ಪುಟ:Mrutyunjaya.pdf/೩೨೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.



   ೩೧೦               ಮೃತ್ಯುಂಜಯ      
      ಔತಣಕ್ಕೆ ಕುಳಿತವರಿಗೆಲ್ಲ ಬೆಳ್ಳಿಯ ಪಾನಪಾತ್ರೆಗಳಲ್ಲಿ ದ್ರಾಕ್ಷಾ ಸುರೆ 
   ನೀಡಿದರು. 
      ಪೆರೋಗೋಸ್ಕರ ಬಂಗಾರದ ಪುಟ್ಟ ಬಟ್ಟಲಲ್ಲಿ ವಿಶೇಷ ಪಾನೀಯ ಒಳಗೆ
   ನಿಂದ ಬಂತು.
      ಧ್ವನಿ ತಗಿಸ್ಸಿ ಗೇಬು ನುಡಿದ:
       "ಪೆರೋಗೆ ಅತ್ಯಂತ ಹಳೆಯ ಸುರೆಯೇ ಬೇಕು. ಪೂರ್ವಜರ ಕಾಲದ್ದು.
   ರಾ ಐಗುಪ್ತರನ್ನು ಆಳುತ್ತಿದ್ದಾಗಲೇ ಮಾಡಿದ ಸುರೆ! ಯಾವುದಕ್ಕೂ ಒಂದೊ
   ಮಿತಿ ಬೇಡವೆ?"
        ಪಾನಪಾತ್ರೆಗಳನ್ನು ಕೊಡಲು ಬಂದವನನ್ನು ಗೇಬು ಕೇಳಿದ:
        "ಖಿವವ ಇದೆಯೇನಪ್ಪ?"
        "ಇದೆ ಒಳಗಡೆ, ಮಹಾಸ್ವಮಿ. ಕೆಲಸಗಾರರಿಗೇಂತ ತರಿಸಿದು.
   ಈಗಲೇ ಬೇಕಾ?"
        "ಆಮೇಲೆ, ಭಕ್ಶ್ಯ ಭೋಜ್ಯ ಬಡಿಸಿದಾಗ ತಂದ್ಕೊಡು, ಇವರಿಗೆ."
        ನಾಯಕನತ್ತ ತಿರುಗಿ ಅವನೆಂದ:
        "ನೀವು ಚಿಂತಿಸ್ಬೇಕಾದ್ದಿಲ್ಲ ಮೆನೆಪ್ಟಾ. ಖಿನನ ಇದೆ."
        "ಕೆಲಸಗಾರರಿಗೇಂತ ತರಿಸಿದ್ದು?"
        "ಬೇಸರವಾಯ್ತೆ?"
        "ಇಲ್ಲ, ಇಲ್ಲ." ಉಗುಳುನುಂಗಲೆತ್ನಿಸುತ್ತ ಮೆನೆಪ್ಟಾ ಅಂದ:
    "ಆದರೆ ಔತಣವಿದ್ದ ದಿನ ನಾನು ಸುರೆ ಮುತಟ್ಟೋదిల్ల."
        "ವಿಚಿತ್ರ!"
      "ನೀರಾನೆ ಪ್ರಾಂತದ ಎಲ್ಲ ಸಂಗತಿಗಳೂ ಸ್ವಲ್ಪ ಹಾಗೆಯೇ ಅಲ್ಲವೆ?"
      ಪೆರೋ ಮಧು ಬಟ್ಟಲನ್ನು ತುಟಗಳಿಗೆ ಮುಟ್ಟಿಸಿದೊಡನೆಯೇ, ಮೆನೆಪ್
   ಟಾನ ಹೊರತಾಗಿ ಉಳಿದವರೆಲ್ಲ ಬಟ್ಟಲುಗಳನೆತ್ತಿಕೊಂಡರು.
      ಹೆಖ್ವೆಟ್ ತನ್ನ ಬಟ್ಟಿಲನೆತ್ತಿ ಅಂದ:
      "ಮಗು, ಹುಚಾಟ ಬೇಡ. ಸುರೆ ಕುಡೀದೇ ಇದ್ದರೆ ಪೆರೋಗೆ ಅವ 
   ಮಾನ. ವಿಚಾರಣೆ ನಡೆಸ್ಬೇಕಾದೀತು! ಎತ್ತಿಕೊ."
      "ಆಗಲಿ ತಾತ, ನಿಮ್ಮ ಮಾತಿಗೆ ಬೆಲೆ ಕೊಡದಿದ್ದರೆ ಹ್ಯಾಗೆ?