ಈ ಪುಟವನ್ನು ಪರಿಶೀಲಿಸಲಾಗಿಲ್ಲ.
೩೧೦ ಮೃತ್ಯುಂಜಯ
ಔತಣಕ್ಕೆ ಕುಳಿತವರಿಗೆಲ್ಲ ಬೆಳ್ಳಿಯ ಪಾನಪಾತ್ರೆಗಳಲ್ಲಿ ದ್ರಾಕ್ಷಾ ಸುರೆ
ನೀಡಿದರು.
ಪೆರೋಗೋಸ್ಕರ ಬಂಗಾರದ ಪುಟ್ಟ ಬಟ್ಟಲಲ್ಲಿ ವಿಶೇಷ ಪಾನೀಯ ಒಳಗೆ
ನಿಂದ ಬಂತು.
ಧ್ವನಿ ತಗಿಸ್ಸಿ ಗೇಬು ನುಡಿದ:
"ಪೆರೋಗೆ ಅತ್ಯಂತ ಹಳೆಯ ಸುರೆಯೇ ಬೇಕು. ಪೂರ್ವಜರ ಕಾಲದ್ದು.
ರಾ ಐಗುಪ್ತರನ್ನು ಆಳುತ್ತಿದ್ದಾಗಲೇ ಮಾಡಿದ ಸುರೆ! ಯಾವುದಕ್ಕೂ ಒಂದೊ
ಮಿತಿ ಬೇಡವೆ?"
ಪಾನಪಾತ್ರೆಗಳನ್ನು ಕೊಡಲು ಬಂದವನನ್ನು ಗೇಬು ಕೇಳಿದ:
"ಖಿವವ ಇದೆಯೇನಪ್ಪ?"
"ಇದೆ ಒಳಗಡೆ, ಮಹಾಸ್ವಮಿ. ಕೆಲಸಗಾರರಿಗೇಂತ ತರಿಸಿದು.
ಈಗಲೇ ಬೇಕಾ?"
"ಆಮೇಲೆ, ಭಕ್ಶ್ಯ ಭೋಜ್ಯ ಬಡಿಸಿದಾಗ ತಂದ್ಕೊಡು, ಇವರಿಗೆ."
ನಾಯಕನತ್ತ ತಿರುಗಿ ಅವನೆಂದ:
"ನೀವು ಚಿಂತಿಸ್ಬೇಕಾದ್ದಿಲ್ಲ ಮೆನೆಪ್ಟಾ. ಖಿನನ ಇದೆ."
"ಕೆಲಸಗಾರರಿಗೇಂತ ತರಿಸಿದ್ದು?"
"ಬೇಸರವಾಯ್ತೆ?"
"ಇಲ್ಲ, ಇಲ್ಲ." ಉಗುಳುನುಂಗಲೆತ್ನಿಸುತ್ತ ಮೆನೆಪ್ಟಾ ಅಂದ:
"ಆದರೆ ಔತಣವಿದ್ದ ದಿನ ನಾನು ಸುರೆ ಮುತಟ್ಟೋదిల్ల."
"ವಿಚಿತ್ರ!"
"ನೀರಾನೆ ಪ್ರಾಂತದ ಎಲ್ಲ ಸಂಗತಿಗಳೂ ಸ್ವಲ್ಪ ಹಾಗೆಯೇ ಅಲ್ಲವೆ?"
ಪೆರೋ ಮಧು ಬಟ್ಟಲನ್ನು ತುಟಗಳಿಗೆ ಮುಟ್ಟಿಸಿದೊಡನೆಯೇ, ಮೆನೆಪ್
ಟಾನ ಹೊರತಾಗಿ ಉಳಿದವರೆಲ್ಲ ಬಟ್ಟಲುಗಳನೆತ್ತಿಕೊಂಡರು.
ಹೆಖ್ವೆಟ್ ತನ್ನ ಬಟ್ಟಿಲನೆತ್ತಿ ಅಂದ:
"ಮಗು, ಹುಚಾಟ ಬೇಡ. ಸುರೆ ಕುಡೀದೇ ಇದ್ದರೆ ಪೆರೋಗೆ ಅವ
ಮಾನ. ವಿಚಾರಣೆ ನಡೆಸ್ಬೇಕಾದೀತು! ಎತ್ತಿಕೊ."
"ಆಗಲಿ ತಾತ, ನಿಮ್ಮ ಮಾತಿಗೆ ಬೆಲೆ ಕೊಡದಿದ್ದರೆ ಹ್ಯಾಗೆ?