ಪುಟ:Mrutyunjaya.pdf/೫೩೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.



                             ಮೃತ್ಯುಂಜಯ                                       ೫೧೭  
           
ಕುಳಿತುಕೊಂಡ. “ ನಾಳೆ  ವಿಚಾರಣೆ ”  ಎಂದ ,   ತಗ್ಗಿದ  ಧ್ವನಿಯಲ್ಲಿ.
      ಆ   ಎರಡು    ಪದಗಳು   ಬಟಾನಿಗೆ   ಇನ್ನೆಷ್ಟನ್ನೋ   ತಿಳಿಸಿದುವು. 
      “ಒಪ್ಪಲಿಲ್ಲ   ಅಲ್ಲವಾ ?"
      “ಊಹೂಂ..   ಅದು   ಇಡಿಯ   ನೀರಾನೆ   ಪ್ರಾಂತದ   ಪ್ರಜೆಗಳ  ವಿಚಾರಣೆ   ಯಂತೆ .  ಸಿಂಹದಂತೆ      ಬಂದ ,  ನರಿಯಂತೆ  ಓಡಿಹೋಗಲೆ ?  -  ಅಂತ  ಕೇಳಿದ್ರು .   ನಮ್ಮ  ನ್ಯಾಯ  ನಿಲುವನ್ನು   ಅವರಿಗೆಲ್ಲ    ಮಂದಟ್ಟು ಮಾಡಿಕೊಟ್ಟ ,  ಅವರ  ಎದುರಲ್ಲೇ   ಹೊರಟು   ಬರ್ತೇನೆ - ಅಂದ್ರು... ಔಟ ,  ಬೆಕ್ ರನ್ನು  ದೊಡ್ಡಿ   ಮನೇಲಿಟ್ಟಿದ್ದಾರೆ. ಅವರಿಗೆ   ಊಟ   ಸಿಕ್ಕಿತೋ   ಇಲ್ಲವೋ   ಆಂತ   ಚಿಂತೆ   ನಾಯಕರಿಗೆ.”
     “ಕಷ್ಟ.”  ಎಂದು  ಬಟಾ ,  ಯಾವುದು   ಎಂಬುದನ್ನು    ವಿವರಿಸುವ   ಗೋಜಿಗೆ   ಹೋಗದೆ.
      ಬಹಳ     ಹೊತ್ತಿನ   ಮೂಕ   ಯಾತನೆಯ   ಬಳಿಕ   ಅವನು    ಕೇಳಿದ :
     “ವಿಚಾರಣೆ    ನಡೆಯೋದು    ಅಮಾತ್ಯ    ಭವನದಲ್ಲಿ    ಅಲ್ಲವಾ ?”
     "ಹೌದು."
     “ಹೊರಗಿನವರನ್ನು   ಬಿಡ್ತಾರಾ?”
     "ಜಜ್   ಮಂಖ್ ನ   ವಿಚರಣೆ   ಆದಾಗ    ನಾನು    ಹೋಗಿದ್ದೆ .  ಸಾಮಾನ್ಯ   ಜನ   ದೊಡ್ಡ     ನಾಯಾಲಯದ    ವೈಖರಿ   ನೋಡೋದು    ಬೇಡವಾ  ?  ಇವತ್ತು   ಇಂಥಿಂಥವರ    ವಿಚಾರಣೆ   ಅಂತ   ಡಂಗುರ ಸಾರ್ತಾರೆ ,  ನೂರಿನ್ನೂರು   ಜನರನ್ನು   ಒಳಗೆ    ಬಿಡ್ತಾರೆ....”
     “ನಾವು-”
     “ಗೊತ್ತಾಯ್ತು    ಪ್ರಶ್ನೆ   ಯಾಕೆ    ಕೇಳಿದ್ದು   ಅಂತ ,  ಗುರುತು    ಹಿಡಿದು   ನಿಮ್ಮನ್ನೆಲ್ಲ    ದೊಡ್ಡಿ     ಮನೆಗೆ      ಸೇರಿಸ್ತಾರೆ.”
      "......."
      “ನಿಮ್ಮ    ಮೇಲೆ  ಗದೆ ,   ಬಾಣ   ಪ್ರಯೋಗಿಸಿದವರು ,   ಬಕಿಲ ,    ಟೆಹುಟಿ ,   ಗೇಬು ,  ನಿಮ್ಮ   ಪ್ರಾಂತಕ್ಕೆ ಬಂದಿದ್ದ    ರಾಜಾದೂತ ,    ಸಾಲದ್ದಕ್ಕೆ   ನಿಮ್ಮಲ್ಲಿನ     ಭೂಮಾಲಿಕರು!...    ಇಂಥ   ದುಸ್ಸಾಹಸಕ್ಕೆ ಕೈಹಾಕುವಂತಿಲ್ಲ."
      “ವಿಚಾರಣೆಯ   ಕಾಲದಲ್ಲಿ   ನಮ್ಮವರು   ಯಾರೂ   ಇರೋದಿಲ್ಲ  ಅಂತ  ಬೇಸರ ."