ಪುಟ:Kalyaand-asvaami.pdf/೧೯೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಲ್ಯಾಣಸ್ವಾಮಿ

  ೧೯೨
  ಬಿಳಿಯವರೇ.  ಅವರ ಜತೆಗೆ ಏಳೆಂಟು ಜನ ಈ ಊರಿನವರು-ಚಾಕ
  ರಿಗೆ."
      "ಥೂ!"ಎಂದು ಉಗುಳಿದ ಸೊಮಯ್ಯ.
      ಕಲ್ಯಾಣಸ್ವಾಮಿ ಕೇಳಿದ:
     "ಎಲ್ಲಿದೆ ಅವರಸೈನ್ಯ?"
     "ಸೈನ್ಯ ಇದ್ದ ರಲಿನೆ? ಸಿಪಾಯಿಗಳೇಣನೋ ಅರುವತ್ತು ಎಪ್ಪತ್ತು ಜನ
 ಇರಬೇಕು. ಖಜಾನೆ,ಜೈಲು,ಬಾವುಟ ಗುಡ್ಡಗಳ ರಕ್ಷಣೆ ಮಾಡ್ತಿರಬೇಕು ."
     "ಸರಿ!" ಎನ್ನುತ್ತ ಕಲ್ಯಾಣಸ್ವಾಮಿ,ಅಸ್ಪಷ್ಟವಾಗಿ ಆಗಲೆ ರೂಪು
 ಗೊಂಡಿದ್ದ ಯೋಜನೆಯನ್ನು ನಿರ್ದಿಷ್ಟಗೊಳಿಸುತ್ತ ಅನುಜ್ಞೆ ಗಳನ್ನಿತ್ತ :
     "ರಾಮಗೌಡರೆ!ಐನೂರು ಜನರ ಜತೆ ನೀವು ಸೆರೆಮನೆಯ ಕಡೆಗೆ.
 ಕೈದಿಗಳನ್ನೆಲ್ಲಾ ಬಿಡುಗಡೆ ಮಾಡಿ!ನಮ್ಮ ಮೂವರು ಬಂದಿಗಳನ್ನು ಅಲ್ಲಿ
 ರಿಸಿ! ನಂಜಯ್ಯನವರೆ! ಬಂದರಕ್ಕೆ ನೀವು! ಇಂಗ್ಲಿಷಿನವರನ್ನು ಬೆನ್ನ
 ಟ್ಟೋದು ಎಷ್ಟುರಮಟ್ಟಗೆ ಸಾಧ್ಯ ಅಂತ ಪರಿಶೀಲನೆ ಮಾಡಿ! ಚೆಟ್ಟ-ಕರ್ತು!
 ನೀವು ಶಸ್ತ್ರಾಗಾರಕ್ಕೆ!ಅದನ್ನು ವಶಪಡಿಸಿಕೊಲಳ್ಳಿ!ಅಣ್ಣಿಗೌಡರೆ! ನಿಮ್ಮ
 ದಳ ಕಲೆಕ್ಟರ ಕಚೇರಿಗೆ__ಖಜಾನೆಗೆ! ಉಳಿದವರು ಬಂಗರಸರು ಮತ್ತು ನನ್ನ
 ಜತೆ ಬನ್ನಿ-ಬಾವುಟ ಗುಡ್ಡಕ್ಕೆ! ದೀವಟಗೆಯ ಭಟನೆ-ಬಾವುಟದ ಕರಿ
 ಯಪ್ಪ!ನಮ್ಮೆದುರು ಮುಂದೆ ಸಾಗಿ!"
     ಸೈನ್ಯ ಐದು ವಿಭಾಗಗಳಾಗಿ ಐದು ದಿಕ್ಕುಗಳಲ್ಲಿ ಹಂಚಿ ಹೋಯಿತು.
     ಬಾವುಟ ಗುಡ್ಡದ ಕಡೆಗೆ   ಮುಂದುವರಿಯುತ್ತ   ಕಲ್ಯಾಣಸ್ವಾಮಿ
     ಬಂಗರಾಜನಿಗೆಂದ:
        "ಹೀಗಾಗಬಹುದು ಅನ್ನೋ ಸಂದೇಹ ನನಗಿದ್ದೇ ಇತ್ತು. ಕೊನೆಗೂ
     ಆ ಜನ ಕೈಗೆ ಸಿಗಲಿಲ್ಲ."
         "ಅದೇನಿದ್ದರೂ ಮಂಗಳೂರು ಗೆದ್ದಹಾಗಾಯ್ತು."
         "ನಿಜ.  ಆದರೆ ಆ ಜನರಿಗೆ ಉಪ್ಪುನೀರ; ಕುಡಿಸ್ಪೇಕೂಂತ ನಮ್ಮ
    ವರಿಗಿದ್ದ ಆಸೆ ಈಡೇರಲಿಲ್ಲ."
       ....ಗುಡ್ಡದ ಮೇಲೆ ಈಸ್ಟ್ ಇಂಡಿಯಾ ಕಂಪೆನಿಯ ಧ್ವಜವನ್ನು ರಕ್ಷಿ
    ಸುತ್ತ ನಿಂತಿದ್ದ ಇಬ್ಬರು ಸಿಪಾಯಿಗಳಲ್ಲಿ ಒಬ್ಬ, ಏರು ಬರುತಿದ್ದ ಸೇನೆ
    ಯನ್ನು ಕಾಣುತ್ತಲೆ ಗೊತ್ತು ಗುರಿಯಿಲ್ಲದೆ ಅವರ ಮೇಲೆ ಗುಂಡು ಹಾರಿಸಿದ.