ಈ ಪುಟವನ್ನು ಪರಿಶೀಲಿಸಲಾಗಿಲ್ಲ.
ಮೃತ್ಯುಂಜಯ ೧೩೫
"ಇಲ್ಲಿ ಹೂ ಅರಳಿದ ಕೂಡಲೇ ಮುಖಮಂಟಪದಲ್ಲಿ ಜೇನುಹುಳಗಳು ಗೂಡು ಕಟ್ತವೆ ನೋಡ್ಕೊ," ಎಂದ ಸ್ನೊಫ್ರು ತನ್ನ ಮಿತ್ರನಿಗೆ. ನಕು ಸೆಬೆಕು ನೋಡಿದ : “ ಈ ಜೇನು ಯಾರೂ ಮುಟ್ಟಬಾರ್ದು.ಇದು ರಾಜಗೃಹದ ಆಸ್ತಿ-ಅಂತ ನಾಯಕರು ಅಪ್ಪಣೆ ಕೊಡಸ್ತಾರೆ !” ನೆಫಿಸ್ ಮನೆಯಲ್ಲಿ ಎರಡು ಮೂರುಬಾರಿ ರಾಮೆರಿಪ್ಟಾನ ಶಿಕ್ಷಣದ ಪ್ರಸ್ತಾಪ ಮಾಡಿದ್ದಳು,ಗಂಡನೊಂದಿಗೆ. ಪ್ರತಿಸಲವೂ, "ಆಗಲಿ ನೆನಪಿದೆ" ಎಂದಿದ್ದ, ಮೆನೆಪ್ಟಾ. ಎರಡು ಸಂಗತಿಗಳು ನಾಯಕನನ್ನು ಕಾಡುತ್ತಿದ್ದುವು:ತನ ಮಗನೊಬ್ಬನಿಗೇ ಓದು ಬರಹ ಕಲಿಸುವುದು ಸರಿಯೇ? ಅಲ್ಲದೆ, ಇಪ್ಯುವರ್ಗೆ ಈಗಿರುವ ಕೆಲಸದ ಹೊರೆಯೇ ಹೆಚ್ಚಲ್ಲವೆ? ಹುಡುಗನ ವಿದ್ಯಾಭಾಸದ ಬಗೆಗೆ ಮೆನೆಪ್ಟಾ ತಾನಾಗಿ ಹೇಳಬಹುದೆಂದು ಇಪ್ಯುವರ್ ಬಹಳ ದಿನ ಕಾದ. ಏನೂ ಹೇಳದೇ ಇದ್ದಾಗ ಸ್ವತಃ ಮತ್ತೊಮ್ಮೆ ಆ ಮಾತು ಎತ್ತಿದ. "ನಿಮಗೆ ಶ್ರಮವಾಗೋದಿಲ್ವಾ ಇಪ್ಯುವರ್?" “ನನಗೆ ಶ್ರಮವೆ? ಇಲ್ಲ, ನಾಯಕರೇ....” "ಹೆಚ್ಚು ಹುಡುಗರು ಬಂದರೇ?" "ಅಯ್ಯೋ! ಯಾರು ಬರ್ತ್ತಾರೆ?” “ಹಾಗಲ್ಲ.ವಿಚಾರಿಸಿ ನೋಡೋಣ.” "ರಾಮೆರಿಪ್ಟಾ ಜತೆ ಎಷ್ಟು ಜನ ಬೇಕಾದರು ಬರಲಿ.. ಪಾಠ ಹೇಳ್ತೇನೆ.” "ಸ್ಥಳ-ರಾಜಗೃಹದ ಮಹಡಿ ಆಗಬಹುದಲ್ಲ?” "ಪ್ರಶಸ್ತವಾಗಿದೆ.” "ಸೊಥಿಸ್ ನಕ್ಷತ್ರ ಉದಯಿಸುವುದು ಯಾವತ್ತು?” "ಇನ್ನು ಇಪ್ಪತ್ತೆಂಟು ದಿನ ಇದೆ,” "ನೂತನ ವರ್ಷಾರಂಭದಿಂದಲೇ ಪಾಠ ಆರಂಭಿಸೋಣ.”