ಪುಟ:Mrutyunjaya.pdf/೪೩೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮೃತ್ಯುಂಜಯ ೪೨

ಲಾಭದ ಆಸೆಯಿಂದ ಸದ್ಯದ ಪರಿಸ್ಥಿತಿಯಲ್ಲಿ ಏರುಪೇರಾಗಲು అವಕಾಶ ನೀಡಲೆ?           

ನಾಳೆ ಲಭ್ಯವಾಗುವ ಲೋಹಕ್ಕಿಂತಲೂ ಈ ದಿನ ಸಾಧ್ಯವಿರುವ ಭದ್ರತೆಗೇ ಹೆಚ್ಚು ಬೆಲೆ. అల్లವೆ?

 ಆದಷ್ಟು ఆತ್ಮೀಯವೆನಿಸುವ ಮುಗುಳುನಗೆ ಸೂಸುತ್ತ ಅಮಾತ್ಯ ಹೇಳಿದ:
 “ಪ್ರತಿ ಸಲವೂ ನೀವು ಐಗುಪ್ತದಲ್ಲಿರುವಷ್ಟು ಕಾಲ ರಾಜ ಅತಿಥಿ. ನೀವು ಇಷ್ಟಪಡೋದಾದರೆ, ನಮ್ಮ ವಿದೇಶೀ ವ್ಯಾಪಾರವನ್ನೆಲ್ಲ ಅಧಿಕೃತವಾಗಿ నిಮ್ಮ ಮೂಲಕವೇ ನಾವು ಮಾಡಬಹುದು. ನಿಮಗೆ ಈ ಮೆನೆಫ್ ಟಾನನ್ನು ಭೇಟಿ ಮಾಡುವಂಥ ಚಿಲ್ಲರೆ ವಿಷಯ ಮುಖ್ಯವೊ? ವಾಣಿಜ್ಯದಿಂದ ಬರುವ ಅಪಾರ ಲಾಭ ಮುಖ್ಯವೊ?"
 ಕೆಫ್ಟು ತಾನೂ ಮಂದಹಾಸ ಬೀರಿದ.
 “ಮೆನೆಪ್ ಟಾ ರಾಜಬಂದಿಯಾಗಿದ್ದಾನೆ ಅಂತ ಭಾವಿಸ್ಲೆ ?”
 “ಇನ್ನೂ ಆಗಿಲ್ಲ....ನನ್ನ ವೈಯಕ್ತಿಕ ಅಭಿಪ್ರಾಯ ಹೇಳಲಾ ? ಸಮರ್ಥನಾದ ಹಿರಿಯ    

ಅಧಿಕಾರಿಯಾಗೋ ಯೋಗ್ಯತೆ ಅವನಿಗಿದೆ. ಆದರೆ...”

 ಕೆಫ್ಟು, ಒಂದು ಕ್ಷಣ ಕಾದು ನೋಡಿದ. ಅಮಾತ್ಯನ ಮಾತು ಅಲ್ಲಿಗೇ ಕಡಿದುಹೋಯಿತು.  ಸಣ್ಣನೆ ನಕ್ಕು ಕೆಫ್ಟು ಅಂದ:
 “ಅವನ ವಿಷಯ ಮರೆತುಬಿಡಿ. ಏನೋ ವಾದಕ್ಕೋಸ್ಕರ ಹೇಳ್ದೆ.ಜಗತ್ತಿನ ಬಲಾಢ್ಯ ರಾಷ್ಟ್ರ ಐಗುಪ್ತದ ಅಮಾತ್ಯ ಆಮೆರಬ್ ರ ಸ್ನೇಹಿತ ನಾನು—ಅಷ್ಟು ಸಾಲದೆ ?"
 ఆ ಮಾತುಗಳಿಂದ ಅಮಾತ್ಯ ಸಂತುಷ್ಟನಾದ.
 ಕಫ್ಟು ತನ್ನ ಮನಸ್ಸಿನ ಅಸಮಾಧಾನವನ್ನು ಒಂದು ಮೂಲೆಗೆ ತಳ್ಳಿ,“ಅಲ್ಲಿ ಇಲ್ಲಿ ಸಣ್ಣಪುಟ್ಟ ಪ್ರವಾಸ ಮಾಡಿ ಬರ್ತೇನೆ; ಉತ್ಸವದ ಹೊತ್ತಿಗೆ ಇಲ್ಲಿ ರೋದಕ್ಕೆ ಯತ್ನಿಸ್ತೇನೆ,” ಎಂದು ಹೇಳಿ, ದೋಣಿಕಟ್ಟೆಗೆ ಮರಳಿದ.
           *               *                   *                 *
 ಮೆನೆಪ್ ಟಾ ದಿನವಿಡೀ ಕೆಫ್ಟುವಿನ ದಾರಿ ನೋಡಿದ.  ಅಮಾತ್ಯನನ್ನುವರ್ತಕ ಭೇಟಿ ಮಾಡಿದ ಸಂಗತಿ ಸೆನೆಬ್ ನಿಂದ ತಿಳಿಯಿತು. (‘ನಾನು ಹೊರ