ಈ ಪುಟವನ್ನು ಪ್ರಕಟಿಸಲಾಗಿದೆ
"ಲೋಕದ ಡೊಂಕನು ನೀವೇಕೆ ತಿದ್ದುವಿರಿ?
ನಿಮ್ಮ ನಿಮ್ಮ ತನುವ ಸಂತೈಸಿಕೊಳ್ಳಿ
ನಿಮ್ಮ ನಿಮ್ಮ ಮನವ ಸಂತೈಸಿಕೊಳ್ಳಿ.
ನೆರೆಮನೆಯವರ ದುಃಖಕ್ಕೆ ಅಳುವವರ ಮೆಚ್ಚ
ನಮ್ಮ ಕೂಡಲ ಸಂಗಮದೇವ."
ಎಂಬ ಬಸವಣ್ಣನವರ ವಚನವನ್ನು ಮೆಲುಕು ಹಾಕಿ.
- ಕಷ್ಟ-ನಷ್ಟ, ಸಮಸ್ಯೆ ಸವಾಲುಗಳಿದ್ದರೆ ಮನೆಯವರೊಂದಿಗೆ ಆತ್ಮೀಯ ಬಂಧು ಮಿತ್ರರೊಂದಿಗೆ ಚರ್ಚಿಸಿ ಪರಿಹಾರವೇನೆಂಬುದನ್ನು ಕಂಡು ಹಿಡಿಯಿರಿ, ಕಾರ್ಯಪ್ರವೃತ್ತರಾಗಿ ಕೆಲವು ಸಲ ಕೆಲವು ಕಾಲ ಸಮಸ್ಯೆಗಳನ್ನು ಸಹಿಸಿಕೊಳ್ಳಬೇಕಾಗುತ್ತದೆ. ಸಹನೆಯಿರಲಿ.
- ಆಸೆ-ಬಯಕೆಗಳಿಗೆ ಲಗಾಮು ಹಾಕಿ, ಇರುವುದರಲ್ಲಿ ಲಭ್ಯವಿರುವುದರಲ್ಲಿ ಸಂತೋಷಪಡಿ.
"ಬೆದಕಾಟ ಬದುಕೆಲ್ಲ ಚಣ ಚಣವು ಹೊಸ ಹಸಿವು |
ಅದಕಾಗಿ ಇದಕ್ಕಾಗಿ ಮತ್ತೊಂದಕ್ಕಾಗಿ ||
ಅಧಿಕಾರ ಸಿರಿ ಸೊಗಸು ಕೀರ್ತಿಗಳ ನೆನೆದು ಮನ |
ಕುದಿಯುತಿಹುದವಗಂ-ಮಂಕುತಿಮ್ಮ"
- ಖಿನ್ನತೆಯಿಂದ ಕುದಿಯುವ ಮನಸ್ಸಿಗೆ ನೀವೇ ಸಾಂತ್ವನದ ನೀರು ಹಾಕಿ ಶಮನಗೊಳಿಸಿ.
"ಗುಡಿ ಪೂಜೆಯೋ ಕಥೆಯೋ, ಸೊಗಸು ನೋಟವೋ ಹಾಡೋ
ಬಡವರಿಂಗು ಪ್ರಕೃತಿಯೋ ಆವುದೋ ಮನದ
ಬಡಿದಾಟವನ್ನು ನಿಲ್ಲಿಸಿ, ನೆಮ್ಮದಿಯ ನೀವೊಡದೆ
ಬಿಡುಗಡೆಯೋ ಜೀವಕ್ಕೆ ಮಂಕುತಿಮ್ಮ"
ನಿಮ್ಮ ಗಮನವನ್ನು ಬೇರೆಡೆಗೆ ತಿರುಗಿಸಿ.
ಖಿನ್ನತೆ: ಬನ್ನಿ ನಿವಾರಿಸೋಣ