ಪುಟ:Kalyaand-asvaami.pdf/೮೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಮರ ಸುಳ್ಯದಲ್ಲಿ ಕ್ಷೋಭೆಯ ಕಿಡಿ "ಊಟದೊತ್ತಿಗೆ ಸೋಮಯ್ನೋರಲ್ಲಿಗೆ ಓಗಿರ್ತಾರೆ." "ಹೂಂ." ಆ ಇಬ್ಬರನ್ನು ಮೊದಲು ದೂರದಿಂದಲೇ ದಿಟ್ಟಿಸಿದಾಗ ತನಗಾಗಿದ್ದ ಅಳುಕನ್ನು ನೆನೆಸಿಕೊಳ್ಳೂತ್ತಾ ಗಿರಿಜವ್ವ ಹೇಳಿದಳು: "ಅವರು ಕುಂಪಣಿ ಕಡೆಯೋರೇನೋಂತ ಎದರ್ಕೆ ಆಗಿತ್ತು." ಕಹಿಯಾದ ಯೋಚನೆಗಳನ್ನು ಹತ್ತಿರ ಸುಳಿಯಗೊಡದೆ ಗಂಗವ್ವನೆಂದಳು: "ಕುಂಪಣಿ ಕಡೆಯೋರು ಈ ಊರಿಗೆ ಬಂದು ಜೀವ ಸಹಿತ ವಾಪಸು ಓಗೋದು ನಿಜವಾ?"