ಈ ಪುಟವನ್ನು ಪರಿಶೀಲಿಸಲಾಗಿಲ್ಲ.
೨೧೬ ಮೃತ್ಯುಂಜಯ
ದೂರದಿಂದ ಆಲಾಪನೆ ಕೇಳಿಸಿದಂತಾಗಿ, “ ಯಾರೋ ಹಾಡ್ತಿದಾರೆ!”
ಎಂದು ಮೆನೆಪ್ ಟಾ ಉದ್ಗರಿಸಿದ.
“ ದೇವಸೇವಕನಿರಬೇಕು. ನಡಿ, ಅಲ್ಲಿಗೆ ಹೋಗೋಣ,” ಎಂದ
ಮೆನೆಪ್ ಟಾ.
ಅತ್ತ ಸರಿದಂತೆ ಹಾಡಿನ ಪದಗಳು ಸ್ಪಷ್ಟವಾದುವು. ಅಡಿಗಡಿಗೂ
ಅಳಲಿನ ಪಲ್ಲವಿ ಇತ್ತು :
" ಇಂದು ಯಾರೊಡನೆ ನಾ ಮಾತಾಡಲೀ!...." ಒಂದು ಬರಿದು ಶಿಲಾಪೀಠದ ಬುಡದಿಂದ ಸ್ವರ ಬರುತ್ತಿತ್ತು. ನೀರನ್ನು
ನೋಡುತ್ತ ಪೀಠದ ಕಾಲಿಗೆ ಒರಗಿ ಕುಳಿತಿದ್ದ ಆತ. ಮೆನೆಪ್ಟಾ ಮತ್ತಿತರರು ಹತ್ತು ಹೆಜ್ಜೆ ದೂರ ಸದ್ದಿಲ್ಲದೆ ನಿಂತರು.
ಯಾರ ಪರಿವೆಯೂ ಇಲ್ಲದೆ ಅವನು ಹಾಡಿದ:
" ಇಂದು ಯಾರೊಡನೆ ನಾ ಮಾತಾಡಲೀ.... ಮನುಜನ ಹೃದಯ ದುರಾಶೆಯ ಕಡಲು ಸಂಧಿ ಸಿಕ್ಕರೆ ಪರರ ಸೊತ್ತಿಗೆ ಕೈಹಾಕುವ ನೀತ
" ಇಂದು ಯಾರೊಡನೆ ನಾ ಮಾತಾಡಲೀ.... ನಯ ವಿನಯ ಇನ್ನಿಲ್ಲ ಸೊಕ್ಕಿನವರೆಲ್ಲರೂ
" ಇಂದು ಯಾರೊಡನೆ ನಾ ಮಾತಾಡಲೀ.... ಶಿಷ್ಟನ ಕೆರಳಿಸಿ ದುಷ್ಟನು ನಗುವನು ಉಳದವರದ ನೋಡುತ ಅಣಕಿಪರು
" ಇಂದು ಯಾರೊಡನೆ ನಾ ಮಾತಾಡಲೀ.... ಮುಖಗಳನೆಲ್ಲ ಮರೆ ಮಾಡಿಹರು ನೇರ ನೋಟವಿಲ್ಲ ಸೋದರನೆಡೆಗೆ