ಈ ಪುಟವನ್ನು ಪರಿಶೀಲಿಸಲಾಗಿಲ್ಲ.
ಮೃತ್ಯುಂಜಯ ೧೯೭
ಗಳು_ಎಂದುಕೊಂಡ. ಅಲ್ಲಿಯೇ ಇದ್ದ ಒಬ್ಬ ಕಾವಲು ಭಟನತ್ತ ತಿರುಗಿ,
"ಬೇರೆ ದೋಣಿಗಳು ಈ ಕಡೆಗೆ ಬರದ ಹಾಗೆ ಜನ ಗುಂಪು ಕಟ್ಟದ ಹಾಗೆ
ನೋಡ್ಕೊ," ಎಂದ .ಇನ್ನೊಬ್ಬ ಭಟನತ್ತ ಹೊರಳಿ , “ಓಡೋ ಕತ್ತೆ.
ಅರಮನೆಗೆ ಹೋಗಿ ಅಮಾತ್ಯ ಭವನಕ್ಕೆ ಸುದ್ದಿ ಮುಟ್ಟಿಸು. ನೀರಾನೆ ಪ್ರಾಂತದ
ನಾಯಕರು ಬಂದಿದ್ದಾರೆ, ವಿಶ್ರಾಂತಿ ತಗೋತಿದ್ದಾರೆ-ಅಂತ ಹೇಳು,”
ಎಂದು ನುಡಿದ.
ಭಟ ಹೋದೊಡನೆ ಮೆನೆಪ್ ಟಾನನ್ನು ಉದ್ದೇಶಿಸಿ, " ಪ್ರಯಾಣ
ಸುಖಕರವಾಗಿತ್ತಾ?”_ಎಂದು ಕೇಳಿದ.
ಬಟಾನ ಮೂಗಿನ ತುದಿ ಕೆಂಪಾಯಿತು. ಆತನೇ ಉತ್ತರವಿತ್ತ :
“ ಹೌದು, ಸುಖಕರವಾಗಿತ್ತು. ಆ ವರ್ತಕ ಕಾಯ್ತಿದ್ದಾನೆ. ಕಳಿಸ್ಬಿಟ್ಟು
ಬನ್ನಿ."
ಬಟಾನನ್ನು ಅಧಿಕಾರಿ ದುರದುರನೆ ನೋಡುತ್ತ, “ ಆಗಲಿ, ಆಗಲಿ,”
ಎಂದು ಹೇಳಿ, ಮೆನೆಪ್ ಟಾಗೆ ಮತ್ತೊಮ್ಮೆ ನಮಿಸಿ, ಹಿಮ್ಮುಖವಾಗಿ ನಾಲ್ಕು
ಹೆಜ್ಮೆ ಸರಿದು, ಸರಕ್ಕನೆ ತಿರುಗಿ ಹೊರಟು ಹೋದ.
“ ಏನು ಬಟಾ ? ಅಪರೂಪಕ್ಕೆ ಸಿಟ್ಟು ಬಂತಾ?” ಎಂದ ಮೆನೆಪ್ ಟಾ.
" ಸಿಟ್ಟು ಬರದೆ ಏನು ಮಾಡೀತು ? ರಾಜಧಾನಿಯ ದೋಣಿಕಟ್ಟೆ ಅಧಿ
ಕಾರಿಯಂತೆ ! ವಿದೂಷಕ ನನ್ಮಗ !”
" ಸೈರಣೆ ಬೇಕು. ಇನ್ನೂ ಎಂಥೆಂಥವರು ಸಿಗ್ತಾರೊ?”
ವಾತ್ಸಲ್ಯದ ಟೀಕೆ, ಬಟಾ ಕುಗ್ಗಿದ ಧ್ವನಿಯಲ್ಲಿ, "ನಿಜ ಮೆನೆಪ್ ಟಾ
ಅಣ್ಣ" ಎಂದ
ನಾಯಕನ ಆ ಮಾತು ಅವರ ಇರುವಿಕೆಯ ಗಭೀರತೆಯನ್ನು ಎತ್ತಿ
ತೋರಿಸಿತ್ತು....
ರಾಜಧಾನಿಯ ಅಧಿಕಾರದ ವಿರುದ್ಧ ನೀರಾನೆ ಪ್ರಾಂತ ಬಂಡಾಯವೆದ್ದಿದ್ದ
ಸಂಗತಿಯನ್ನು ಬಹ್ವಂಶ ಜನ ಅರಿತಿದ್ದರು.ಆ ಬಂಡಾಯದ ನಾಯಕ ಬಂದಿ
ರುವ ಸುದ್ದಿ ವಿಳಂಬವಿಲ್ಲದೆ ಹಬ್ಬಿತು. ಜನ ನೆರೆದರು.ಎಲ್ಲರೂ ಈಶಾನ್ಯ
ಮೂಲೆಯ ದೋಣಿಯತ್ತ ಬೊಟ್ಟು ಮಾಡುವವರೇ.