲ. ಕೆರೆ ಸರೋವರವಾಯಿತು. ಸರೋವರ ನೀರಸಾಗರವಾಯಿತು. ದೇವರು ತುಟಿಪಿಟ್ಟಿನ್ನಲಿಲ್ಲ.

ನನ್ನೊಳಗಿನದೇನೋ ಕುಸಿದುಬಿದ್ದಂತಾಯಿತು.

ನಾನು ಕಾಹಿಲೆ ಮಲಗಿದುದು ಆಗಲೇ...

****

ನಿಶ್ಶಕ್ತನಾಗಿ ಎದ್ದ ಬಳಿಕ, ಅಣೆಕಟ್ಟಿನ ಪ್ರಸ್ತಾಸವನ್ನೇ ಹಿರಿಯ ಮಾಡಲಿಲ್ಲ. ಬದುಕಿನಲ್ಲಿ ಆತ ಒಂದಿಷ್ಟಾದರೂ. ಆಸಕ್ತಿ ತೋರಲು ಕಾರಣ, ಅದೇ ಮೊದಲ ಬಾರಿ ಸೊಸೆ ಲಚ್ಚಿಗೆ ನೀರು ನಿಂತುದು. ರಾಮನ ಮುಖದ ಮೇಲೆ ಆಗ ಮೂಡಿದ ಮುಗುಳುನಗೆ, ಕರಿಯ ಕಲ್ಲಿನಲ್ಲೆ ಕೊರೆದ ನಿತ್ಯ ಮಲ್ಲಿಗೆಯಾ ಯಿತು...

ಕಿಂವದಂತಿಯ ಕೀಚಲು ಧ್ವನಿ ಕೇಳಿಸಿತೊಮ್ಮೆ :

“ನರಬಲಿ ಕೊಡ್ತಾರಂತಪ್ಪೋ! ಅಯ್ಯಪ್ಪೊ!"

ಎಳೆಯರು-ಮೂರನೆಯವನಾದ ಒಬ್ಬ ಹುಡುಗ, ಕೊನೆಯ ಸಂತಾನವಾದ ಹುಡುಗಿ-ಮನೆಯಲ್ಲೇ ಬಂದಿಗಳಾದರು. ತುಂಬಿದ ಬಸುರಿ ಲಚ್ಚಿ, ಹಿತ್ತಲು ದಾಟ ಹೊರಕ್ಕಿಳಿಯಲಿಲ್ಲ.

“ಸುಮ್ಸುಮ್ನೆ ಪುಕಾರು ಉಟ್ಟಿಸ್ತಾರೆ" ಎಂದ ರಾಮ.

ಆದರೆ, ಕೆಲಸವೆಲ್ಲ ಮುಗಿಯುತ್ತ ಬಂದಿದ್ದಂತೆ, ಒಂದು ಯಂತ್ರದಡಿಗೆ ಬಿದ್ದ ಇಬ್ಬರು ಆಳುಗಳು ಬಲಿಯಾದಾಗ, ಜನರೆಲ್ಲ ಕ್ಷಣ ಕಾಲ ಉಸಿರು ಬಿಗಿಹಿಡಿದರು...

....................

...ಅಂತೂ ಕೊನೆಗೊಮ್ಮೆ ಬಂದಿತ್ತು ಈ ಫಳಿಗೆ.

ತಂದೆಯನ್ನು ಕರೆದವನು ರಾಮನೇ.