ಪುಟ:Mrutyunjaya.pdf/೫೦೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

 ಮೃತ್ಯುಂಜಯ ಇದರಲ್ಲಿ ಇದ್ದರೆ? ನೀರಾನೆ ಪ್ರಾಂತದ ಭೂಮಾಲಿಕರು ಏನಾದರೂ ಹೂಟ ಹೂಡಿರಬಹುದೆ? ಆದರೆ ಅದಕ್ಕೆಲ್ಲ ಸೆನೆಬ್ ಸಹಕಾರ ಬೇಕು; ಅಮಾತ್ಯನ ಒಪ್ಪಿಗೆ ಬೇಕು.

      ಅಮ್ಮನ್, ಓ ಅಮನ್......ನನ್ನ ಪಾರ್ಥನೆಗಳೆಲ್ಲ ವ್ಯರ್ಥವಾದುವಲ್ಲ......
      ಕಿರ್ ಸದ್ದು ಬಾಗಿಲಲ್ಲಿ. ಅಂಗೈ ಅಗಲದ ಕಿಂಡಿ ತೆರೆದುಕೊಂಡು, ಒಂದು

ಹಿಡಿ ಬೆಳಕು ಒಳ ಬಂತು. ಜತೆಯಲ್ಲಿ ಸ್ತ್ರೀಯ ಇಳಿದನಿ :

      "ಅಣ್ಣ ! ಅಣ್ಣ !”
       ಧ್ವನಿಯಲ್ಲಿ ಆತುರ.
       ಕಿರ್ ಸಪ್ಪಳ ಕೇಳಿಸಿದಾಗಲೇಔಟ, ಬೆಕ್ ಇಬ್ಬರೂ ಏಕಕಾಲದಲ್ಲಿ ಅತ್ತ 

ದೃಷ್ಟಿ ಹರಿಸಿದ್ದರು. “ ಅಣ್ಣ !” ಎಂಬ ಕರೆ ಬಂದಾಗ, ಏನನ್ನೋ ಗುರುತಿಸಿ ದವನಂತೆ ಬೆಕ್ ತಟ್ಟಿನೆ ಎದು ಬಾಗಿಲಿನತ್ತ ಧಾವಿಸಿ ಬಗ್ಗಿ, ಕಿಂಡಿಯಿಂದ ಹೊರನೋಡಿದ. ಮುಖ ಮಾತ್ರ ಕಾಣಿಸಿತು. ಅವಳೇನೇ. ಬೆಕ್ ಔಟನನ್ನೂ ಬಳಿಗೆ ಕರೆದ.

      ಹೊರಗಿನಿಂದ ಸ್ವರ ಕೇಳಿಸಿತು:
      "ನಾನು ಶೀಬಾ. ಕಸಾಯಿ ಮನೆಯವಳು."

ಮಗು ಚೆನಾಗಿದೆಯಾ ? ಬಾತುಕೋಳಿ ಹೊರಗೆ ದಾಟಿಸಿ ಇನೇನಿಗೆ ಮೂರ್ತಿ ಕೊಟ್ಟೆಯಾ ? ಗಂಡ ಊರಿಗೆ ಬಂದನಾ?..ಇನ್ನೂ ಹೀಗೆಯೇ ಕೆಲವು ಪ್ರಶ್ನೆಗಳನ್ನು ಕೇಳಬೇಕೆನಿಸಿತು ಬೆಕ್ಗೆ. ಆದರೆ ಇರುವಿಕೆಯ ಕಠೋರತೆ ಯಿಂದ ಗಂಟಲು ಒತ್ತರಿಸಿತು.

      ಆಕೆಯೇ ಮತ್ತೆ ಕೇಳಿದಳು :
     "ಅಣ್ಣ ಗುರುತು ಸಿಗ್ತಾ? (ಕಂಕುಳಲ್ಲಿದ್ದ ಮಗುವನ್ನು ಎತ್ತಿ ಹಿಡಿದು) 

ಇದು ಅದೇ ಮಗ."

      "ಹೂಂ. ಹೂಂ."
       ಅವಳಿಗೆ ಸಂತಸ.
       ಔಟ ಕೇಳಿದ: