ಈ ಪುಟವನ್ನು ಪರಿಶೀಲಿಸಲಾಗಿಲ್ಲ.
ಕಲ್ಯಾಣಸ್ವಾಮಿ ಬಳಿಕ ಆತನೇ ಮುಖ್ಯಸ್ಥ. ಅಂತಹ ಮುಖ್ಯಸ್ಥ ತನ್ನವನು; ತನ್ನ ಸೊತ್ತು- ತನ್ನೊಬ್ಬಳ ಸೊತ್ತು.
ಶಾಖ ಏರಿದೆ ಮೈಯ ನರನಾಡಿಗಳು ಧಿಮಿಗುಟ್ಟುದುವು. ಗಹಗಹಿಸಿ
ನಗಬೇಕೆನಿಸಿತು ಆಕೆಗೆ. ಸಂತೋಷದಿಂದ ಅಳಬೇಕೆನಿಸಿತು. ಆತನನ್ನು ಅಗಲಿರುವುದು ಸುಳ್ಳುಮಾತು. ಆತ ಯಾವಾಗಲೂ ತನ್ನ ಬಳಿಯಲ್ಲೇ ಇರುವ-ತನ್ನಲ್ಲೇ,
"ನನ್ನ ಚಿನ್ನಾ" ಎಂದ ಪುಟ್ಟಬಸವ. "ಮಳೆಗಾಲದ ವರೆಗೆ ಇರೋದಿಲ್ಲ ನೀವು," ಎಂದಳು ಗಿರಿಜಾ. ಯಾರದೋ ಎನ್ನುವಂತಹ ಸ್ವರ. ಆಕೆಯ ಬಿಸಿಯುಸಿರಿನ ಸ್ಪರ್ಶ ಆತನಿಗಾಯಿತು. ಗೊಗ್ಗರಧ್ವನಿಯಲ್ಲಿ ಪುಟ್ಟಬಸವನೆಂದ: "ಚಿನ್ನಾ!"