ಪುಟ:Kalyaand-asvaami.pdf/೧೨೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.
  • ಕಲ್ಯಾಣಸ್ಸಾ ಮಿಯವರಿಗೆ ಜಯವಾಗಲಿ !"

ಗೌಡ ಮತ್ತೂ ಅಂದ:

  • ಕೊಡಗಿನ ಶ್ರೀ ವೀರರಾಜೇಂದ್ರ ಮಹಾ ಪ್ರಭುಗಳಿಗೆ ಜಯವಾಗಲಿ!"

ಅರಸನ ಹೆಸರನ್ನು ಸರಿಯಾಗಿ ಉಚ್ಚರಿಸುವುದು ಹಲವರಿಗೆ ಶೊಡಕಿನ ದಾಗಿ ತೋರಿತು. ಹೀಗಾಗಿ 'ಜಯವಾಗಲಿ! ಘೋಷದಲ್ಲಿ ಏಕನಾದವಿರ ಲಿಲ್ಲ.

ರಾಮಗೌಡ ಗಟ್ಟಯಾಗಿ ನುಡಿದ:

  • ಎಲ್ಲಿ ಆರತಿ?”
ಅತುರ ಸಂಕೋಚಗಳಿಂದ ಹಿಂದುಮುಂದಾಗುತ್ತ ಸುಮಂಗಲಿಯರಿಬ್ಬರು ಆರತಿ ಬೆಳಗಿದರು.

ಬಳಿಕ ಗೌಡ, ಜನರಿಗೆ ಆಣತಿ ಇತ್ತ;

"ಇನ್ನು ಎಲ್ರೊ ನಿಮ್ಮ ನಿಮ್ಮ ನಿಮ್ಮ ಮನೆಗೆ ಹೋಗಿ:”

ಗುಂಪು ಅತ್ತಿತ್ತ ಚಲಿಸಿತೇ ಹೊರತು, ಜನ ಚೆದರುವ ಲಕ್ಷಣ ತೋರ లిల్ల.

“ಕುದುರೆಗಳಿಗೆ ಆಯಾಸವಾಗಿದ್ದೇಕು,” ಎಂದ ರಾಮಗೌಡ ಎನೋ ಯೋಚಿಸತೊಡಗಿ.

  • ಯಾಕೆ? ಗೌಡರ ಮನೆ ಬಹಳ ದೂರವೆ ?” ಎಂದ ನಂಜಯ್ಯ,

“ ಇಲ್ಲ, ಓ ಇಲ್ಲೇ ಇದೆ, ಮನೆ.”

" ನಡೆಯಿರಿ ಹಾಗಾದರೆ,”

... ಸ್ವಾಮಿಯವರೊಬ್ಬರಾದರೂ ನನ್ನ ಕುದುರೆ ಮೇಲೆ ಕೂತಿರ್ಲಿ.”

" ಒಂದೊ ಬೇಡಿ ಗೌಡರೆ. ನಾನು ನಡಿಬಾರದೊಂತ ಇದೆಯೇನು?' ఎంది ಕಲ್ಯಾಣಸಾಮಿ.

ಅತನ ಕಡೆಯವನೊಬ್ಬ ಕೇಳಿದ,

  • ಪೂರ್ತಿ ಕತ್ತಲಾಯ್ತು, ದೀವಟಿಗೆ ತರಲೆ?”

ಅ ಪ್ರಶ್ನೆಗೆ ನೇರವಾಗಿ ಉತ್ತರಕೊಡದೆ ರಾಮಗೌಡ ಕಲ್ಯಾಣ ಸ್ವಾಮಿಯ ಮುಖಯ ನೋಡಿದ.