ಪುಟ:Kanakadasa darshana Vol 1 Prelim Pages.pdf/೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

viii ix ಆ ಬೇರೆಯವರಲ್ಲಿ ಕೆಲವರು ಉತ್ತರಿಸುತ್ತಾರೆ, ಕೆಲವರು ಉತ್ತರಿಸುವುದಿಲ್ಲ. ಲೇಖನಕ್ಕೆ ಬೇಕಾದ ಮಾಹಿತಿಯನ್ನು ಸಂಗ್ರಹಿಸಿದ್ದಾಯಿತು. ಬರೆಯುವುದೊಂದೇ ಉಳಿದಿರುವ ಕೆಲಸವೆಂದು ಅಲಮಂದಿ ಲೇಖಕರು ಬರೆದು ಮೂರುತಿಂಗಳಾದರೂ ಲೇಖನ ಹೊರಬರುವ ಸೂಚನೆ ಕಾಣುವುದಿಲ್ಲ. (ಪ್ರಾಯಶಃ ಕೆಲಸಕ್ಕಡ್ಡಿಯಾಗುವುದೇ ಆ ಓಡಿಮಂದಿಯ ಉದ್ದೇಶವಾಗಿರುವಂತೆ ತೋರುತ್ತದೆ.) ಲೇಖನಗಳು ಕೈಸೇರಿದ ನಂತರ ಅವುಗಳನ್ನು ಸಂಪಾದಿಸುವ ಕಾರ್ಯ ಮತ್ತೂ ಜಟಿಲವಾದುದು. ಕೆಲವು ವಿಷಯಕ್ಕೆ ತಕ್ಕಂತೆ ಸಿದ್ದಗೊಂಡ ಲೇಖನಗಳ ಜತೆಗೆ, ಅತಿವ್ಯಾಪ್ತಿ ಅಪೂರ್ಣತೆ ಅಸಮಗ್ರತೆಯಿಂದ ಕೂಡಿದ ಲೇಖನಗಳೂ ಸೇರಿಕೊಳ್ಳುತ್ತವೆ. ಎರಡನೆಯ ಗುಂಪಿಗೆ ಸೇರಿದ ಲೇಖನಗಳನ್ನು ಪುನರಾವರ್ತನೆಗಾಗಿ ಹಿಂದಿರುಗಿಸಿದರೆ, ಕೋಪಿಸಿಕೊಳ್ಳುವ ಮಿತ್ರರೂ ಉಂಟು. ಕೆಲವರು ಗೊಣಗಿಕೊಂಡು, ಕೆಲವರು ಹೃತೂರ್ವಕವಾಗಿ ತಮ್ಮ ಲೇಖನಗಳನ್ನು ತಿದ್ದಿ, ತೀಡಿ ಹಿಂದಿರುಗಿಸುತ್ತಾರೆ; ಕೆಲವರು ಪುನರಾವರ್ತನೆ ಮಾಡದೆಯೇ ಹಳೆಯದನ್ನೇ ನಕಲುಮಾಡಿ ಕಳಿಸುತ್ತಾರೆ; ಪುನರಾವರ್ತನೆ ಸಾಧ್ಯವಿಲ್ಲ, ಅಗತ್ಯವೂ ಇಲ್ಲ, ತಾವು ಬರೆದದ್ದನ್ನೇ ಅಚ್ಚುಮಾಡಿಸಿರೆಂದು ಅಥವಾ ಹಿಂದಿರುಗಿಸಿರೆಂದು ಬರೆದವರೂ ಇದ್ದಾರೆ ; ಏನೂ ಬರೆಯದೆ, ಉತ್ತರವನ್ನು ಸಹ ಕೊಡದಿರುವವರೂ ಇದ್ದಾರೆ. ಕೊನೆಗುಳಿಯುವುದು, ಕೆಲವು ಪ್ರಬಂಧಗಳಲ್ಲಿ ನಿರ್ಲಕ್ಷ್ಯದಿಂದಲೋ, ಅಜ್ಞಾನದಿಂದಲೋ ಉಳಿದಿರುವ ಕಾಗುಣಿತದ ತಪ್ಪುಗಳನ್ನು ತಿದ್ದುವ, ಅನಾವಶ್ಯಕವಾದ, ಪುನರಾವರ್ತನೆಯಾಗಬಹುದಾದ ಸಂಗತಿಗಳಿಗೆ ಕತ್ತರಿ ಪ್ರಯೋಗಮಾಡುವ ಕೆಲಸ. ಕತ್ತರಿ ಪ್ರಯೋಗ ಮಾಡಿದರೂ, ಪುನರಾವರ್ತನೆಗಳು ಇಂಥದೊಂದು ಸಂಕಲನ ಗ್ರಂಥದಲ್ಲಿ ಅನಿವಾದ್ಯವೆಂಬುದನ್ನು ವಿದ್ವಜ್ಜನರು ಬಲ್ಲರು. ಎಷ್ಟು ತಿಣುಕಿದರೂ ಕೈಬರಹದ ಮೋಡಿಯಿಂದಾಗಿ ಸಂಪಾದಕ ಗುರುತಿಸಲಾಗದ ಅಕ್ಷರಗಳು ಉಳಿದೇ ಉಳಿಯುತ್ತವೆ, ಗ್ರಂಥಗಳಿಂದ ಉದ್ಭತಗೊಳ್ಳುವ ಭಾಗಗಳಲ್ಲಿಯೂ ಅನೇಕ ತಸ್ತುಗಳುಳಿಯುತ್ತವೆ. ಕ್ಷಿಪ್ರವಾಗಿ ಗ್ರಂಥ ಮುದ್ರಣ ಮಾಡಬೇಕಾದ ಸಂದರ್ಭದಲ್ಲಿ ಎಷ್ಟು ಎಚ್ಚರಿಕೆ ವಹಿಸಿದರು ಈ ಕೆಲವು ತಪ್ಪುಗಳು ನಿಂತು ಬಿಡುವ ಸಂಭವವುಂಟು. ತಪ್ಪುಗಳೇನಾದರೂ ನುಸುಳಿದ್ದರೆ ಲೇಖಕ, ಸಂಪಾದಕ, ಕರಡು ತಿದ್ದುಗಾರ ಮತ್ತು ಮುದ್ರಕರೆಲ್ಲರೂ ಹೊಣೆಗಾರರೆಂದು ಈ ಸಂದರ್ಭದಲ್ಲಿ ಹೇಳಬೇಕಾಗಿದೆ. ಲೇಖನಗಳನ್ನು ಸಂಪಾದಿಸಿದ ಬಗ್ಗೆ ಒಂದೆರಡು ಮಾತು ಅತ್ಯವಶ್ಯ. ಸಮಿತಿಯ ಅಧ್ಯಕ್ಷರು ಲೇಖನಗಳನ್ನೊಮ್ಮೆ ಓದಿ, ತಮ್ಮ ಅಭಿಪ್ರಾಯದೊಡನೆ ಸಂಪಾದಕ ಮಂಡಲಿಯ ಮುಂದಿಡುತ್ತಾರೆ. ಅವರು ಅಧ್ಯಕ್ಷರಿಗೆ ಪೂರ್ಣ ಒಪ್ಪಿಗೆಯಾಗಿರುವ ಲೇಖನಗಳ ಮೇಲೆ ಕಣ್ಣಾಡಿಸಿ, ತಮ್ಮ ಸಮ್ಮತಿಯನ್ನು ಸೂಚಿಸುತ್ತಾರೆ. ಅಧ್ಯಕ್ಷರಿಗೆ ಪೂರ್ಣ ಒಪ್ಪಿಗೆಯಾಗದ ಪ್ರಬಂಧಗಳನ್ನು ಸದಸ್ಯರು ಮನೆಗೆ ಕೊಂಡೊಯ್ದು ಓದಿ, ಟಿಪ್ಪಣಿ ಮಾಡಿಕೊಂಡು ಬರುತ್ತಾರೆ. ಆ ಟಿಪ್ಪಣಿಗಳ ಹಿನ್ನೆಲೆಯಲ್ಲಿ ಅವುಗಳನ್ನು ಸಭೆಯಲ್ಲಿ ಪುನರ್ವಿಮರ್ಶಿಸಿ, ಅನಿವಾದ್ಯವೆಂದು ತೋರಿದಾಗ ಮಾತ್ರ, ಪುನರಾವರ್ತನೆಗೆಂದು ಕೆಲವನ್ನು ಲೇಖಕರಿಗೆ ಹಿಂದಿರುಗಿಸಿರುವುದುಂಟು. ಹೀಗೆ ಹಿಂದಿರುಗಿಸುವಾಗ ಮಂಡಲಿಯ ಸದಸ್ಯರು ಬುದ್ದಿವಂತರೆಂಬ ಭಾವನೆಯಾಗಲಿ, ಲೇಖಕರ ವಿದ್ವತ್ತಿನ ಬಗ್ಗೆ ಸಂಶಯವಾಗಲಿ ಇಲ್ಲ. ಮಂಡಲಿ ರೂಪಿಸಿಕೊಂಡ ಚೌಕಟ್ಟಿಗೆ ಹೊಂದಿಕೊಳ್ಳುವಂತೆ, ಒಟ್ಟು ಗ್ರಂಥದ ಹಿನ್ನೆಲೆಯಲ್ಲಿ ಸಾಧ್ಯವಾದಷ್ಟು ಸಮಗ್ರತೆಯನ್ನು ಸಾಧಿಸುವ ದೃಷ್ಟಿಯಿಂದ ಲೇಖನಗಳನ್ನು ಪುನರ್ವಿಮರ್ಶಿಸುವಂತೆ ಲೇಖಕರಿಗೆ ಕಳಿಸಿಕೊಡಲಾಗುತ್ತದೆ. ಹೀಗಿರುವಾಗ ಒಬ್ಬರು ಮಿತ್ರರು ಬರೆದರು : “ನಾನು ಹಲವು ವರ್ಷಗಳಿಂದ ಅಧ್ಯಾಪನ ವೃತ್ತಿ ಕೈಗೊಂಡು, ಸಾಹಿತ್ಯಕ್ಷೇತ್ರದಲ್ಲಿ ಸಾಕಷ್ಟು ಕೃಷಿಮಾಡಿ, ವಿದ್ವಾಂಸರ ಮೆಚ್ಚುಗೆ ಪಡೆದಿದ್ದೇನೆ. ಪ್ರಸ್ತುತ ಲೇಖನವನ್ನು ವಿದ್ವಾಂಸರು ಪ್ರಶಂಸಿಸಿದ್ದಾರೆ. ನಾನು ತಿದ್ದುಪಡಿ ಮಾಡಬೇಕಾದದ್ದೇನೂ ಇಲ್ಲ' ಎಂದು. 'ಲೇಖನಗಳನ್ನು ಬಿಡಿಬಿಡಿಯಾಗಿ ನೋಡಿದಾಗ ಅವು ಸ್ವಯಂಪೂರ್ಣವಾಗಿ, ನ್ಯೂನತೆಗಳಿಂದ ಮುಕ್ತವಾಗಿ ತೋರುತ್ತವೆ ; ಆದರೆ ಇಡೀ ಗ್ರಂಥದ ಹಿನ್ನೆಲೆಯಲ್ಲಿ ನೋಡಿದಾಗ ಕೆಲವು ಅರೆಕೊರೆಗಳು ಕಾಣುತ್ತವೆ ; ದೋಷ ಶೋಧವಾಗಲಿ ಖಂಡನೆಯಾಗಲಿ ಸಮಿತಿಯ ಉದ್ದೇಶವಲ್ಲ. ಲೇಖಕರ ವಿದ್ವತ್ತನ್ನು ಅಭಿರುಚಿಯನ್ನು ಅನುಭವವನ್ನು ಗಮನದಲ್ಲಿರಿಸಿಕೊಂಡೇ ಸಮಿತಿ ಅವರನ್ನು ಆಯ್ಕೆ ಮಾಡಿದೆ. ಬಿಟ್ಟು ಹೋಗಿರುವ ಅಂಶಗಳನ್ನು ಸೇರಿಸಬೇಕೆಂಬುದು ಸಮಿತಿಯ ಅಭಿಪ್ರಾಯ. ವಿಷಯ ಪ್ರತಿಪಾದನೆಯ ಬಗ್ಗೆ, ವಾಕ್ಯರಚನೆಯ ಬಗ್ಗೆ, ಅಭಿಪ್ರಾಯ ಸಮರ್ಥನೆಯ ಬಗ್ಗೆ ಸಮಿತಿ ತಲೆಹಾಕುವುದಿಲ್ಲ, ನಿಮ್ಮ ವಿದ್ವತ್ತು ಸರಿಯಾಗಿ ಪ್ರಕಾಶಕ್ಕೆ ಬರಲೆಂದೇ ಈ ಕ್ರಮಕೈಗೊಂಡಿದೆ ಎಂದವರಿಗೆ ಸಮಿತಿಯ ಅಧ್ಯಕ್ಷರು ಪತ್ರ ಬರೆದಾಗ, ಕೆಲವರಿಗೆ ಸಮಾಧಾನವಾಗಿದೆಯೆಂದು ಅವರು ಬರೆದ ಉತ್ತರಗಳಿಂದ ಸಷ್ಟವಾಗಿದೆ. ಅವರಿಗೆ ತೊಂದರೆಯಾದದ್ದಕ್ಕಾಗಿ ನಾನು ನನ್ನ ಮತ್ತು ಮಂಡಲಿಯ ಪರವಾಗಿ ಕ್ಷಮೆಯಾಚಿಸುತ್ತೇನೆ. ಸಮಿತಿ ಯಾವೊಂದು ಲೇಖನವನ್ನು ತಿರಸ್ಕರಿಸಿಲ್ಲ. ಲೇಖಕರು ವ್ಯಕ್ತಪಡಿಸಿರುವ ಅಭಿಪ್ರಾಯಗಳಿಗೆ ಅವರೇ ಜವಾಬ್ದಾರರು. ಕಣ್ಣಲ್ಲಿ ಕಣ್ಣಿಟ್ಟುಕೊಂಡು ನೋಡಿದರೂ, ಹಸ್ತಪ್ರತಿಗಳಲ್ಲಿರುವ ದೋಷಗಳು ಅಚ್ಚಿನಲ್ಲಿಯೂ ಪುನರಾವರ್ತನೆಯಾಗಿವೆ. ಶ್ರೀ ಶಾರದಾಪ್ರಸಾದರು ಕರಡು ತಿದ್ದುವುದರಲ್ಲಿ ಜಾಣರು; ಕರಡಿನ ಬಹುಭಾಗದ ಮೇಲೆ ನಾನೂ ಕಣ್ಣಾಡಿಸಿದ್ದೇನೆ : ಹ. ಕ, ರಾಜೇಗೌಡರು ಸಂತೋಷದಿಂದ ಕರಡು ತಿದ್ದಿದ್ದಾರೆ. ಆದರೂ ಕೆಲವು ದೋಷಗಳು ಉಳಿದಿರಲಾಗಿ ವಾಚಕರು ಕ್ಷಮಿಸುವರೆಂದು ನಂಬಿದ್ದೇನೆ. ಸದ್ಯಕ್ಕೆ ಈ ಪ್ರಶಸ್ತಿ ಗ್ರಂಥ ಹೊರಬಂದಿದೆ. ಕನಕ ಸಾಹಿತ್ಯವನ್ನೊಳಗೊಂಡ ಎರಡು ಸಂಪುಟಗಳು ಈ ವರ್ಷ ತುಂಬುವುದರೊಳಗಾಗಿ ಮುದ್ರಣಗೊಂಡು ಹೊರ ಬರಲಿವೆಯೆಂದು ಮಂಡಲಿಯ ಪರವಾಗಿ ಆಶ್ವಾಸನೆ ನೀಡಬಯಸುತ್ತೇನೆ. ಈ ಪವಿತ್ರ ಕಾರ್ಯದಲ್ಲಿ ಸಹಾಯ ಹಸ್ತನೀಡಿ, ಸಂತೋಷದಿಂದ ಸಹಕರಿಸಿದ, ಕನ್ನಡನಾಡಿನ ಸಂಪತ್ತೆನ್ನಬಹುದಾದ ವಿದ್ವಜ್ಜನರು ಮನಸ್ಸು ಮಾಡದಿದ್ದರೆ