ಪುಟ:Mrutyunjaya.pdf/೨೮೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

 ೨೭೬ ಮೃತ್ಯುಂಜಯ

                ಬಟಾ   ದೋಣಿಕಟ್ಟೆಯಲ್ಲಿದ್ದ   ಹೇರುದೋಣಿಗಳ ನಾವಿಕರನ್ನು ಕಂಡು ಮಾತನಾಡಿದ. ಪರಸ್ಪರ ಅಸ್ಪಷ್ಟ ಪರಿಚಯವಿತ್ತು.
               “ನಿಮ್ಮನ್ನು ನದೀಲಿ ನೋಡಿದ್ದೇನೆ.”
             “ನನಗೂ ನೀವು ಅಪರಿಚಿತರಲ್ಲ.”
              ನೀರಾನೆ  ಪ್ರಾಂತದ ವಿಷಯವಂತೂ ಅವರು  ಅರಿತವರೇ .
              “ఇದೇನು  ದೊಡ್ಡ ಕೆಲಸ ? ಖಂಡಿತ  అల్లి ನಿಂತು, ನೀವು ಹೇಳಿದ್ದನ್ನ ತಿಳಿಸಿ ಹೋಗ್ತೇವೆ.”
              “ನಾವು  ಬಂಡಾಯವೆದ್ದವರೂಂತ—"
               “ಇರಲಿ  ಬಿಡಣ್ಣ.  ನಿಮ್ಮ ನಾಯಕರೇ ರಾಜಧಾನೀಲಿರುವಾಗ...."
               “ಇನ್ನೊಂದ್ಸಲ ಭೇಟಿಯಾದಾಗ ಒಟ್ಟಿಗೆ ಒಂದಿಷ್ಟು...."
               “ಆಹಾ !”
              ಮುಂದಿನ ಆರೇಳು ದಿನಗಳಲ್ಲಿ ಐಗುಪ್ತದ ಹೆಚ್ಚುಕಡಮೆ ಎಲ್ಲ ಪ್ರಾಂತ ಪಾಲರೂ ರಾಜಧಾನಿ ತಲಪಿದರು. ದೋಣಿಕಟ್ಟೆಯ ಎಡಬದಿಯುದ್ದಕ್ಕೂ ನಾಲ್ವತ್ತರಷ್ಟು ರಾಜನಾವೆಗಳು. ಮೇಲ್ಛಾವಣಿ, ಬಣ್ಣ,  ಅಲಂಕರ  ಎಲ್ಲದ  ರಲ್ಲೂ  ವೈವಿಧ್ಯ.
             ನೋಡಿದವರೆಲ್ಲ ಅಂದುಕೊಳ್ಳುತ್ತಿದ್ದರು :
             “ಸೆಡ್ ಉತ್ಸವಕ್ಕೆ ಬಂದಿದ್ದಾರೆ.”
              ರಜಧಾనిಯ  ಪಶ್ಚಿಮ ವಲಯದಲ್ಲಿದ್ದ ನೂತನ ಅತಿಥಿಭವನ ಜೇನು ಗೂಡಾಯಿತು . ರಾಜಧಾನಿಯ ಖ್ಯಾತ  ನರ್ತಕಿಯರೂ ಗಾಯಕರೂ ಶ್ರೇಷ್ಠ  ಅಡುಗೆಯವರೂ ಆ ಭವನದಲ್ಲಿ ಬೆವರಿಳಿಸಿದರು. ಅಲ್ಲಿ ಹಗಲು ಇರುಳಾಯಿತು, ಇರುಳು ಹಗಲಾಯಿತು.
            ಮೊದಲ ದಿನಗಳ ಮಾತುಕತೆಗೆ ವಸ್ತು, ಮೆನೆಪ್ ಟಾ. ('ಬಂಡಾಯ