ಈ ಪುಟವನ್ನು ಪರಿಶೀಲಿಸಲಾಗಿಲ್ಲ.
೧೯೮ ಕಲ್ಯಾಣಸ್ವಾಮಿ
ಕಲ್ಯಾಣಸ್ವಾಮಿ ಮುಗುಳುನಕ್ಕು ಹೇಳಿದ: "ನಾವು ಅಭಯ ಒದಗಿಸ್ಬೇಕು,ಅಲ್ಲವೆ?" "ಹೌದು." "ಆಗಲಿ." ಕಮ್ತಿ ತನ್ನೊಡನೆ ಬಂದಿದ್ದ ಚಾಕರರನ್ನು ಕರೆದ. ಆ ಚಾಕರರು ಹೊತ್ತು ತಂದಿದ್ದ ಹರಿವಾಣಗಳು ಒಳಗೆ ಬಂದುವು. ಹೊರಿಸಿದ್ದ ರೇಶಿಮೆಯ ವಸ್ತ್ರವನ್ನು ತೆಗೆದೊಡನೆ ನೋಡುತ್ತಿದ್ದವರ ಕಣ್ಣುಗಳು ಕೋರೈಸಿದುವು; ನವರತ್ನ ಖಚಿತ ಆಭರಣಗಳು,-ಹಾರ,ಉಂಗುರ,-ಆಮೂಲ್ಯ ವಜ್ರದ ಹರಳುಗಳು,ಪೀತಾಂಬರಗಳು; ಒಬ್ಬೊಬ್ಬ ಪ್ರಮುಕ ಸಾಹುಕಾರನಿಂದಲೂ ಒಂದೊಂದು ಸಾವಿರ ಹೊನ್ನು.... ಕಲ್ಯಾಣಸ್ವಾಮಿ ಕೇಳಿದ: "ಇದೇನು ಕಮ್ತಿಯವರೆ?", "ಇದು ನಮ್ಮ ಅಲ್ಪಕಾಣಿಕೆ ತಮಗೆ." "ನನಗೆ? ರಾಜ್ಯಕ್ಕೆ ಅನ್ನಿ;ರಾಜ್ಯದ ಬೊಕ್ಕಸಕ್ಕೆ." "ರಾಜ್ಯದ ಬೊಕ್ಕಸಕ್ಕೆ." "ಒಳ್ಳೇದು. ಚಚ್ರಿಸಬೇಕಾದ ವಿಷಯವೇನಾದರು ಇದ್ದಾಗ ನಿಮ್ಮನ್ನು ಬರಮಾಡಿಕೊಳ್ತೀವಿ.ಇನ್ನು ನೀವು ಹೋಗಬಹುದು." ವ್ಯಕ್ತಿ, ಸಮರ್ಥನೇ-ಎಂಬುದನ್ನು ಮನದಟ್ಟು ಮಾಡಿಕೊಂಡು, ವತ್ರಕರ ನಿಯೋಗ ಹಿಂತಿರುಗಿತು. ....ಸಂಜೆ ಕರಿಯಪ್ಪ ಅರೆಬೆತ್ತಲೆಯಾಗಿದ್ದ ಇಬ್ಬರನ್ನು ಹಿಡಿದು ತಂದು ಕಲ್ಯಣಸ್ವಾಮಿಯ ಬಳಿಗೆ ಒಯ್ದ. ಆಡಳಿತದ ಸಮಸ್ಯೆಗಳನ್ನು
ಸಹೋದ್ಯೋಗಿಗಳ ಜತೆ ಚಚ್ರಿಸುತ್ತ ಕುಳಿತಿದ್ದ ಕಲ್ಯಾಣಸ್ವಾಮಿ ತಲೆಯೆತ್ತಿ ಕೇಳಿದ:
"ಯಾರಿವನು? ಏನು ಸಮಾಚಾರ?" "ಇವರು ಸುಬ್ರಾಯ ಹೆಗ್ಗಡೆ ಕಡೆಯೋರಂತೆ," ಎಂದ ಕರಿಯಪ್ಪ. ಎಲ್ಲರ ಕಿವಿಗಳೂ ನಿಗುರಿದುವು. ಎಲ್ಲರೂ ಆ ಇಬ್ಬರ ಕಡೆಗೆ ನೋಡಿದರು. ಈಸಿಕೊಂಡು ದಂಡೇ ಸೇರಿ ಈಗ 'ರಾಜರ' ಬಳಿಗೆ ಬಂದಿದ್ದ ಮನುಷ್ಯರು.