ಈ ಪುಟವನ್ನು ಪರಿಶೀಲಿಸಲಾಗಿಲ್ಲ.
೫೧೮
ಮೃತ್ಯುಂಜಯ “ನಾನು ಅಲ್ಲಿರ್ತೇನೆ." "ಹೂಂ ಮೆನ್ನಯ್ಯ . ನನಗೆ ಬುದ್ಧಿ ಇಲ್ಲ , ನೀವು ಬೇರೆನಾ ? ನಾವು ಬೇರನಾ ? ” “ಹತ್ತಿರದಲ್ಲೇ ನೀವು ಬಚ್ಚಿಟ್ಟೊಂಡಿರಬೇಕು ನೀವು ಕತ್ತಲಾದ ತಕ್ಷಣ ಏನಾದರೂ ಸಾಧ್ಯವಾದರೆ-” "ಸರಿ." ...ಆ ರಾತ್ರಿ ಇನ್ನುಳಿದ ಅಬ್ಛು ಯಾತ್ರಿಕರು ಅರಮನೆಯ ದೀಪಾ ಲಂಕಾರ ನೋಡಿದರು. ( ಸಹಸ್ರಾರು ಪಂಜುಗಳು , ಹಲವು ಸಹಸ್ರ ಹಣತೆ ಗಳು . ) ಅರಮನೆಯ ಬಯಲಲ್ಲಿ ನಡೆದ ಹಾಡು , ಕುಣಿತ , ಕುಸ್ತಿಗಳಿಗೆ ಅವರು ಪ್ರೇಕ್ಷಕರಾದರು . ಮಹಾಪ್ರಭು , ಮಹಾರಾಣಿ ಮತ್ತು ಅರಸು ಸಂತತಿಯನ್ನು ಹೊತ್ತ ರಾಜನಾವೆಗಳು ಬೆಳಕಿನ ಹಂಸಗಳಾಗಿ ಸಂಗೀತದ ಅಲೆ ಗಳ ಮೇಲೆ ತೇಲಿದುದನ್ನು , ದಂಡೆಯ ಮೇಲೆ ನಿಂತು ಕಂಡರು . ಇವರು ಸಣ್ಣ ಸಣ್ಣ ಗುಂಪುಗಳಾಗಿ, ಹರ್ಷವಿಲ್ಲದೆ , ನಗೆ ಮಾತಿಲ್ಲದೆ , ಪಿಳಿಪಿಳಿ ಕಣ್ಣು ಬಿಡುತ್ತಿದ್ದ ಮೂವತ್ತ ಮೂರು ಬಡಜನರು. ಅರಮನೆಯ ಮಹಾದ್ವಾರದ ಹೊರಗೆ ಬಡವರಿಗೆ ಭಕ್ಷ್ಯಗಳ ವಿತರಣೆ ಯಾಯಿತು . ಈ ಜನ ಅತ್ತ ಹೋಗಲಿಲ್ಲ . ಮಾನಸಿಕ ಸಂಕಟದ ಭಾರದಿಂದ ಕುಗ್ಗಿ , ಬಳಲಿದ ಪಾದಗಳನ್ನು ಎಳೆದು ನಡೆಯುತ್ತ , ಗೊತ್ತಾಗಿದ್ದ ವೇಳೆಗಿಂತಲೂ ಮೊದಲೇ ದೋಣಿಯ ಬಳಿಗೆ ಬಂದು ತಲಸಿದರು..... “ನಾಳೆ ವಿಚಾರಣೆ ” ಎಂಬ ಪದಗಳು ಅವರ ಯೋಚನೆಗಳನ್ನು ಒಂದಾಗಿ
ಬೆಸೆದುವು.
ಅಹೂರಾ ಊಟದ ಉಸ್ತುವಾರಿ ನೋಡಿದಳು . ಮೆನ್ನನೂ ಪ್ರಯಾಸ ಪಟ್ಟು ಒಂದೆರಡು ತುತ್ತು ನುಂಗಿದ. ಆ ಇರುಳನ್ನು ಅಲ್ಲಿ ಕಳೆಯಬೇಕು. 'ನಾಳೆ ವಿಚಾರಣೆ.' ಬಟಾ ಅಂದ : “ನಮ್ಮೂರಿಗೆ ಇವತ್ತು ಪ್ರಯಾಣವಿಲ್ಲ . ನಾಳೆ . ನಾಳೆ ರಾತ್ರೆ. ”