ಪುಟ:Mrutyunjaya.pdf/೫೨೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೫೧೬

                                                  ಮೃತ್ಯುಂಜಯ
            ಬಾಗಿಲನ್ನು ಮೆನೆಪ್ ಟಾ  ಮುಚ್ಚಿದ.
            ಮಧ್ಯದ್ವಾರದ ಆಚೆಗೆ ನಿಂತಿದ್ದ ಕಾವಲುಗಾರ ಕೇಳಿದ:
           “ಪ್ರಸಾದ ಕೋಟ್ಟರಾ, ಅಯ್ಯ ?"
           “ಪಾಪಿ   ದೇವರ    ಪ್ರಸಾದ    ಬೇಡ ,   ಅಂದ .   ನಾನು   ಬಿಡಲಿಲ್ಲ .   ಬಲಾತ್ಕಾರ   ವಾಗಿ ತುನ್ನಿಸಿದೆ .   ಜಗದ್ರಕ್ಷಕ ಪ್ ಟಾ...”
           ......ಸ್ವಲ್ಪ   ಆಚೆ   ಕತ್ತಲ   ಮರೆಯಲ್ಲಿ   ಶೀಬಾ  ಇದ್ದಳು.
           "ಕಂಡಿರಾ?”
           “ನೈವೇದ್ಯ  ಅರ್ಪಿಸಿ   ಬಂದೆ .   ಮಹಾತಾಯಿಗೆ   ನನ್ನ   ಪ್ರಣಾಮ  ಆಂದ್ರು,"
           "ಯಾರು   ಮಹಾತಾಯಿ? "
           “ನೀನು .   ಇವತ್ತು  ನಿನ್ನ  ಗಂಡನ  ಸಹಾಯ   ಬೇಕಾಗೋದಿಲ್ಲ .   ನಾಳೆ   ನಾಯಕರ  ವಿಚಾರಣೆ.”
           “ಓ..  ನಾಳೇನೂ   ಪ್ರಸಾದ - ನೈವೇದ್ಯ - ಕೊಡ್ತೀರಾ ?”
           “ಗೊತ್ತಿಲ್ಲ ,  ನನ್ನ  ತಲೆ  ಸಿಡೀತಿದೆ.”
           ಅಷ್ಟು   ಹೇಳಿ  ಮೆನ್ನ  ಹೊರಟುಬಿಟ್ಟ.
           ತಲೆ    ಜೋರಾಗಿ    ಸಿಡಿಯುತ್ತಿತ್ತು ,  ಮಂದಿರಕ್ಕೆ    ದೇವಸೇವಕರು   ಮರಳಿ ದ್ದರು .   ಅವರ     ಕಣ್ಣಿಗೆ    ಬೀಳದಂತೆ ,    ಮೆನ್ನ   ತನ್ನ   ಮೇಲುದವನ್ನೆತ್ತಿ   ಕೋಂಡು ,    ಮತ್ತೆ    ನದೀತಟದ   ಪ್ರಾಕಾರ ದ್ವಾರಕ್ಕೆ   ಬಂದ .  ಅದನ್ನು  ಅವನು  ದಾಟಿ  ದಂಡೆಯ    ಕಡೆಗೆ    ಹೋಗುತ್ತಿದ್ದಾಗ      ಕಾವಲುಗಾರನೆಂದ:
           “ಅಯ್ಯ ,  ನಿಮ್ಮ  ಹಾಡು  ಗೀಡು  ಶುರು  ಮಾಡ್ಬೇಡಿ  ಇವತ್ತು" !
            ಪದಗಳು   ಸಾಲುಗಳಾದುವು ; ಮೌನವಾಗಿ  ಹೊರಕ್ಕೆ  ಧುಮುಕಿದುವು.
           “ಯಾರೊಡನೆ  ನಾ   ಮಾತಾಡಲೀ..?
            ಮೆನ್ನ   ದಂಡೆಯುದ್ದಕ್ಕೂ    ಸಾಗಿ ,  ಕಟ್ಟೆಯನ್ನು   ಹಾದು ,  ಆಂಕು   ಡೊಂಕು   ದಾರಿಗಳನ್ನು   ಹಿಡಿದು ,   ಬಟಾನ   ದೋಣಿಯತ್ತ   ನಡೆದ .   ಅದರ  ಪಕ್ಕ   ದಲ್ಲಿ   ಅಂಬಿಗರು     ಕುಳಿತಿದ್ದರು .    ಅವರ   ಆಚೆಗೆ   ಮತ್ತೂ   ಹಲವು   ದೋಣಿಗಳು   ಬಂದು   ತಂಗಿದ್ದುವು .  ಬಲಗಡೆ   ಸ್ವಲ್ಪ   ದೂರದಲ್ಲಿ   ಮರಳಿನ   ಮೇಲೆ   ಬಟಾನೂ    ಐವರೂ     ಕುಳಿತಿದ್ದರು .  ಮೆನ್ನ   ಸದು   ಮಾಡದೆ   ಆವರ   ಬಳಿ   ಸಾರಿ   ತಾನೂ