ಪುಟ:Kannadigara Karma Kathe.pdf/೩೦೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೩೨ ನೆಯ ಪ್ರಕರಣ
ಯುದ್ಧಪ್ರಸಂಗವು

ಬಳಿಕ ರಾಮರಾಜನು ಕುದುರೆಗೆ ಜೀನು ಹಾಕಿಕೊಂಡು ಬರುವಂತೆ ಸೇವಕನಿಗೆ ಆಜ್ಞಾಪಿಸಿ, ತನ್ನ ಉಡುಪು ತೊಡಪುಗಳನ್ನೂ, ಶಸ್ತ್ರಾಸ್ತ್ರಗಳನ್ನೂ ತರಹೇಳಿದನು. ಸ್ವಲ್ಪಹೊತ್ತಿನಲ್ಲಿಯೇ ಆತನ ಉಡಪು-ತೊಡಪುಗಳೂ, ಶಸ್ತ್ರಾಸ್ತ್ರಗಳೂ ಬಂದವು. ರಾಮರಾಜನು ಮೊದಲು ರೇಶಿಮೆಯ ತೆಳುವಾದ ವಸ್ತದ ಚಲ್ಲಣವನ್ನು ಹಾಕಿಕೊಂಡು, ಮೊಳಕಾಲತನಕ ಬರುವ ಅಂಥಾದ್ದೇ ಒಂದು ಅಂಗಿಯನ್ನು ತೊಟ್ಟುಕೊಂಡನು. ಆಮೇಲೆ ಉಕ್ಕಿನ ತಂತಿಯ ಚಲ್ಲಣವನ್ನು ಅಂಥಾದ್ದೇ ಒಂದು ಅಂಗಿಯನೂ ತೊಟ್ಟು, ಅದರಮೇಲೆ ಕಾಲತನಕ ಉದ್ದಾದ ಒಂದು ಅಂಗಿಯನ್ನು ಹಾಕಿಕೊಂಡನು. ರೇಶಿಮೆಯ ಹೆಣಿಕೆಯ ಆ ಅಂಗಿಯು ಗಂಟುಗಂಟು ಹಾಕಿದ ಜಾಳಿಗೆಯಂಥಾ ಅರಿವೆಯದಿತ್ತು. ಈ ಅಂಗಿಯನ್ನು ಹಾಕಿಕೊಂಡ ಬಳಿಕ ಎಲ್ಲಕ್ಕೂ ಮೇಲೆ ತೀರ ಜಿನುಗಾದ ಮಲಮಲಿಯಂಥ ಅರಿಯೆವ ಕಾಲತನಕ ಬರುವ ಬಿಳಿಯ ಅಂಗಿಯನ್ನು ತೊಟ್ಟುಕೊಂಡನು. ಆಮೇಲೆ ಟೊಂಕಕ್ಕೆ ಒಂದು ರೇಶಿಮೆಯ ಪಟ್ಟವನ್ನು ಸುತ್ತಿಕೊಂಡು, ಅದರಲ್ಲಿ ಒಂದು ಕಠಾರಿಯನ್ನೂ, ತಮಂಚಾ ಎಂಬ ಶಸ್ತವನ್ನೂ ಸಿಗಿಸಿಕೊಂಡನು ಆತನ ಬೆನ್ನಿಗೊಂದು ಬತ್ತಳಿಕೆಯೂ, ಹೆಗಲಿಗೊಂದು ಹೆದೆಯೇರಿಸಿದ ಧನುಷ್ಯವೂ ಒಪ್ಪುತ್ತಿದ್ದವು. ಈಗ ಇಪ್ಪತ್ತು ವರ್ಷಗಳ ಹಿಂದೆ ತನಗೆ ಒಬ್ಬ ಪೋರ್ತುಗೀಜ ವ್ಯಾಪಾರಿಯು ಕಾಣಿಕೆಯಾಗಿ ಕೊಟ್ಟಿದ್ದ ಒಂದು ಟುಲ್ಡೋ ಪಟ್ಟಣದ ಖಡ್ಗವನ್ನು ರಾಮರಾಜನು ತನ್ನ ಎಡಗೈಯಲ್ಲಿ ಹಿಡಕೊಂಡನು. ಆಮೇಲೆ ಒಬ್ಬ ಸೇವಕನು ಆತನ ತಲೆಗೆ ಒಂದು ಜಿರೆಟೋಪು ಹಾಕಿ, ಅದರ ಮೇಲೆ ತುರಾಯಿ ಹಚ್ಚಿದ ಆತನ ಸಣ್ಣ ಮುಂಡಾಸವನ್ನು ಹಾಕಿದನು. ಬಳಿಕ ಕೊರಳಿಗೆ ಬಹು ಬೆಲೆಯುಳ್ಳ ಒಂದು ರತ್ನಹಾರವು ಇಡಿಸಲ್ಪಟ್ಟಿತು. ಈ ಹಾರದ ಮಧ್ಯದಲ್ಲಿ ರತ್ನ ಖಚಿತವಾದ್ದೊಂದು ಪದಕವಿತ್ತು. ಆ ಪದಕದ ನಟ್ಟನಡವೆಯಿದ್ದ ಬಹುದೊಡ್ಡ ನೀಲರತ್ನವು ಅತ್ಯಂತ ಯಶಸ್ವಿಯಾದದ್ದೆಂದು ಭಾವಿಸಲ್ಪಟ್ಟಿತ್ತು, ಅದು ಕೊರಳಲ್ಲಿರುವತನಕ ಪ್ರತ್ಯಕ್ಷ ಯಮನ ಭಯವು ಕೂಡ