ಪುಟ:Mrutyunjaya.pdf/೨೧೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.



  ೧೯೮                      ಮೃತ್ಯುಂಜಯ 
                                   
       (ಮಾತುಗಳು:
       “ಹಿಡಿದು ತಂದಿದ್ದಾರೊ ?”
       “ಇಲ್ಲ. ತಾನಾಗಿಯೇ ಬಂದಿದ್ದಾನೆ."
       “ನೋಟಕ್ಕೆ ತೀರಾ ಸಾಮಾನ್ಯ ಮನುಷ್ಯ”
       “ಜನನಾಯಕ ಅಲ್ಲವಾ?”
       “ತಪ್ಪಾಯ್ತು ಅಂತ ಕ್ಷಮೆ ಕೇಳ್ತಾನಂತೊ ?”
       "ಛೆ! ಛೆ! ಎಷ್ಟು ಶಾಂತವಾಗಿದ್ದಾನೆ! ಅಮಾತ್ಯರೇ ಕರೆಸಿರ
    ಬೌದು_ಸೆಡ್ ಉತ್ಸವಕ್ಕೆ.”
       “ಆಹ! ಸೆಡ್ ಉತ್ಸವ! ಯಾವಾಗಲಂತೆ?”
      “ಈ ತಿಂಗಳು ಅಥವಾ ಮುಂದಿನ ತಿಂಗಳು. ಮಹಾ ಆರ್ಚಕರು 
    ಊರಲ್ಲಿಲ್ಲ. ಅವರು ಒಂದ್ಮೇಲೆ ದಿನ ಗೊತ್ಮಾಡ್ತಾರೆ....”
       “ಸ್ವಲ್ಪಹೊತ್ತು ಇಲ್ಲೇ ಇರೋಣ. ಈ ನಾಯಕ ಹೋಗೋದು ಅರ 
    ಮನೆಗೂ ಸೆರೆಮನೆಗೂ ಅನ್ನೋದು ತಾನಾಗಿಯೇ ಗೊತ್ತಾಗ್ತದೆ.”)
        ಸ್ವಲ್ಪ ಹೊತ್ತಿನಲ್ಲಿಯೇ ಗದಾಧಾರಿ ಭಟರು ಬಂದರು. ದಟ್ಟಗೊಳ್ಳು
    ತ್ತಿದ್ದ ಜನಸಂದಣಿಯನ್ನು ಉದ್ದೇಶಿಸಿ ಅವರೆಂದರು :
      “ಹಿಂದಕ್ಕೆ ಸರೀರಿ! ಸಾಲಾಗಿ ನಿಲ್ಲಿ!”
       ಸಾಲು ಬೆಳೆಯಿತು. ದೋಣಿಕಟ್ಟೆಯ ವಿಶಾಲ ಬೀದಿಯ  ಎರಡೂ
    ಬದಿಗಳಲ್ಲಿ ಜನ ಕಲೆತರು. ಬೀದಿ ದಾಟಲು ಅನುಮತಿ ದೊರೆಯದೆ ದಾರಿ
    ಹೋಕರು ಅಲ್ಲಲ್ಲೇ ನಿಂತರು.
       (ತಡವಾಗಿ ಬಂದವರು ಕೇಳಿದರು:
       “ಯಾರು ಬರ್ತಾರೆ?”
       “ಗೊತ್ತಿಲ್ಲಪ್ಪ, ಪೆರೋ ಇರ್ಬೌದು.”
       “ಪೆರೋ ಆಗಿದ್ರೆ ಭಟರ ಉಸ್ತುವಾರಿಗೆ ದಳಪತಿ ಬರಿದ್ದ. ಅಮಾತ್ಯ 
    ರೂಂತ ಕಾಣ್ತದೆ.”
       “ಸ್ವಲ್ಪ ಹೊತ್ತು ಕಾದಿರಿ; ತಾನೇ ಗೊತ್ತಾಗುತ್ತಲ್ಲ?”)
          *               *            *                *