ಪುಟ:Mahakhshatriya.pdf/೨೦೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ದೇವಾಚಾರ್ಯನು “ಇದು ನಮಗೆ ಬಹು ಗಹನವಾದುದು ಅಷ್ಟೇನು? ಅಸಾಧ್ಯ” ಎಂದುಕೊಂಡನು. ಶುಕ್ರಾಚಾರ್ಯನು “ನಮ್ಮನ್ನು ಅಪೂರ್ಣತೆ ಬಿಟ್ಟಿರಲ್ಲವೆ? ಮದುವೆಯಾಗುವವರೆಗೂ ಹುಚ್ಚು ಬಿಡುವುದಿಲ್ಲ. ಹುಚ್ಚು ಬಿಡುವವರೆಗೂ ಮದುವೆಯಾಗುವುದಿಲ್ಲ” ಎಂದುಕೊಂಡನು.

ನಹುಷನು “ಇಂದ್ರನಾದುದು ಸಾರ್ಥಕವಾಯಿತು. ಏನು ತಿಳಿಯಬೇಕೋ ಅದನ್ನು ತಿಳಿದುದಾಯಿತು” ಎಂದು ಆನಂದಪಟ್ಟುಕೊಳ್ಳುತ್ತಿದ್ದನು.

ಹೊರಗೆ ಗದ್ದಲವಾಯಿತು. ಸಮುದ್ರವು ಉಕ್ಕಿ ಬಂದು ಮಾಡುತ್ತಿರುವಂತೆ ಆಗುವ ಆರ್ಭಟ. ಏನೆಂದು ಆಚಾರ್ಯರು ಎದ್ದು ಕಿಟಕಿಯಲ್ಲಿ ಬಗ್ಗಿ ನೋಡಿದರು. ಪ್ರಹರಿಯು ಬಂದು “ಅಗ್ನಿ ವಾಯುಗಳು....” ಎನ್ನುತ್ತಿರುವ ಹಾಗೆಯೇ ಅವರಿಬ್ಬರೂ ಬಂದು ಇಂದ್ರನಿಗೆ ಕೈಮುಗಿದು “ಮಹಾಪಾದದ ಆಜ್ಞೆಯು ಸಫಲವಾಯಿತು. ಹತ್ಯೆಯು ಉರಿದುಹೋಯಿತು. ಇಂದ್ರನನ್ನು ಕರೆತಂದಿರುವೆವು” ಎಂದರು. ನಹುಷನು ಸಂತೋಷದಿಂದ ಎದ್ದು ಅವರಿಬ್ಬರನ್ನು ಆಲಿಂಗಿಸಿದನು.

* * * *