ಈ ಪುಟವನ್ನು ಪರಿಶೀಲಿಸಲಾಗಿಲ್ಲ.
ಮೃತ್ಯುಂಜಯ ನ್ಯಾಯಮೂರ್ತಿ ಒಸೈರಿಸೆನಲ್ಲ, ಆಮೆರಬ್. ನಾನು ವಿದೇಶೀಯನಲ್ಲ-ಇದೇ ಮಣ್ಣಿನ ಸಂತಾನ')ಪೆರೋ ಒಬ್ಬನ ಶಿರಚ್ಛೀದನ ಮಾಡುತ್ತಿದ್ದಾನೆ. ನಡು ಹಗಲಿನಲ್ಲಿ ಈ ಬಣ್ಣಗಳು ಜೀವ ತಳೆದಿವೆ. ಕರಗಿ ಹರಿಯುವಂತೆ ಕಾಣುತ್ತಿದೆ ಯಲ್ಲ ಆ ಕೆಂಪು ? ಇಷ್ಟಿದ್ದರೂ ಈ ನ್ಯಾಯಸ್ಥಾನವೀಗ ಬರಿಯ ಪೀಠಗಳ, ನೆಲಹಾಸುಗಳ, ಪರದೆಯ ಸಭಾಭವನ.
ಊಟ ಮುಗಿಸಿ ಬಂದ ಒಬ್ಬ ಕಾವಲುಭಟನೆಂದ : "ದಳಪತಿಗೆ ಭಯ. ಪ್ರಾಕಾರ ದ್ವಾರಗಳನ್ನೆಲ್ಲ ಈಗಲೇ ಮುಚ್ಚಿಸಿಬಿಟ್ರು. ಮಹಾದ್ವಾರಕ್ಕೆ ವಿಶೇಷ ಕಾವಲು ಹಾಕಿದ್ದಾರೆ!” ಇನ್ನೊಬ್ಬ ಪಿಸುದನಿಯಲ್ಲಿ ಅಂದ: "ಇವರು ತಪ್ಪಿಸ್ಕೊಂಡು ಹೋಗ್ಬೌದು ಅಂತಲಾ?" “ ಹೂಂ..” ಒಂದು ಮಗ್ಗುಲು ಬಾಗಿಲು ತುಸು ತೆರೆದುಕೊಂಡಿತು. ಅರಮನೆಯ ಪರಿಚಾರಿಕೆ ಶೀಬಾ ಒಳಬಂದಳು. ('ಪರಿಚಿತ ಮುಖ.') “ ಏನಕ್ಕ?” ಎಂದು ಕೇಳಿದ ಅವಳ ಪರಿಚಯವಿದ್ದ ఒಬ್ಬ ಯೋಧ. ಅವಳು ಮಂದಹಾಸ ಬೀರಿದಳು. " ನಿಮ್ಮದೆಲ್ಲ ಊಟ ಆಯ್ತಾ?" "ಓಹೋ." ಹತ್ತಿರ ಬಂದು ಮೆಲ್ಲನೆ ಕೇಳಿದಳು : "ಇವರಿಗೇನಾದರೂ ಕೊಟ್ಟರಾ?" ಆ ಯೋಚನೆ ಒಬ್ಬಿಬ್ಬರಿಗೆ ಬಂದಿತ್ತು. ಆದರೆ ? ಆದರೆ? ಒಬ್ಬ ನುಡಿದ : "ಹ್ಯಾಗಕ್ಕ ಕೊಡೋದು ?" "ಹೀಗೆ," ಎಂದಳು ಶೀಬಾ, ತನ್ನ ನಡುವಸ್ತ್ರ ಮಡಚಿದ್ದಲ್ಲಿಂದ ಬಾಡಿದ ಹಸುರು ಪೆವೈರಸ್ ಎಲೆಗಳಲ್ಲಿ ಸುತ್ತಿದ್ದೊಂದು ಸುರುಳಿಯನ್ನು ಹೊರತೆಗೆದು. "ಒಂದೇ ರೊಟ್ಟ,ತಿಂದ್ಬಿಡಿ ಅಣ್ಣ. ನನ್ನ ಗುರುತು ಸಿಗಲಿಲ್ಲವಾ, ನಾನು ಮಹಾತಾಯಿ, ಅಣ್ಣ,” ಎಂದು ಹೇಳಿ, “ ಆ ಮೇಲೆ ಆಎಲೆಗಳನ್ನು ಹೊರಕ್ಕೆ ಎಸೆದ್ಬಿಡು," ಎಂದೊಬ್ಬ ಯೋಧನಿಗೆ ನಿದ್ರೇಶವಿತ್ತು, ಅವಳು ಹೊರಟು