" ಉತ್ಸವ ಮುಗಿದಮೇಲೂ ಇಲ್ಲಿಯೇ ಟಳಾಯಿಸ್ತಾ ಇದೀಯಲ್ಲ.
ಯಾಕೆ ?”
“ ಇ ಹ್ಹಿ ಹ್ಹಿ!”
"ಮಕ್ಕಳಿಲ್ಲವಾ 2 ”
“ಎರಡಿವೆ. ನಿದ್ದೆ ಹೋಗಿದಾವೆ. ಊಟ ಆಯ್ತಾ ಅಣ್ಣ?”
ಇನ್ನೊಬ್ಬ ಭಟ ದಪ್ಪ ಗಂಟಲಲ್ಲಿ ಅಂದ:
“ ಎಲ್ಲೀದು ಊಟ ? ಮಧಾಹ್ನದಿಂದ ಇಲ್ಲಿ ಸಾಯ್ತಾ ಇದ್ದೇವೆ. ಆ ನಾಯಕ ಸತ್ತು ಬಿಡುಗಡೆ ಪಡೆದ ನಾವು ಬದುಕಿದ್ದೇವೆ-ನಮಗೆ ಬಂಧನ.”
ಆಹೂರಾ ರಾಗವೆಳೆದಳು :
"ಒಂದಿಷ್ತು ಬುತ್ತಿ-ಚೀಲದಲ್ಲಿ ಸ್ವಲ್ಪ ಖಿವವ-ಉಳಿದಿವೆ. ಬೇಕಾ?”
ವೊದಲಿನ ಭಟನೆಂದ :
"ಬಿಟ್ಟಿ ಕೊಡ್ರೀಯಾ ?”
“ ನಾನು ರೈತ ಹೆಂಗಸು. ತಿನ್ನೋದಕ್ಕೆ ಕುಡಿಯೋದಕ್ಕೆ ಯಾರಿ ಗಾದರೂ ಕೊಟ್ರೆ ವಿನಿಮಯಕ್ಕೆ ಏನೂ ತಗೊಳೋದಿಲ್ಲ-ಪಟ್ಟಣದವರ ಹಾಗೆ” -
“ ಓಹೋಹೋ! ತಗೊಂಡ್ಬಾ, ಎಲ್ಲಿಟ್ಟಿದೀಯಾ ?”
"ಓ అల్లి........"
“ ಕಿಸಪಿಸ ಮಾತು ಕೇಳ್ತದಲಾ ? ಬೇರೆಯವರೂ ಯಾರೋ ఇದ್ದಂಗಿದೆ."
"ನಮ್ಮ ಪಕ್ಕದ ಹಳ್ಳಿದು ಒಂದೆರಡು ಸಂಸಾರ,” ಎಂದು ನುಡಿದು ಅಹೂರಾ ಬುತ್ತಿ ತರಲು ಹೋದಳು.
ದಪ್ಪ ಗಂಟಲಿನ ಭಟನೆಂದ:
“ ಏನು ಯೋಚೈ?
“ಪಸಂದಾಗಿದಾಳೆ.”
"ಹೆಣ ಕಾಯೋದು ಬಿಟ್ಟಟ್ಟು -------- »
“ಅದೆಲ್ಲಿಗೆ ಹೋಗ್ರದೆ? ದಳಪತಿಗೆ ಗೊತ್ತಾಗಬಾರದು, ಅಷ್ಟೆ. »
"ಸರಿ...ಊಟ ಬರ್ಲಿ ಮೊದಲು.”
ಪುಟ:Mrutyunjaya.pdf/೫೯೨
ಗೋಚರ
ಈ ಪುಟವನ್ನು ಪ್ರಕಟಿಸಲಾಗಿದೆ
ಮೃತ್ಯುಂಜಯ
೫೭೯