ಈ ಪುಟವನ್ನು ಪರಿಶೀಲಿಸಲಾಗಿಲ್ಲ.
೫೧೬
ಮೃತ್ಯುಂಜಯ
ಬಾಗಿಲನ್ನು ಮೆನೆಪ್ ಟಾ ಮುಚ್ಚಿದ. ಮಧ್ಯದ್ವಾರದ ಆಚೆಗೆ ನಿಂತಿದ್ದ ಕಾವಲುಗಾರ ಕೇಳಿದ: “ಪ್ರಸಾದ ಕೋಟ್ಟರಾ, ಅಯ್ಯ ?" “ಪಾಪಿ ದೇವರ ಪ್ರಸಾದ ಬೇಡ , ಅಂದ . ನಾನು ಬಿಡಲಿಲ್ಲ . ಬಲಾತ್ಕಾರ ವಾಗಿ ತುನ್ನಿಸಿದೆ . ಜಗದ್ರಕ್ಷಕ ಪ್ ಟಾ...” ......ಸ್ವಲ್ಪ ಆಚೆ ಕತ್ತಲ ಮರೆಯಲ್ಲಿ ಶೀಬಾ ಇದ್ದಳು. "ಕಂಡಿರಾ?” “ನೈವೇದ್ಯ ಅರ್ಪಿಸಿ ಬಂದೆ . ಮಹಾತಾಯಿಗೆ ನನ್ನ ಪ್ರಣಾಮ ಆಂದ್ರು," "ಯಾರು ಮಹಾತಾಯಿ? " “ನೀನು . ಇವತ್ತು ನಿನ್ನ ಗಂಡನ ಸಹಾಯ ಬೇಕಾಗೋದಿಲ್ಲ . ನಾಳೆ ನಾಯಕರ ವಿಚಾರಣೆ.” “ಓ.. ನಾಳೇನೂ ಪ್ರಸಾದ - ನೈವೇದ್ಯ - ಕೊಡ್ತೀರಾ ?” “ಗೊತ್ತಿಲ್ಲ , ನನ್ನ ತಲೆ ಸಿಡೀತಿದೆ.” ಅಷ್ಟು ಹೇಳಿ ಮೆನ್ನ ಹೊರಟುಬಿಟ್ಟ. ತಲೆ ಜೋರಾಗಿ ಸಿಡಿಯುತ್ತಿತ್ತು , ಮಂದಿರಕ್ಕೆ ದೇವಸೇವಕರು ಮರಳಿ ದ್ದರು . ಅವರ ಕಣ್ಣಿಗೆ ಬೀಳದಂತೆ , ಮೆನ್ನ ತನ್ನ ಮೇಲುದವನ್ನೆತ್ತಿ ಕೋಂಡು , ಮತ್ತೆ ನದೀತಟದ ಪ್ರಾಕಾರ ದ್ವಾರಕ್ಕೆ ಬಂದ . ಅದನ್ನು ಅವನು ದಾಟಿ ದಂಡೆಯ ಕಡೆಗೆ ಹೋಗುತ್ತಿದ್ದಾಗ ಕಾವಲುಗಾರನೆಂದ: “ಅಯ್ಯ , ನಿಮ್ಮ ಹಾಡು ಗೀಡು ಶುರು ಮಾಡ್ಬೇಡಿ ಇವತ್ತು" ! ಪದಗಳು ಸಾಲುಗಳಾದುವು ; ಮೌನವಾಗಿ ಹೊರಕ್ಕೆ ಧುಮುಕಿದುವು. “ಯಾರೊಡನೆ ನಾ ಮಾತಾಡಲೀ..? ಮೆನ್ನ ದಂಡೆಯುದ್ದಕ್ಕೂ ಸಾಗಿ , ಕಟ್ಟೆಯನ್ನು ಹಾದು , ಆಂಕು ಡೊಂಕು ದಾರಿಗಳನ್ನು ಹಿಡಿದು , ಬಟಾನ ದೋಣಿಯತ್ತ ನಡೆದ . ಅದರ ಪಕ್ಕ ದಲ್ಲಿ ಅಂಬಿಗರು ಕುಳಿತಿದ್ದರು . ಅವರ ಆಚೆಗೆ ಮತ್ತೂ ಹಲವು ದೋಣಿಗಳು ಬಂದು ತಂಗಿದ್ದುವು . ಬಲಗಡೆ ಸ್ವಲ್ಪ ದೂರದಲ್ಲಿ ಮರಳಿನ ಮೇಲೆ ಬಟಾನೂ ಐವರೂ ಕುಳಿತಿದ್ದರು . ಮೆನ್ನ ಸದು ಮಾಡದೆ ಆವರ ಬಳಿ ಸಾರಿ ತಾನೂ