ಪುಟ:Mrutyunjaya.pdf/೫೬೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮ್ರುತ್ಯುಂಜಯ ೫೪೭ ಅಮಾತ್ಯ : “ಇದು ಖಂಡಿತವಾಗಿಯೂ ಹುಚ್ಚುಚ್ಚಾರ...” ಮೆನೆಪ್ ಟಾ : నిಮಗೆ ಬೇಡದನರಿಗೆ ಹುಚ್ಚ ಅನ್ನೋ ಬಿರುದು ಕೊಡ್ತೀರಿ!” ಬೆಳಕು ಕಡಿಮೆಯಾಗಿತ್ತು. ಇನ್ನು ಮುಚ್ಚಂಜೆ, ಅದಾದ ಮೇಲೆ ఇರುಳು. ಆಮೆರಬ್ ಗೆ ಚಿಂತೆ, ಸಿಡುಕು. ಈತ ನಿಲ್ಲಿಸುವ ಲಕ್ಷಣಗಳೇ ಕಾಣಿಸುತ್ತಿಲ್ಲವಲ್ಲ... అಮಾತ್ಯ : ಆಯಿತೋ, ಮಾತನಾಡಿ ? ಮಹಾ ಸಂಧಾ ಪೂಜೆಗೆ ತಡವಾಗ್ತದೆ.” ಮೆನಪ್ ಟಾ : " ಪೂಜೆಗೆ ಅಡ್ಡಿಯಾಗಲಾರೆ. ಅವರು ಹೋಗಿ ಬರಲಿ.” ಅಮಾತ್ಯ: “ನಿನ್ನಿಂದಾಗಿ ಮಹಾಪ್ರಭು ಮಹಾರಾಣಿ ಎಲ್ಲರಿಗೂ ತೊಂದರೆ.” ನಾಯಸ್ಥಾನದಲ್ಲಿ ಪ್ರೇಕ್ಷಕರು ಗುಜುಗುಜು. ಸಾಮಾನ್ಯ ಪ್ರೇಕ್ಷಕರು ಜೀವ ತಳೆದು ತಮ್ಮೊಳಗೆ ಮಾತನಾಡತೊಡಗಿದರು. ಇಳಿದನಿಯಲ್ಲಿ ಆಮೆರಬ್ ಹೇಪಾಟ್ ವಿಚಾರ ವಿನಿಮಯ...ಸೆನೆಬ್ ಆಜ್ಞಪ್ತನಾಗಿ ಅತ್ತಿತ್ತ ಓಡಿದ. ಧ್ವನಿ ಏರಿಸಿ ಆಮೆರಬ್ ಅಂದ : “ಸದ್ದು! ಸದ್ದು! ಎಲ್ಲರೂ ನ್ಯಾಸ್ಥಾನದ ಪಾವಿತ್ರ್ಯ ಕಾಪಾಡ್ಬೇಕು. ದೀಪಗಳನ್ನು ಬೆಳಗೋದಕ್ಕೆ ಅನುಜ್ಞೆ ನೀಡಿದ್ದೇವೆ. ಅಪರಾಧಿ ಮುಂದುವರಿಸಿ ಬೇಗನೆ ಮುಗಿಸಲಿ." ಮೆನೆಪ್ ಟಾ : “ಉಸಕೃತನಾಗಿದ್ದೇನೆ. ఐಗುಪ್ತದು ಸಾಟಿ ಇಲ್ಲ ದ ಪ್ರಾಚೀನ ಸುಸಂಸ್ಕೃತ ನಾಗರೀಕತೆ. ನಮ್ಮ ಸಮಾಜ ವಿಸ್ತಾರ ಬುನಾದಿಯ ಮೇಲಿನ ಹತ್ತಾಳು ಎತ್ತರದ ಗೋರಿ. ಈ ಸೋಪಾನ ವ್ಯವಸ್ಥೆ ನಿಂತಿರೋದು ಸಹಸ್ರ ಸಹಸ್ರ ಶ್ರಮಜೀವಿಗಳ ಭುಜಗಳ ಮೇಲೆ ಎತ್ತರಕ್ಕೆ ಹೋಗ್ತಾ ಅಗಲ ಕಿರಿದು. ದುಡಿಸುವ ಕಾಸೀರುಗಳು.ಭೂಮಾಲಿಖರು, ನರ್ತಕರು, ಸೈನ್ಯ,