ಪುಟ:Khinnate banni nivarisoona.pdf/೪೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ನೆಮ್ಮದಿಯಿಂದ ಇಡಲು ಏನು ಮಾಡಬೇಕು. ಅದು ಆರೋಗ್ಯವಾಗಿರಲು ಯಾವ ಕ್ರಮಗಳನ್ನು ಮುನ್ನೆಚ್ಚರಿಕೆಗಳನ್ನು ಕೈಗೊಳ್ಳಬೇಕು ನೋಡೋಣ:

ನಮ್ಮ ದೇಹದೊಳಗಿನ ಚೇತನವೇ ಮನಸ್ಸು. ಅದು ನಮ್ಮ ದೇಹವನ್ನು ದೇಹದ ಎಲ್ಲಾ ಅಂಗಾಂಗಗಳನ್ನು ನಿರ್ದೇಶಿಸುವುದರ ಜೊತೆಗೆ ನಮ್ಮ ಆಲೋಚನೆ, ಭಾವನೆಗಳು, ಪಂಚೇಂದ್ರಿಯಗಳಿಂದ ಒಳಬರುವ ಎಲ್ಲ ಮಾಹಿತಿಗಳನ್ನು ಅರ್ಥೈಸುವುದು, ಜ್ಞಾನ-ಕೌಶಲ್ಯಗಳನ್ನು ಕಲಿಯುವುದು, ಕಲಿತು ಸಮಯ ಸಂದರ್ಭಕ್ಕೆ ಅನುಸಾರವಾಗಿ ಅವನ್ನು ವಿವೇಚನೆಯಿಂದ ಬಳಸುವುದು. ಆಹಾರ, ನಿದ್ರೆ, ಮೈಥುನ, ಕಲ್ಮಶಗಳ ವಿಸರ್ಜನೆಯಂತಹ ಸರಿತಪ್ಪುಗಳನ್ನು ನಿರ್ಣಯಿಸುವುದು, ನಮ್ಮ ಬಲಾಬಲಗಳನ್ನು ಅರ್ಥ ಪ್ರಾಥಮಿಕ ಚಟುವಟಿಕೆಗಳನ್ನು ನಿಯಂತ್ರಿಸುವುದು, ಒಳಿತು, ಕೆಡುಕು, ಮಾಡಿಕೊಳ್ಳುವುದು, ಯಾವುದೇ ವಿಷಯ, ವ್ಯಕ್ತಿ ಸನ್ನಿವೇಶಕ್ಕೆ ಸೂಕ್ತವಾದ ಕ್ರಿಯೆ ಪ್ರತಿಕ್ರಿಯೆಗಳನ್ನು ಪ್ರಕಟಿಸುವುದು, ಇತರರೊಂದಿಗೆ ಸ್ನೇಹ ಸಂಬಂಧ ಗಳನ್ನು ಇಟ್ಟುಕೊಳ್ಳುವುದು, ಮನೆ ಮಕ್ಕಳು ಆಶ್ರಿತರನ್ನು ರಕ್ಷಿಸುವುದು ವಾಸ್ತವಿಕ ಜಗತ್ತಿನೊಡನೆ ಹೊಂದಿಕೊಳ್ಳುವುದು ಇತ್ಯಾದಿ ಅನೇಕ ಸಾಯುವ ಕ್ಷಣದವರೆಗೆ ಮಾಡುತ್ತಲೇ ಇರುತ್ತದೆ. ಸುಮಾರು ಇಪ್ಪತ್ತು ಚಟುವಟಿಕೆಗಳನ್ನು ಈ ನಮ್ಮ ಮನಸ್ಸು ನಿರಂತರವಾಗಿ ಹುಟ್ಟಿನಿಂದ ಹಿಡಿದು, ವರ್ಷಗಳ ಕಾಲ ನಮ್ಮ ಮನಸ್ಸು (ಗರ್ಭಧಾರಣೆ ಅವಧಿಯಿಂದ ಹಿಡಿದು ಪ್ರೌಢಾವಸ್ಥೆಯನ್ನು ಮುಟ್ಟುವವರೆಗೆ) ವಿಕಾಸ ಹೊಂದುತ್ತದೆ.


ಮನ ಬುದ್ಧಿ ಚಿತ್ತ ಅಹಂಕಾರ ಜ್ಞಾನವೆಂಬ
ಪಂಚಕರಣಂಗಳಿವೆ ಎಂದು ಹೇಳಿಹೇ ಕೇಳಿರಯ್ಯಾ
ಮನವೆಂಬುದು ಸಂಕಲ್ಪವಿಕಲ್ಪಕ್ಕೊಳಗಾಯಿತ್ತು
ಇಲ್ಲದುದ ಕಲ್ಪಿಸುವುದೇ ಸಂಕಲ್ಪ
ಇದ್ದುದ ನರಿಯದುದೇವಿಕಲ್ಪ
ಕಲ್ಪಿಸಿ ರಚಿಸುವುದೇ ಬುದ್ಧಿಯಯ್ಯ
ಕಲ್ಪಿಸಿ ಮಾಡುವುದು ಚಿತ್ತವಯ್ಯ
ಮಾಡಿದುದಕೆ ನಾನೆಂಬುದು ಅಹಂಕಾರವಯ್ಯ

46 / ಖಿನ್ನತೆ: ಬನ್ನಿ ನಿವಾರಿಸೋಣ