ಈ ಪುಟವನ್ನು ಪರಿಶೀಲಿಸಲಾಗಿಲ್ಲ.
ಮೃತ್ಯುಂಜಯ
೫೧೯ ೧೨
ರಾಜಧಾನಿಯ ಆಯಕಟ್ಟಿನ ಸ್ಥಳಗಳಲ್ಲಿ ನಿಂತು ಡಂಗುರದವನು ಸಾರಿದ : “ಕೇಳಿರಿ ! ಕೇಳಿರಿ ! ದುಷ್ಟ ನಿಗ್ರಹ ಶಿಷ್ಟ ರಕ್ಷಕ ಪೆರೋ ಮಹಾ ಪ್ರಭುವಿನ ದೈವಿಕ ರಾಜ್ಯಭಾರದ ವಿರುದ್ಧ ಬಂಡಾಯವೆದ್ದ ನೀರಾನೆ ಪ್ರಾಂತದ ನಾಯಕನ ವಿಚಾರಣೆ ಈ ದಿನ ನ್ಯಾಯಮೂರ್ತಿ ಅಮಾತ್ಯರ ಸಮ್ಮುಖದಲ್ಲಿ ನಡೀತದೆ . ಕೇಳಿರಿ ! ಕೇಳಿರಿ ! " ಸೆಡ್ ಉತ್ಸವದ ನಿದ್ದೆ ಇಲ್ಲದ ಇರುಳಿನ ಬಳಿಕ ರಾಜಧಾನಿಯ ನಾಗರಿಕರು ನಿಧಾನವಾಗಿ ಏಳುತ್ತಲಿದ್ದರು . ನಗರ ತುಂಬ ಇನ್ನೂ ಹಬ್ಬದ ವಾತಾವರಣವೇ . ನಿತ್ಯದ ದುಡಿಮೆಯಲ್ಲಿ ನಿರತರಾಗಲು ಯಾರಿಗೂ ಮನಸ್ಸಿಲ್ಲ , ನದಿಯಲ್ಲಿ ತೆಪ್ಪೋತ್ಸವ ನಡೆಯುತ್ತಿದಾಗ ರಾಜಧಾನಿಯ ಹಲವು ಮನೆಗಳಲ್ಲಿ ಕಳ್ಳತನ ವಾಗಿತ್ತು . “ನಮ್ಮ ಸರ್ವಸ್ವವೂ ಹೋಯಿತು,” ಎಂದು ಆ ಮನೆಗಳಲ್ಲಿ ರೋದನ , ಸೆಡ್ ಸಮಾರಂಭದ ನಿಮಿತ್ತ ಪೆರೋ ಬಿಡುಗಡೆ ಮಾಡಿದರಲ್ಲ-- ಆ ಕಳ್ಳರದೇ ಕಾಯಕ ಎಂದು ಕೆಲವರು ಇಳಿದನಿಯಲ್ಲಿ ಕೂಗಾಡಿದರು . ಬೇರೆ ಕೆಲವರು ಅಂದರು : “ಕಷ್ಟ ನಿಮಗೆ ಮಾತ್ರವಾ ? ಜಜ್ ಮಂಖನನ್ನೂ ಬಿಟ್ಟಿದ್ದಾರೆ . ಸತ್ತ ಶ್ರೀಮಂತರಿಗೆ, ರಾಜ ಬಂಧುಗಳಿಗೆ ಗೋರಿಗಳಲ್ಲಿ ಇನ್ನು ನಿದ್ದೆಯೇ ಇಲ್ಲ.” ಈಗ ಈ ಡಂಗುರ.... ದೈವಿಕ ರಾಜ್ಯಭಾರದ ವಿರುದ್ಧ ಬಂಡಾಯ..... ಮನೆಮುರುಕರು ! ನಿದ್ದೆಗೇಡಿಗಳು ! ನಿನ್ನೆಯಿಂದ ಇವತ್ತಿಗೆ , ಇವತ್ತಿನಿಂದ ನಾಳೆಗೆ ಬಾಳು . ಅಷ್ಟಷ್ಟಕ್ಕೇ ನೆನಪಿನ ತುಣಕುಗಳು. ( ಮರಣಾನಂತರ ಮಾತ್ರ ಮೂರು ಸಾವಿರ ವರ್ಷಗಳ ಬದುಕು . ) ಆದರೂ ಕೆಲವರಿದ್ದರು . ನೀರಾನೆ ಪ್ರಾಂತ ಎಂದಾಗ ಯೋಚನೆಗಳ ಪೆಟ್ಟಿಗೆಯನ್ನು ತಟ್ಟಿದಂತಾಯಿತು . ಒಂದು ವರ್ಷ್ ದ ಹಿಂದೆ ಅಲ್ಲಿ ಅದೇನೋ ಆಯಿತಲ್ಲ ? ವಿಚಾರಣೆ ಆ ಬಂಡಾಯ ನಾಯಕನದೇ ಏನು ?