ಈ ಪುಟವನ್ನು ಪರಿಶೀಲಿಸಲಾಗಿಲ್ಲ.
ಮೃತ್ಯುಂಜಯ ೧೯೭
ಗಳು_ಎಂದುಕೊಂಡ. ಅಲ್ಲಿಯೇ ಇದ್ದ ಒಬ್ಬ ಕಾವಲು ಭಟನತ್ತ ತಿರುಗಿ, "ಬೇರೆ ದೋಣಿಗಳು ಈ ಕಡೆಗೆ ಬರದ ಹಾಗೆ ಜನ ಗುಂಪು ಕಟ್ಟದ ಹಾಗೆ ನೋಡ್ಕೊ," ಎಂದ .ಇನ್ನೊಬ್ಬ ಭಟನತ್ತ ಹೊರಳಿ , “ಓಡೋ ಕತ್ತೆ. ಅರಮನೆಗೆ ಹೋಗಿ ಅಮಾತ್ಯ ಭವನಕ್ಕೆ ಸುದ್ದಿ ಮುಟ್ಟಿಸು. ನೀರಾನೆ ಪ್ರಾಂತದ ನಾಯಕರು ಬಂದಿದ್ದಾರೆ, ವಿಶ್ರಾಂತಿ ತಗೋತಿದ್ದಾರೆ-ಅಂತ ಹೇಳು,” ಎಂದು ನುಡಿದ. ಭಟ ಹೋದೊಡನೆ ಮೆನೆಪ್ ಟಾನನ್ನು ಉದ್ದೇಶಿಸಿ, " ಪ್ರಯಾಣ ಸುಖಕರವಾಗಿತ್ತಾ?”_ಎಂದು ಕೇಳಿದ. ಬಟಾನ ಮೂಗಿನ ತುದಿ ಕೆಂಪಾಯಿತು. ಆತನೇ ಉತ್ತರವಿತ್ತ : “ ಹೌದು, ಸುಖಕರವಾಗಿತ್ತು. ಆ ವರ್ತಕ ಕಾಯ್ತಿದ್ದಾನೆ. ಕಳಿಸ್ಬಿಟ್ಟು ಬನ್ನಿ." ಬಟಾನನ್ನು ಅಧಿಕಾರಿ ದುರದುರನೆ ನೋಡುತ್ತ, “ ಆಗಲಿ, ಆಗಲಿ,” ಎಂದು ಹೇಳಿ, ಮೆನೆಪ್ ಟಾಗೆ ಮತ್ತೊಮ್ಮೆ ನಮಿಸಿ, ಹಿಮ್ಮುಖವಾಗಿ ನಾಲ್ಕು ಹೆಜ್ಮೆ ಸರಿದು, ಸರಕ್ಕನೆ ತಿರುಗಿ ಹೊರಟು ಹೋದ. “ ಏನು ಬಟಾ ? ಅಪರೂಪಕ್ಕೆ ಸಿಟ್ಟು ಬಂತಾ?” ಎಂದ ಮೆನೆಪ್ ಟಾ. " ಸಿಟ್ಟು ಬರದೆ ಏನು ಮಾಡೀತು ? ರಾಜಧಾನಿಯ ದೋಣಿಕಟ್ಟೆ ಅಧಿ ಕಾರಿಯಂತೆ ! ವಿದೂಷಕ ನನ್ಮಗ !” " ಸೈರಣೆ ಬೇಕು. ಇನ್ನೂ ಎಂಥೆಂಥವರು ಸಿಗ್ತಾರೊ?” ವಾತ್ಸಲ್ಯದ ಟೀಕೆ, ಬಟಾ ಕುಗ್ಗಿದ ಧ್ವನಿಯಲ್ಲಿ, "ನಿಜ ಮೆನೆಪ್ ಟಾ ಅಣ್ಣ" ಎಂದ ನಾಯಕನ ಆ ಮಾತು ಅವರ ಇರುವಿಕೆಯ ಗಭೀರತೆಯನ್ನು ಎತ್ತಿ ತೋರಿಸಿತ್ತು.... ರಾಜಧಾನಿಯ ಅಧಿಕಾರದ ವಿರುದ್ಧ ನೀರಾನೆ ಪ್ರಾಂತ ಬಂಡಾಯವೆದ್ದಿದ್ದ ಸಂಗತಿಯನ್ನು ಬಹ್ವಂಶ ಜನ ಅರಿತಿದ್ದರು.ಆ ಬಂಡಾಯದ ನಾಯಕ ಬಂದಿ ರುವ ಸುದ್ದಿ ವಿಳಂಬವಿಲ್ಲದೆ ಹಬ್ಬಿತು. ಜನ ನೆರೆದರು.ಎಲ್ಲರೂ ಈಶಾನ್ಯ ಮೂಲೆಯ ದೋಣಿಯತ್ತ ಬೊಟ್ಟು ಮಾಡುವವರೇ.