ಈ ಪುಟವನ್ನು ಪರಿಶೀಲಿಸಲಾಗಿಲ್ಲ.
ಮೃತ್ಯುಂಜಯ ೨೮೫ ಲಿಲ್ಲ. ಆದರೆ ಮರೆಯಲ್ಲಿ ನಿಂತು ಮೆನೆಪ್ ಟಾನನ್ನು ಕಂಡ. ಸಾಮಾನ್ಯ ಮನುಷ್. ತೀರಾ. ಆದರೂ ಆ ಶೀತಲ ಕಣ್ಣುಗಳ ಹಿಂದೆ ಏನಿತ್ತು ?
ರಾತ್ರೆ ಸೆನೆಬ್ ವಿವರಿಸಿದ : “ಇದು ಸ್ನೇಹವಲ್ಲ. ಶಿಷ್ಟಾಚಾರ". ಅವನು ಗೂಢವಾಗಿ ಇನ್ನೂ ಒಂದು ಮಾತು ಸೇರಿಸಿದ : “ಅಮಾತ್ಯರ ಸವಿಮಾತು ಮುಖ್ಯವಲ್ಲ, ಬಂಡಾಯಗಾರನ ವಿಷಯದಲ್ಲಿ ಮಹಾ ಅರ್ಚಕರು ಏನು ಹೇಳ್ತಾರೆ ಅನ್ನೋದು ಮಹತ್ವದು.” "ಮಹಾ ಅರ್ಚಕರು ಇನ್ನೂ ಆನ್ ನಗರದಲ್ಲೇ ಇದ್ದಾರಲ್ಲಾ ?" “ಬರ್ರ್ತಾರೆ, ಬರ್ರ್ತಾರೆ. ಬರಬೇಕಾದ ಸಮಯಕ್ಕೆ ಸರಿಯಾಗಿ ಪ್ರತ್ಯಕ್ಷ
ವಾಗ್ತಾರೆ.”
“ಸೆನೆಬ್.ನನಗೆ ತಡೆಯೋಕಾಗ್ಲಿಲ್ಲ. ಆ ನಾಯಕ ರಾಜಧಾನಿಗೆ
ಬರ್ತಾನೆ ಅಂತ ಗೊತ್ತಾದ್ಮೆಲೆ, ಅದೃಷ್ಟವಾಚನ ಮಾಡಿಸ್ಕೊಂಡು ಬಂದೆ.”
"ಮುದುಕನಲ್ಲಿಗೆ ಹೋದಿರೋ?" “ಹೌದು. ಮತ್ತೆ ಸುಖದ ದಿನಗಳು ಬರ್ತವೆ ಅಂದ್ರು." “ನಾನು ಅದನ್ನ ಹೇಳ್ತಿರ್ಲಿಲ್ಲವೆ? ಕಾಣಿಕೆ ಏನು ಕೊಟ್ರಿ ?” "ಬಂಗಾರದ ಉಂಗುರ." “ಹೋಯ್ತು.” “ಅರ್ಥವಾಗ್ಲಿಲ್ಲ.” “ನನಗೆ ಸಿಗಬೇಕಾದು ಆ ವೃದ್ಧನ ಪಾಲಿಗಾಯ್ತು ಅಂತ.” “ಅದೇನು ಮಹಾ ?” “ನುಟ್ ಮೋಸ್. ನೀವು ವ್ಯರ್ಥ ಕಾಲಕಳೆಯೋ ಬದಲು ದೇಶದಲ್ಲಿ ಏನಾಗ್ತಿದೆ ಅಂತ." "ತಿಳಕೊಳ್ಳೋದಕ್ಕೆ ಪ್ರಯತ್ನಪಡಿ.” "ಅರ್ಥವಾಗಬೇಕಲ್ಲ ಸೆನೆಬ್?” “ನದೀತಟದ ಮಂದಿರಗಳಲ್ಲಿ ಮಜಾ ಮಾಡ್ತೀರಿ. ಅಲ್ಲಿಗೆ ಬೇರೆ ಪ್ರಾಂತ
ಗಳ ಭೂಮಾಲಿಕರೂ ಆಗಾಗ್ಗೆ ಬರೋದಿಲ್ಲವಾ ? ಅವರ ಜತೆ ಮಾತನಾಡಿ. ದೇಶದ ಭೂಮಾಲಿಕರೆಲ್ಲ ಮಹಾ ಅರ್ಚಕರ ಹತ್ತಿರ ಸರೀತಿದ್ದಾರೆ. ಯಾಕೆ,