ಪುಟ:Mrutyunjaya.pdf/೪೨೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.



                                         ಮೃತ್ಯುಂಜಯ
               ಆನ್ ನಗರಿ ಬಿಟ್ಟ ಕ್ಷಣದಿಂದ ಅವನಿಗೆ ಅದೇ ಯೋಚನೆ. ಕೆಲ ತಾಸುಗಳ ಮಟ್ಟಿಗೆ ನಿದ್ದೆ ಆ 
    ಯೋಚನೆಯನ್ನು ತಡೆಯೆತು. ಇಲ್ಲಿ ನೀರಾನೆ ಪ್ರಾಂತಕ್ಕೆ ಸಂಬಂಧಿಸಿ ಯಾವನೋ ತನ್ನೊಡನೆ 
    ಮಾತನಾಡಲು ಬಯಸಿದಾಗ....
           ಅವನು ಹುಚ್ಚನಿರಲಾರ ಎನಿಸಿತು, ಹೇಪಾಟ್ ನ ಆಕ್ರೋಶಕ್ಕೆ ಒಬ್ಬ ಯುವಕ
     ದೇವಸೇವಕ ತುತ್ತಾದ ಕಥೆಯನ್ನು ಕಳೆದ ಬಾರಿ ಮೆಂಫಿಸ್ ನಲ್ಲಿ ತಂಗಿದ್ದಾಗ ಕೇಳಿದ್ದ, 
     ಆತನೆ ಇರಬಹುದೆ ಈ ಮೆನ್ನ?
          ಅರೆತೆರೆದ ಎವೆಗಳೆಡೆಯಿಂದ ಮೆನ್ನನನ್ನು ನೋಡುತ್ತ ಅವನ ಮಾತು ಗಳಿಗೆ
     ಕೆಫ್ಟು ಕಿವಿಗೊಟ್ಟ.ಅವು ಒಳಗಿನ ಆತಂಕವನ್ನು ಹತ್ತಿಕ್ಕಿ, ವಯೋ ವೃದ್ಧನ ಸಂಯಮದಿಂದ
     ಆಡಿದ ಮಾತುಗಳು.
          ಕೆಫ್ಟು ಕೇಳಿದ :
         “ಮಹಾ ಅರ್ಚಕರು ಒಮ್ಮೆ ಕೆಂಡ ಕಾರಿದ್ದು ನಿಮ್ಮ ಮೇಲೆಯೇ ಅಲ್ಲವಾ ?”
         ಮೆನ್ನನ ದೃಷ್ಟಿಯಿಲ್ಲಿ ಈ ಲೋಕಸಂಚಾರಿ ಸರ್ವಜ್ಞ. ಮುಗುಳ್ನಗೆ ಬೀರಿ,
    "ನಾನೇ ಆ ಭಾಗ್ಯಶಾಲಿ," ಎಂದ.
       
          ಆತ ಹೇಳಿದುದನ್ನೆಲ್ಲ ನಂಬಲು ಬೇರೆ ಪ್ರಮಾಣ ಪತ್ರ ಕೆಫ್ಟುಗೆ ಬೇಕಿರಲ್ಲಿಲ್ಲ.
          ಅತಿಥಿಗೃಹದ ಮೇಲಿನ ದಿಗ್ಬಂಧನಕ್ಕೆ ರಕ್ಷಣೆಗಿಂತಲೂ ಹೆಚ್ಚು ಪ್ರಬಲವಾದ ಬೇರೆ
     ಕಾರಣ ಇರಬೇಕು ಎನಿಸಿತು ವರ್ತಕನಿಗೆ

         ಆತ ಪ್ರಶ್ನಿಸಿದ :
        “ನೀರಾನೆ ಪ್ರಾಂತದ ನಾಯಕರಿಗೆ ಅಪಾಯ ಸಂಭವಿಸಬಹುದು ಅಂತೀರಾ?”
         ಮೆನ್ನನ ಕಣ್ಣುಗಳಲ್ಲಿ ಕಂಬನಿ ತುಂಬಿತು. ಎವೆಗಳನ್ನು ಗಟ್ಟಿಯಾಗಿ ಮುಚ್ಚಿಕೊಂಡು ಆತ ಉತ್ತರಿಸಿದ :
         “ಹೌದು. ಮಹಾ ಹಸುರು ಸಮುದ್ರದಿಂದ ನಿಮ್ಮ ನಾವೆ ಬರ್ತದೆ, ಬಂದ ತಕ್ಷಣ ನಿಮ್ಮನ್ನು ಕಾಣ್ಬೇಕು
      ಅಂತ ಮೆನೆಪ್ ಟಾ ಆಣ್ಣ ಅವತ್ತೇ ಹೇಳಿದ್ರು."