ಪುಟ:Kannadigara Karma Kathe.pdf/೨೬೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೨೪೬ ಕನ್ನಡಿಗರ ಕರ್ಮಕಥೆ

ಲೈಲಿಯು ಮಾಸಾಹೇಬರ ಕಡೆಗೆ ನೋಡಿ ಏನೋ ಮಾತಾಡಬೇಕೆನ್ನುತ್ತಿರಲು, ಮಾಸಾಹೇಬರು, ಹೋಗು, ನೀನು ಹೋಗಲಿಕ್ಕೇನೂ ಪ್ರತಿಬಂಧವಿಲ್ಲ; ಆದರೆ ಆತನು ನನ್ನ ಬಳಿಗೆ ಬರಲಾಗದು ಸರ್ವಥಾ ಇಲ್ಲಿಗೆ ಬರಲಾಗದೆಂದು ಆತನಿಗೆ ಸಷವಾಗಿ ಹೇಳು, ಬಂದರೆ ನಾನು ಮುಖಾವಲೋಕವನ್ನು ಮಾಡಲಿಕ್ಕಿಲ್ಲವೆಂತಲೂ ತಿಳಿಸು ಎಂದು ಹೇಳಲು ಲೈಲಿಯು ದಿಟ್ಟತನದಿಂದ ರಾಮರಾಜನ ಎದುರಿಗೆ ಬಂದು ನಿಂತುಕೊಂಡಳು.

  • * * *