ಪುಟ:Mrutyunjaya.pdf/೧೦೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

೯೪

ಮೃತ್ಯುಂಜಯ

ಸೆಬೆಕ್ಖುವಿನ ಮನೆ ಇತರ ಸಣ್ಣ ಮನೆಗಳಿಗಿಂತ ಹೆಚ್ಚು ವಿಶಾಲ
ವಾಗಿತ್ತು. ಬಾಣ ತಗಲಿ ಗಾಯಗೊಂಡ ಐವರನ್ನು ಅಲ್ಲಿಗೆ ತಂದರು. ರಾಜ
ಗೃಹದಲ್ಲಿದ್ದ ಅರ್ಚಕ ವೈದ್ಯನ ನೆರವು ಆಗ ಸಿಗುವಂತಿರಲಿಲ್ಲ. ಅನುಭವಿ
ಹಿರಿಯರಿಬ್ಬರು ಔಷಧಿಯ ಎಲೆಗಳನ್ನು ತಂದು ಗಾಯಗಳಿಗೆ ಕಟ್ಟಿದರು; ರಕ್ತ
ಸ್ರಾವವನ್ನು ತಡೆದರು.
ಯಾವಾಗಲೂ ಕತ್ತಲಾದೊಡನೆ ಮೌನದ ಮುಸುಕು ಧರಿಸುವ ಊರು
ಈ ದಿನ ತೀವ್ರ ಚಟುವಟಿಕೆಯ ಶಿಬಿರವಾಯಿತು. ರಕ್ತ ಹರಿದುದನ್ನು ಕಂಡು
ಕಲ್ಲಾಯಿತು, ಜನರ ಮನಸ್ಸು.
ಯುವಕರು ಕೂಗಾಡಿದರು :
"ನಮಗೆ ಬಿಟ್ಬಿಡಿ ! ಮೆನೆಪ್ಟಾ ಅಣ್ಣನನ್ನು ನಾವು ಬಿಡಿಸ್ಕೊಂಡು
ಬರ್ತೇವೆ !"
ಇನ್ನೂ ಕೆಲವರೆಂದರು :
"ಅಣ್ಣನನ್ನು ಕಟ್ಟಿದ ಕಂಬಕ್ಕೇ ಆ ಕಂದಾಯ ಅಧಿಕಾರಿಯನ್ನು
ಬಿಗೀತೇವೆ !"
ಬಹಳ ಹೊತ್ತು ಹಣೆನೆರಿಗೆ ಕಟ್ಟಿದ್ದ ಸ್ನೊಫ್ರು ಅಂದ :
"ಈಗ ನಮ್ಮ ಗುರಿ ಏನು ? ಮೆನೆಪ್ಟಾನ ಬಿಡುಗಡೆ. ಅಷ್ಟು
ಮಾಡೋಣ. ನಮ್ಮ ವಿವಾದ ಕಂದಾಯಕ್ಕೆ ಸಂಬಂಧಿಸಿದ್ದು. ವಸೂಲಿ
ಶುರು ಮಾಡಿದಾಗ ಅದನ್ನು ನೋಡ್ಕೊಳ್ಳೋಣ."
ಸೆಬೆಕ್ಖುವಿನ ಅಳಿಯ ಖ್ನೆಮು ಹೊಟೆಪ್___ಪ್ರಾಂತದ ಹೆಸರಾಂತ
ಬಿಲ್ಗಾರ___ಸಿಟ್ಟಾಗಿ ನುಡಿದ :
"ಒಪ್ದೆ, ಸ್ನೊಫ್ರು ಮಾವ. ಆದರೆ ನಿಶ್ಯಸ್ತ್ರರನ್ನು ಇವತ್ತು ಬೇಟೆ
ಯಾಡಿದರಲ್ಲ ? ಅದಕ್ಕೆ ಶಿಕ್ಷೆ ? ದೇವರು ಮೆಚ್ಚೋ ಕೆಲಸಾನ ಅದು ?"
"ನನ್ನ ರಕ್ತವೂ ಕುದೀತಾ ಇದೆ ಖ್ನೆಮು. ಆದರೆ ಮೊದಲು ಆಗ
ಬೇಕಾದ್ದು ಯಾವ್ದೂಂತ ನೋಡೋದು ಬೇಡ್ವ ? ಮೆನೆಪ್ಟಾನ್ನ ಕಟ್ಟಿ
ಹಾಕಿ ಬೆಳಗಿನಿಂದ ಉಪವಾಸ ಕೆಡವಿದ್ದಾರೆ."
ಅಳಿಯನೊಡನೆ ವಾದಿಸಲು ಸೆಬೆಕ್ಖು ಬಾಯಿ ತೆರೆದ. ಅದನ್ನು