ಪುಟ:Mrutyunjaya.pdf/೩೨೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮೃತ್ಯುಂಜಯ ೩೧೩

      ಗೇಬು : “ನಾನು ತಿಂದಿಲ್ಲಪ್ಪ. ಮೀನಿನ ವಾಸನೆ ಮಾತ್ರ ನನಗೆ ಆಗೋದಿಲ್ಲ, ನೆಹನಗಂತೂ ವಾಕರಿಕೆ ಬರ್ತದೆ...ನೋಡು. ಆ ದಾಸಿಯ ಮುಖ ಮೀನಿನ ಮೂತಿಯ ಹಾಗಿಲ್ಲ?"
     ಹೆಖ್ವೆಟ್ :"ಮೂಗು ಮುಚ್ಕೊಂಡಿಯಾ ಮಗು?"
     ಗೇಬು : ಇಲ್ಲ, ತಾತ. ಈ ಮೀನು ಮುಟ್ಟಿನೋಡೋ ಹಾಗಿದೆ!”
     ಹೆಖ್ವೆಟ್ : “ಲಫಂಗ ! ವಯಸ್ಸಾದೋರ ಮುಂದೆ ಹೀಗಾ ಮಾತಾಡೋದು ?”
     ಗೇಬು : “ವಯಸ್ಸಾದೋರು ಮನಸ್ಸಿನಲ್ಲೇ ಮುಟ್ಟಿನೋಡ್ತಾರೆ; ನನ್ನಂಥೋರು ಮುಟ್ಟಿ ನೋಡೋ ಮಾತನ್ನಾದ್ತಾರೆ;ನನಗಿಂತಲೂ ಚಿಕ್ಕೋರು ಮುಟ್ಟಿಯೇ ಬಿಡ್ತಾರೆ.”
    ಮೆನೆಪ್ ಟಾ : “ತತ್ತ್ವಜ್ಞಾನ! ಜ್ಞಾನ  ದಿಗಂತ ವಿಸ್ತಾರವದ ಹಾಗೆ ಆ ದಿಗಂತದಲ್ಲಿ ತತ್ತ್ವಜ್ಞಾನದ ಚಂದ್ರ ಉದಿಸ್ತಾನೆ."
    ಹೆಖ್ವೆಟ್ : “ಮಗು ! ನೀನು !...”
    ಕುಳ್ಳನಿಂದ ಅಂತರ್ಲಾಗ, ಚಕ್ರಲಾಗ....
    ಮೆನೆಪ್ ಟಾ : “ಇನ್ನು ನರ್ತಕಿ ಬರ್ತಾಳಾ ?”
    ಗೇಬು : “ಕುಸ್ತಿಯವರು,ಕುಸ್ತಿಯವರು."
    ಡೊಳ್ಳು ಎಲ್ಲಿಂದ ಬಂತು ? ಯಾರೋ ಸಣ್ಣಗೆ ಬಾರಿಸುತ್ತಿದ್ದಾರೆ.ಧಿಗ್ ಧಿಗ್ ಧಿಗಧಿಗ....ಜೊಂಡುವಾದ್ಯವೂ ರಾಗವೆಳೆಯುತ್ತಿದೆ. ಜೋಡಿ ಚಪ್ಪಾಳೆ ಇಲ್ಲ.
    ಕೊಬ್ಬಿದ ಕುಸ್ತಿಪಟುಗಳು ಇಬ್ಬರು. ಅರಸನಿಗೂ ಅರಸಿಗೂ ವಂದನೆ. ಪರಸ್ಪರ ಹತ್ತಿರ ಬಂದರು; ಒಬ್ಬರಿಂದೊಬ್ಬರು ದೂರ ಸರಿದರು. ಮುಷ್ಟಿಗಳಿಂದ ಒಬ್ಬರನ್ನೊಬ್ಬರು ಗುದ್ದಿದರು. ಅವರದೇ ಕೂಗು: “ಹಾಳಾಗು ಸೆತ್!" ಸೆತ್, ಹೆಳಾಗು !" ಇಗೋ ಸಾಯಿ! " ಸಾಯಿ! ಸಾಯಿ !”
   ಹೆಖ್ವೆಟ್ : “ಕೊಬ್ಬಿದ ಗೂಳಿಗಳು ! ಒಂದನ್ನೋಂದು ತಿವಿದರೇನು? ಬಿಟ್ಟರೇನು ?"
   ಗೇಬು: "ಬಕಿಲ.  ಬಕಿಲ ನಿಮಗೆ ಗೊತ್ತಲ್ಲ ಮೆನೆಪ್ ಟಾ ?”