ಈ ಪುಟವನ್ನು ಪರಿಶೀಲಿಸಲಾಗಿಲ್ಲ.
ಮೃತ್ಯುಂಜಯ
"ಪೆರೋ ಮೆರಿಕರಾ ತನ್ ಮಗನಿಗೆ ಮಾಡಿದ ಹಿತೋಪದೇಶ ಯಾವುದು ?” ಹುಡುಗ ಪೇಚಿನಲ್ಲಿ ಬಿದ್ದು. ಅಪೆಟ್ ಗುಡುಗಿದ : "ಮರೆತ್ಬಿಟ್ಟಿಯಾ ಕತ್ತೆ? 'ಶ್ರೀಮಂತನ ಮಗ, ಬಡವನ ಮಗ,
ಅಂತ ವ್ಯತ್ಯಾಸ ಮಾಡಬೇಡ; ಕೈಗಳ ದುಡಿಮೆ ನೋಡಿ ನೇಮೆಸಿಕೊ ' ,,,, ಹೇಳು ! "
" ಶ್ರೀಮಂತನ ಮಗ, ಬಡವನ ಮಗ ಅಂತ ವ್ಯತ್ಯಾಸ ಮಾಡಬೇಡ...
ಯಾರ ಜೊತೆ ಬೇಕಾದರೂ ಗೋಲಿ ಆಡೌದು ಅಲ್ವಾ ?"
'ಕತ್ತೆ ! ಪೆರೋ ಮೆರಿಕರಾನ ಮಗ ಗೋಲಿ ಅಡ್ಲಿಲ್ಲ, ರಾಜ್ಯ
ಆಳ್.ದ ತಿಳಿತಾ?"
"ಹೂಂ"
ತಂದೆ-ಮಗ ಮಂದಿರದ ಆವರಣಕ್ಕೆ ಬಂದೊಡನೆ ಅರ್ಚಕನ ಪತ್ನಿ
ಛೇಡಿಸಿದಲು : "ನೈವೇದ್ಯವೆಲ್ಲ ಆರೋ ದೇವರು ಕೊಟ್ಟರೂ ಬಿಸಿಬಿಸಿ
ತಿನ್ನೋ ಯೋಗ್ಯತೆ ಬೇಕಲ್ಲ, ನಡೀರಿ ಒಳಕ್ಕೆ...”
೫
ನೀರಾನೆ ಪ್ರಂತದ ಹೊಸ ಜೀವನ ಕ್ರಮ ಎಲ್ಲಾ ಬಗೆಯ ಜನರನ್ನೂ
ಆವರಿಸಿತು. ಕಂದಾಯ ವಸೂಲಿಯ ಕೆಲಸಕ್ಕಾಗಿಯೇ ಹಲವರು ನೇಮಕಗೊಂಡರು. ಅವರ ತಂಡಗಳಿಗೆ ಮುಕ್ಶ್ಯಸ್ಥರನ್ನು--ಕಾಪೀರುಗಳನು -ಖೇಮನ್ ಹೊಟೆಪ್ ಗೊತ್ತು ಮಾಡಿದ. ಸ್ವಲ್ಪ. ಹೊತ್ತು ತಾನೂ ಅವರ ಜೊತೆಗಿದ್ದು ವಸೂಲಿಯ ಕರ್ಯ ಹೇಗೆ ನಡೆಯಬೇಕು ಎಂಬುದನ್ನು ತೋರಿಸಿಕೊಟ್ಟ. ಪ್ರತಿದಿನ