ಈ ಪುಟವನ್ನು ಪರಿಶೀಲಿಸಲಾಗಿದೆ
ಹಮಾಲ ಇಮಾಮ್ಸಾಬಿ
75
ಗಳನ್ನು ಬಳಸುತ್ತ ಸಾಗಿದ್ದ ಕಾಲುದಾರಿಯತ್ತ ಹರಿದುವು. ಮಬ್ಬು ಮಬ್ಬಾಗಿ ಕಾಣಿಸುತ್ತಿತ್ತು ಎಲ್ಲವೂ-ಹಸುರು ನೋಡಿ ನೋಡಿ ನೋವಾಗಲು ಅತ ಎವೆಮುಚ್ಚಿದ. ಗುಡ್ಡದಾಚೆಗಿಂದ ತಪ್ಪಿಸಿಕೊಂಡು ಬಂದ ಸಣ್ಣನೆಯ ತಂಗಾಳಿಯೊಂದು ಬೀಸಿದಂತೆ, ಸ್ವಲ್ಪ ಹಾಯೆನಿಸಿತು. ಯೋಚನೆಗಳ ಪೆಟ್ಟಿಗೆಯ ಮುಚ್ಚಳ ಮುಚ್ಚಿಕೊಂಡಿತು. ತಲೆ ಎದೆಯ ಮೇಲಕ್ಕೆ ತಾಗಿತು, ತೂಕಡಿಕೆ ಬಂತು.
- "ಬಾಬಾ"
- .............
- "ಬಾಬಾ!"
- ಇಮಾಮ್ಸಾಬಿ ಹೌಹಾರಿ ಎದ್ದ.
- "ಏನಾಯ್ತು? ಏನಾಯ್ತು?"
- "ನಾನು ಬಾಬಾ. ಊಟ ತಂದಿದೀನಿ."
- "ಹ್ಞಾ..."
ಬೀಬಿಯ ಬದಲು ಮಗ ಕರೀಮನೇ ಬಂದಿದ್ದ.
ತಂದೆ ಕೇಳಲಿದ್ದ ಪ್ರಶ್ನೆಯನ್ನು ಮೊದಲೇ ಗ್ರಹಿಸುತ್ತ ಅವನೆಂದ:
- "ಅವಳು ನೋವು ತೀನ್ತಾ ಇದ್ದಾಳೆ.
ವೃದ್ಧನ ಎದೆಗುಂಡಿಗೆ ಮತ್ತೆ ಬಲವಾಗಿ ಬಡಿದುಕೊಂಡಿತು.
- "ಎಷ್ಟು ಒತ್ತಾಯ್ತು?”
- "ಅತ್ತು ಗಂಟೆಯಿಂದ."
- "ಸೂಲಗಿತ್ತಿ?"
- "ಬಂದವಳೆ. ಚೊಚ್ಚಲು; ತಡವಾಗ್ಬೌದು ಅಂದ್ಲು."
ಬುತ್ತಿಯನ್ನು ಬಿಚ್ಚುತ್ತ ಇಮಾಮ್ಸಾಬಿಯೆಂದ:
- "ಹೂಂ, ಹೂಂ."
ಬೀಬಿ ಬುತ್ತಿ ತಂದಾಗ, "ಕುಡಿಯುವ ನೀರು" ಎಂದು ಬರೆದ ಗಡಿಗೆಯತ್ತ ಇಮಾಮನೇ ಹೋಗಿ ನೀರು ತರುತ್ತಿದ್ದ. ಇಂದು, ಕಾಲುಗಳಲ್ಲಿ ಬಲವೇ ಇಲ್ಲ-ಎನಿಸಿತು. ಅಲ್ಲದೆ-ಬಳಿಯಲ್ಲೆ ಮಗನಿದ್ದ.
- "ನೀರು ತಾ."
ನಜ್ಜುಗುಜ್ಜಾಗಿದ್ದ 'ಎಲ್ಮಿನಿ' ತಟ್ಟಿಯಲ್ಲಿ ಕರೀಂ ನೀರು ಹಿಡಿದ ತಂದ.
....ಊಟ ಮುಗಿದಾಗ ತಂದೆ ಮಗಳಿಗೆ ಅಂದ:
- "ನೀನು ಮನೇಲೇ ಇರು."