ಈ ಪುಟವನ್ನು ಪರಿಶೀಲಿಸಲಾಗಿಲ್ಲ.
೧೯೮ ಮೃತ್ಯುಂಜಯ (ಮಾತುಗಳು: “ಹಿಡಿದು ತಂದಿದ್ದಾರೊ ?” “ಇಲ್ಲ. ತಾನಾಗಿಯೇ ಬಂದಿದ್ದಾನೆ." “ನೋಟಕ್ಕೆ ತೀರಾ ಸಾಮಾನ್ಯ ಮನುಷ್ಯ” “ಜನನಾಯಕ ಅಲ್ಲವಾ?” “ತಪ್ಪಾಯ್ತು ಅಂತ ಕ್ಷಮೆ ಕೇಳ್ತಾನಂತೊ ?” "ಛೆ! ಛೆ! ಎಷ್ಟು ಶಾಂತವಾಗಿದ್ದಾನೆ! ಅಮಾತ್ಯರೇ ಕರೆಸಿರ ಬೌದು_ಸೆಡ್ ಉತ್ಸವಕ್ಕೆ.” “ಆಹ! ಸೆಡ್ ಉತ್ಸವ! ಯಾವಾಗಲಂತೆ?” “ಈ ತಿಂಗಳು ಅಥವಾ ಮುಂದಿನ ತಿಂಗಳು. ಮಹಾ ಆರ್ಚಕರು ಊರಲ್ಲಿಲ್ಲ. ಅವರು ಒಂದ್ಮೇಲೆ ದಿನ ಗೊತ್ಮಾಡ್ತಾರೆ....” “ಸ್ವಲ್ಪಹೊತ್ತು ಇಲ್ಲೇ ಇರೋಣ. ಈ ನಾಯಕ ಹೋಗೋದು ಅರ ಮನೆಗೂ ಸೆರೆಮನೆಗೂ ಅನ್ನೋದು ತಾನಾಗಿಯೇ ಗೊತ್ತಾಗ್ತದೆ.”) ಸ್ವಲ್ಪ ಹೊತ್ತಿನಲ್ಲಿಯೇ ಗದಾಧಾರಿ ಭಟರು ಬಂದರು. ದಟ್ಟಗೊಳ್ಳು ತ್ತಿದ್ದ ಜನಸಂದಣಿಯನ್ನು ಉದ್ದೇಶಿಸಿ ಅವರೆಂದರು : “ಹಿಂದಕ್ಕೆ ಸರೀರಿ! ಸಾಲಾಗಿ ನಿಲ್ಲಿ!” ಸಾಲು ಬೆಳೆಯಿತು. ದೋಣಿಕಟ್ಟೆಯ ವಿಶಾಲ ಬೀದಿಯ ಎರಡೂ ಬದಿಗಳಲ್ಲಿ ಜನ ಕಲೆತರು. ಬೀದಿ ದಾಟಲು ಅನುಮತಿ ದೊರೆಯದೆ ದಾರಿ ಹೋಕರು ಅಲ್ಲಲ್ಲೇ ನಿಂತರು. (ತಡವಾಗಿ ಬಂದವರು ಕೇಳಿದರು: “ಯಾರು ಬರ್ತಾರೆ?” “ಗೊತ್ತಿಲ್ಲಪ್ಪ, ಪೆರೋ ಇರ್ಬೌದು.” “ಪೆರೋ ಆಗಿದ್ರೆ ಭಟರ ಉಸ್ತುವಾರಿಗೆ ದಳಪತಿ ಬರಿದ್ದ. ಅಮಾತ್ಯ ರೂಂತ ಕಾಣ್ತದೆ.” “ಸ್ವಲ್ಪ ಹೊತ್ತು ಕಾದಿರಿ; ತಾನೇ ಗೊತ್ತಾಗುತ್ತಲ್ಲ?”) * * * *