ಪುಟ:Mrutyunjaya.pdf/೬೦೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಮೃತ್ಯುಂಜಯ

೫೮೭

ಚೀರಿದ್ದು, ಮೆನ್ನಯ್ಯ.'
ತಕ್ಷಣ ಎದ್ದು, ಯಾರನ್ನೂ ತುಳಿಯದಂತೆ ಎಚ್ಚರ ವಹಿಸಿ, ಬಟಾ ಅತ್ತ
ನಡೆದು, ಮೆನ್ನನ ಪಕ್ಕದಲ್ಲಿ ಕುಳಿತ.
" ಅಯ್ಯ! ಅಯ್ಯ !"
ಮುಖವನ್ನು ಎರಡೂ ಅಂಗೈಗಳಿಂದ ಮುಚ್ಚಿಕೊಂಡಿದ್ದ ಮೆನ್ನ ಅದುರಿದ
ಗ೦ಟಲಲ್ಲಿ " ಹ್ಞ ?" ಎ೦ದ ; ಅ೦ಗೈಗಳನ್ನು ಸರಿಸಿದ.
" ಕೂಗಿಕೊ೦ಡಿರಿ, ಅಯ್ಯ. "
" ಹ್ಞ. ನಮ್ಮ ಅ೦ಬಿಗ ಹೋಹೋಹೋ ಅನ್ತಿದ್ದಹಾಗೆ ಮಹಾ
ಅಚ೯ಕನ ದೋಣಿ ನಮ್ಮದಕ್ಕೆ ಗುಮ್ಮಿತು. ಮೂರು ದೋಣಿಗಳಲ್ಲಿ ಇನ್ನೂರು
ಯೋಧರು...."
" ದು:ಸ್ವಪ್ನ. "
" ಹ್ಞ. ಹೌದು. (ಮೂಡಣ ದಿಕ್ಕಿಗೆ ದೃಷ್ಟಿ ಹಾಯಿಸಿ) ಶವ
ಕಾಣೆಯಾದದ್ದು ಇಷ್ಟು ಹೊತ್ತಿಗೆ ಕಾವಲುಗಾರ ಭಟರ ದಳಪತಿಗೆ ಗೊತ್ತಾ
ಗಿರಬಹುದೂಂತ ಭಾವಿಸೋಣ. ಅದು ಅಮಾತ್ಯರಿಗೆ ವರದಿಯಾಗೋದು
ನಸುಕಿನಲ್ಲಿ. ಪೆರೋಗೆ ಅಮಾತ್ಯ ವರದಿ ಮಾಡೋದು ಬೆಳಿಗ್ಗೆ. ಅಷ್ಟು
ಹೊತ್ತಿಗೆ, ರಾತ್ರೆ ಯಾರೋ ಲೇಪನಸಾಮಗ್ರಿ ಕೊ೦ಡ್ಕೊ೦ಡ್ರು ಅ೦ತ ಅಪೋ
ಫಿಸ್ ಮಹಾ ಅಚ೯ಕರಿಗೆ ಹೇಳ್ತಾನೆ. ಚೌಯ೯ದ ತನಿಖೆ ರಾಜಧಾನೀಲಿ
ನಡೀತದೆ. ಮಧ್ಯಾಹ್ನದ ಊಟ ಆದ ಮೇಲೆ ದಂಡಯಾತ್ರೆ ಆರ೦ಭ. "
" ನಾಯಕರನ್ನು ನೀರಾನೆ ಪ್ರಾ೦ತಕ್ಕೆ ಒಯ್ತಿರಬಹುದು ಅ೦ತ ಯಾರಿ
ಗಾದರೂ ಸ೦ದೇಹ ಹುಟ್ಟೀತು. "
" ಖ೦ಡಿತ. ನೀರಾನೆ ಪ್ರಾ೦ತದವರ ದೋಣಿ ನೋಡಿದಿರಾ ಅ೦ತ
ಎದುರು ಸಿಕ್ಕಿದವರನ್ನು ಕೇಳ್ಕೊ೦ಡು, ವೇಗವಾಗಿ ಬರ್ತಾರೆ. "
" ಹಗಲು ಒಮ್ಮೆ, ಕತ್ತಲಾದ ಮೇಲೆ ಒಮ್ಮೆ ದ೦ಡೆ ಮುಟ್ಟಿದರೆ
ಸಾಕು. ಅವರ ದೋಣಿಗಳಿಗಿ೦ತ ಹೆಚ್ಚೆ೦ದರೆ ಒ೦ದು ದಿವಸ, ಕಮ್ಮಿ ಎ೦ದರೆ
ಒ೦ದು ಹೊತ್ತು ಮು೦ಚೆಯೇ ನಾವು ಊರು ಸೇರ್ತೇವೆ. "
ಸಂವಾದ ಹತ್ತಿರ ಇದ್ದವರಿಗೆಲ್ಲ ಕೇಳಿಸಿತು. ತುಸು ಆಚೆ ಈಚೆ ಇದ್ದವ
ರಿಗೂ ಅರ್ಥವಾಯಿತು.