ಈ ಪುಟವನ್ನು ಪರಿಶೀಲಿಸಲಾಗಿಲ್ಲ.
ಕಲ್ಯಾಣಸ್ವಾಮಿ
೧೯೨
ಬಿಳಿಯವರೇ. ಅವರ ಜತೆಗೆ ಏಳೆಂಟು ಜನ ಈ ಊರಿನವರು-ಚಾಕ ರಿಗೆ." "ಥೂ!"ಎಂದು ಉಗುಳಿದ ಸೊಮಯ್ಯ. ಕಲ್ಯಾಣಸ್ವಾಮಿ ಕೇಳಿದ: "ಎಲ್ಲಿದೆ ಅವರಸೈನ್ಯ?" "ಸೈನ್ಯ ಇದ್ದ ರಲಿನೆ? ಸಿಪಾಯಿಗಳೇಣನೋ ಅರುವತ್ತು ಎಪ್ಪತ್ತು ಜನ ಇರಬೇಕು. ಖಜಾನೆ,ಜೈಲು,ಬಾವುಟ ಗುಡ್ಡಗಳ ರಕ್ಷಣೆ ಮಾಡ್ತಿರಬೇಕು ." "ಸರಿ!" ಎನ್ನುತ್ತ ಕಲ್ಯಾಣಸ್ವಾಮಿ,ಅಸ್ಪಷ್ಟವಾಗಿ ಆಗಲೆ ರೂಪು ಗೊಂಡಿದ್ದ ಯೋಜನೆಯನ್ನು ನಿರ್ದಿಷ್ಟಗೊಳಿಸುತ್ತ ಅನುಜ್ಞೆ ಗಳನ್ನಿತ್ತ : "ರಾಮಗೌಡರೆ!ಐನೂರು ಜನರ ಜತೆ ನೀವು ಸೆರೆಮನೆಯ ಕಡೆಗೆ. ಕೈದಿಗಳನ್ನೆಲ್ಲಾ ಬಿಡುಗಡೆ ಮಾಡಿ!ನಮ್ಮ ಮೂವರು ಬಂದಿಗಳನ್ನು ಅಲ್ಲಿ ರಿಸಿ! ನಂಜಯ್ಯನವರೆ! ಬಂದರಕ್ಕೆ ನೀವು! ಇಂಗ್ಲಿಷಿನವರನ್ನು ಬೆನ್ನ ಟ್ಟೋದು ಎಷ್ಟುರಮಟ್ಟಗೆ ಸಾಧ್ಯ ಅಂತ ಪರಿಶೀಲನೆ ಮಾಡಿ! ಚೆಟ್ಟ-ಕರ್ತು! ನೀವು ಶಸ್ತ್ರಾಗಾರಕ್ಕೆ!ಅದನ್ನು ವಶಪಡಿಸಿಕೊಲಳ್ಳಿ!ಅಣ್ಣಿಗೌಡರೆ! ನಿಮ್ಮ ದಳ ಕಲೆಕ್ಟರ ಕಚೇರಿಗೆ__ಖಜಾನೆಗೆ! ಉಳಿದವರು ಬಂಗರಸರು ಮತ್ತು ನನ್ನ ಜತೆ ಬನ್ನಿ-ಬಾವುಟ ಗುಡ್ಡಕ್ಕೆ! ದೀವಟಗೆಯ ಭಟನೆ-ಬಾವುಟದ ಕರಿ ಯಪ್ಪ!ನಮ್ಮೆದುರು ಮುಂದೆ ಸಾಗಿ!" ಸೈನ್ಯ ಐದು ವಿಭಾಗಗಳಾಗಿ ಐದು ದಿಕ್ಕುಗಳಲ್ಲಿ ಹಂಚಿ ಹೋಯಿತು. ಬಾವುಟ ಗುಡ್ಡದ ಕಡೆಗೆ ಮುಂದುವರಿಯುತ್ತ ಕಲ್ಯಾಣಸ್ವಾಮಿ ಬಂಗರಾಜನಿಗೆಂದ: "ಹೀಗಾಗಬಹುದು ಅನ್ನೋ ಸಂದೇಹ ನನಗಿದ್ದೇ ಇತ್ತು. ಕೊನೆಗೂ ಆ ಜನ ಕೈಗೆ ಸಿಗಲಿಲ್ಲ." "ಅದೇನಿದ್ದರೂ ಮಂಗಳೂರು ಗೆದ್ದಹಾಗಾಯ್ತು." "ನಿಜ. ಆದರೆ ಆ ಜನರಿಗೆ ಉಪ್ಪುನೀರ; ಕುಡಿಸ್ಪೇಕೂಂತ ನಮ್ಮ ವರಿಗಿದ್ದ ಆಸೆ ಈಡೇರಲಿಲ್ಲ." ....ಗುಡ್ಡದ ಮೇಲೆ ಈಸ್ಟ್ ಇಂಡಿಯಾ ಕಂಪೆನಿಯ ಧ್ವಜವನ್ನು ರಕ್ಷಿ ಸುತ್ತ ನಿಂತಿದ್ದ ಇಬ್ಬರು ಸಿಪಾಯಿಗಳಲ್ಲಿ ಒಬ್ಬ, ಏರು ಬರುತಿದ್ದ ಸೇನೆ ಯನ್ನು ಕಾಣುತ್ತಲೆ ಗೊತ್ತು ಗುರಿಯಿಲ್ಲದೆ ಅವರ ಮೇಲೆ ಗುಂಡು ಹಾರಿಸಿದ.