ಪುಟ:Kadaliya Karpoora Preliminary pages.pdf/೧೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

xiii

ಏಳನೆಯ ಮುದ್ರಣ

ನನ್ನ ನಿರೀಕ್ಷೆಯಂತೆ ಅಥವಾ ನನ್ನ ನಿರೀಕ್ಷೆಯನ್ನೂ ಮೀರಿ ಈ ಕಾದಂಬರಿ ಸಹೃದಯರ ಗಮನವನ್ನು ಸೆಳೆಯಿತು. ಮತ್ತೆ ಮತ್ತೆ ಪುನರ್ಮುದ್ರಣಗೊಂಡುದೇ ಇದಕ್ಕೆ ಸಾಕ್ಷಿ. ಪ್ರಥಮ ವಿಶ್ವ ಕನ್ನಡ ಸಮ್ಮೇಳನ ಸಾಹಿತ್ಯ ಮಾಲೆಯ ಮೊದಲ ಪ್ರಕಟಣೆಗಳ ಸಾಲಿನಲ್ಲಿಯೂ ಇದು ಸೇರಿತು. ಆ ಪ್ರತಿಗಳೂ ಮುಗಿದುಹೋಗಿ ಈಗ ಮತ್ತೊಮ್ಮೆ ಇದು ಮುದ್ರಣಗೊಂಡಿದೆ. ಮಿತ್ರರಾದ ಡಿ.ವಿ.ಕೆ. ಮೂರ್ತಿ ಅವರೇ ಇದನ್ನು ಪ್ರಕಟಿಸುತಿದ್ದಾರೆ. ಅವರಿಗೆ ನನ್ನ ಕೃತಜ್ಞತೆಗಳನ್ನು ಅರ್ಪಿಸುತ್ತೇನೆ. ವಾಣೀ ಪ್ರೆಸ್ನ ಮಿತ್ರರು ಇದನ್ನು ಬಹಳ ಅಲ್ಪಕಾಲದಲ್ಲಿ ತುಂಬಾ ಅಚ್ಚುಕಟ್ಟಾಗಿ ಮುದ್ರಿಸಿದ್ದಾರೆ. ಅವರಿಗೂ ನನ್ನ ವಂದನೆಗಳು.

ಸರಸ್ವತಿಪುರಂ, ಮೈಸೂರು

೧೨-೩-೮೬

ಎಚ್. ತಿಪ್ಪೇರುದ್ರಸ್ವಾಮಿ