ಈ ಪುಟವನ್ನು ಪರಿಶೀಲಿಸಲಾಗಿಲ್ಲ.
೫೨೦
ಮೃತ್ಯುಂಜಯ ಯಾಕಿಷ್ಟು ತಡ ? ಇಲ್ಲಿಗೆ ಕರೆಸಿದರಂತಲ್ಲ ? ಅತಿಥಿಗೃ ಹದಲ್ಲೆಯೋ ಕಾರಾ ಗೃಹದಲ್ಲೆಯೋ ಇಟ್ಟರಂತಲ್ಲ? ಯಾರೋ ಅಂದಿದ್ದರು: “ಅವನು ಸಜ್ಜನ.” ಹಾಗಾದರೆ ಸಜ್ಜ ನನ ವಿಚಾರಣೆ.... ಇನ್ನೂ ಕೆಲವರೆಂದರು “ನಾವು ಇವತ್ತು ದುಡಿಯದಿದ್ದರೂ ಅಮಾತ್ಯರು ದುಡೀತಾರೆ . ಅಧಿಕಾರಿಗಳೂ ಕೂದ . ಆಳುವವರಿಗೆ ವಿಶ್ರಾಂತಿಯೆ ಇಲ್ಲಾ." ಅರಮನೆಯ ಆವರಣದಲ್ಲಿ ಡಂಗುರದ ಸದ್ದಿಲ್ಲ . ಆದರೆ ಸೇವಕ ಸೇವಕಿ ಯರೆಲ್ಲ ಬಲ್ಲರು. ಅವರಿಗೆ ಮೆನೆಪ್ಟಾ “ಬಡಜನರ ದೊಡ್ಡ ನಾಯಕ .” ನ್ಯಾಯಸ್ಥಾನದಲ್ಲಿ ಪ್ರೇಕ್ಷಕರಾಗುವ ಸ್ವಾತಂತ್ರ್ಯ ಆವರಿಗಿದೆ . ಜಜ್ ಮಂಖನ ವಿಚಾರಣೆಯಾದಾಗ ಸರದಿಯಲ್ಲಿ ತಂಡ ತಂಡಗಳಾಗಿ ಹೋಗಿ ನೋಡಿದ್ದರು . ಈ ದಿನವೂ ಹೋಗಬಹುದು . ಆದರೆ ಉತ್ಸವದ ಮಾರನೆಯ ದಿನ ಕೆಲಸವೇನು ಕಡಿಮೆಯೆ? ತಿಕ್ಕುವ,ತೊಳೆಯುವ, ದುಡಿಮೆ.
ಸಹಸ್ರಾರು ಜನ ಇದ್ದರೂ ಸಾಲದು . ಸಾಧ್ಯವಾದರೆ ಅಪರಾಹ್ನ ಇಣಿಕಿ ನೋಡಿ ಬರಬೇಕು.
ನಾಯಸ್ಥಾನದ ಏರ್ಪಾಟಿನ ಉಸ್ತುವಾರಿ ಹಿರಿಯ ಲಿಪಿಕಾರ ಸೆನೆಬ್ ನದು. ಅಮಾತ್ಯ ನಿತ್ಯದ ಕಾರ್ಯ ನಿರ್ವಹಿಸುವ ಸಭಾಭವನ ನ್ಯಾಯದ ಆಸ್ಥನವಾಗಿ ಮಾರ್ಪಟ್ಟಿತು . ಈ ದಿನ ಆಮೆರಬ್ ನದು ನ್ಯಾಯಮೂರ್ತಿಯ ಪಾತ್ರ , ಮಹಾ ಅರ್ಚಕ ನಾಯಸ್ಥಾನಕ್ಕೆ ಬಂದ ಕುಳಿತುಕೊಳ್ಳುವರೆಂದು ಕೇಳಿ ಸೆನೆಬ್ಗೆ ಪರಮಾಶ್ಚರ್ಯ . ಅಂಥದು ಹಿಂದೆಂದೂ ನಡೆದಿರಲಿಲ್ಲ . ಅಮಾತ್ಯರಿಂದ ತುಸು ದೂರದಲ್ಲಿದ್ದ ಅವರಿಗೆ ವಿಶೇಷ ಪೀಠವ್ಯವಸ್ಥೆ . ಚಿರತೆಯ ತುಣುಕು ಚರ್ಮ ಅದಕ್ಕೆ . .....ಜಜ್ ಮಂಖ್ ನ ವಿಚಾರಣೆಯಂದು ಪೆರೋ ಪರಿವಾರ ಬಂದಿತ್ತು . ಅವರು ದೂರದ ವೇದಿಕೆಯ ಮೇಲಿನಿಂದ ಪ್ರೇಕ್ಷಕರು. ಇವತ್ತೂ ಬಂದಾರು . ಪರದೆ ಇಳಿಬಿಡಲು ಸೆನೆಬ್ ಆಜ್ಞಾಪಿಸಿದ . ಪಾರ ದರ್ಶಕ, ಸಭಾಭವನದಲ್ಲಿ ಕುಳಿತಿದ್ದರೂ ಅವರು ಬೇರೆಯೇ ಎನ್ನುವ ಭಾವನೆ . ಔತಣದಲ್ಲಿ ಮೆನೆಪ್ ಟಾಗೆ ಕೊಟ್ಟ ಉಡುಗೊರೆಯ ನೆನಪಾಗುತ್ತಿದೆ ಸೆನೆಬಗೆ . (ಛೆ ! ಛೆ ! ಈ ನೆನಪು ಸರಿಯಲ್ಲ , ನನಗೂ ಅದಕ್ಕೂ ಯಾವ ಸಂಬಂಧವೂ ಇಲ್ಲ..?) “ಕಟಾಂಜನ ತಂದಿಡಿರೋ ಮರದ ಕಟಾಂಜನ , ಮೂಲೆಯಲ್ಲಿ. ಅಪರಾಧಿಗಾಗಿ . ಅಲ್ಲ , ಆರೋಪಿಗಾಗಿ ."