ಪುಟ:Mrutyunjaya.pdf/೧೭೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

"ಸ್ನೋಫ್ರು-ಸೆಬೆಕ್ಖು. ಹೆಸರು ಕೇಳಿದ್ದೇನೆ." ಈತ ಪ್ರಚಂಡ ಎಂದುಕೋಳುತ್ತ, ಮೆನೆಪ್ ಛಾಗೆನೆಂದು: "ಸ್ನೋಪ್ರು ಮತ್ತು ಅವರ ಶಿಶ್ಯರು ಮಾಡಿರೋ ನೂರಾರು ಮೋತಿರ್ ಗಳಿವೆ."

         "ನೋಡ್ತೇನೆ. ರಾಜಧಾನಿಯಲ್ಲಿ ಮಾರಬೌದು."
         ಸ್ನೋಪ್ರು ಮತ್ತು ಸೆಬೆಕ್ಖುರನ್ನು ಕೂಡಾ ಕೆಪ್ಛು ಭೇಟಯಾಗುವುದು ವಿಹಿತ ವಿನಿಸಿತು ಮೆನೆಪ್ ಛಾಗೆ. ಇವತ್ತು ಸೆಬೆಕ್ಖುಬರುವ ದಿನ, ಆದರೆ ತದವಾಗಬಹುದು, ಹೀಳಿ ಕಳುಹಿಸಿದರೆ ಇಬ್ಬರೂ ಬೀಗನೆ ಬಂದಾರು___ಎಂದುಕೊಂಡು, ಖ್ನೇಮನತ್ತ ನೋಡಿ. "ಸ್ನೋಪ್ರುನನ್ನೂ ಮಾವನನ್ನು  ಕರಕೊಂಡ್ಬರ್ತೀಯಾ?" ಎಂದ.
         "ಅವರನ್ನು ನೋಡೋದಕ್ಕೆ ನಾನು ಉತ್ಸುಕನಾಗಿದ್ದೀನೆ." ಎಂದು ಕೆಪ್ಛು ನುಡಿದ. ಬಛಾನತ್ತ ನೋಡಿ ಮುಗುಳುನಗೆ ಬೀರಿ, "ಇವರ ಪರಿ ಚಯವಾಗಲಿಲ್ಲ," ಎಂದ.
        "ಇವರು ಬಛಾ. ನಮಮ ನದೀಸಾರಿಗೆ ಮೂಖ್ಯಸ್ಥ. ಶ್ರೀಷ್ಟ ಅಂಬಿಗೆ."
       " ಈಗ ಹೋದುವರು ದಳಪತಿ ಖ್ನೇಮ್ಹಹೋಟೆಪ್ ಅಲ್ವಾ?"
       " ಹೌದು."
       "ಇವರಿಬ್ಬರು ಹೆಸರು ಕೂಡಾ ನನಗೆ ಪರಿಚಿತ. ಆದರೆ ನೋಡಿರ್ಲಿಲ್ಲಾ."
       "ನೆರೆ ಪ್ರಾಂತಗಳು ದಾರಿಯಾಗಿ ಹೊರಗೆ ಸುದ್ದಿ ಹಬ್ಬಿರ್ಬೀಕು."
       "ನಿಜ. ಈ ಸುದ್ದಿ ರಾಜಧಾನಿಗೂ ಹೋಗಿರ್ತದೆ. ಆದರೆ ನಿಮ್ಮ ಅಸಧಾರಣ ಆದಳಿತ ವ್ಯವಸ್ಥೆಯ ವಿಷಯ ಪೆರೋಗೆ ತಿಳಿದಿರಲಾಗದು."
       ಅಸಾಧಾರಣ ಆಡಳಿತ ವ್ಯವಸ್ಥೆಯ ವಿಷಯ ಪೀರರೂಗೆ ತಿಳಿದಿರಲಾಗದು."

ಇಷ್ಟು ಹೀಳಿ, ಮನೆಪ್ ಛಾನ ಮುಖವನ್ನು ನೋಡಿ, ಕೆಪ್ಛು ಮುಂದೆವರಿದ.:

       "ತಿಳೀಬೇಕು, ತಿಸ್ಬೇಕು. ನೀವು ಆಕ್ಷೀಪಿಸೋದಿಲ್ಲವಾದರೆನಾನು ಆ ಕೆಲಸ ಮಾಡ್ತೀನೆ. ನೀವು ವಾಣಿಜ್ಯ ಸ್ಂಭಂಧದ ವಿಷಯ ಚಿಂತಿಸ್ಬೇಕಾಗಿಲ್ಲ. ಅದು ಬೇ, ಇದು ಬೇರೆ."
       ಮನೆಪ್ ಛಾ ಎನನ್ನೂ ಹೇಳಲಿಲ್ಲ. ಮುಗುಳುನಕ್ಕ.