ಪುಟ:Kalyaand-asvaami.pdf/೧೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ರೂಪದಲ್ಲಿ ನಾನೊಬ್ಬನೇ ಪುನಃ ಸೃಷ್ಟಿಸಬೇಕೆಂಬ ಹಟ ನನಗಿಲ್ಲ. ಆದರೆ, 'ಕಲ್ಯಾಣಸ್ವಾಮಿ'ಯ ಜತೆಗೆ, ಇವತ್ತಿಗಾಗಿಯೂ ನಾಳೆಗಾಗಿಯೂ ಇನ್ನೂ ಕೆಲವನ್ನು ಬರೆದು, ಗತಕಾಲಕ್ಕೂ ನಮಗೂ ನಡುವೆ ಭದ್ರವಾದ ಕೊಂಡಿಗಳನ್ನು ಬೆಸೆಯಲು ನೆರವಾಗಬೇಕೆಂಬ ಅಪೇಕ್ಷೆ ಮಾತ್ರ ಬಲವಾಗಿದೆ.

ಇತರ ಕೃತಿಗಳ ವಿಷಯದಲ್ಲಿ ಹೇಗೆಯೋ ಹಾಗೆಯೇ ಈ ಕೃತಿಗೆ ಸಂಬಂಧಿಸಿಯೂ ಓದುಗರ ಪ್ರತಿಕ್ರಿಯೆಯನ್ನು ತಿಳಿಯಲು ನಾನು ಕುತೂಹಲಿಯಾಗಿದ್ದೇನೆ.

ಗಣೇಶ ಚತುರ್ಥಿ, ಸೆಪ್ಟೆಂಬರ್, ೧೯೫೬

ವಾಣಿವಿಲಾಸ ಮೊಹಲ್ಲಾ

ಮೈಸೂರು

ನಿರಂಜನ