ಪುಟ:Mrutyunjaya.pdf/೬೭೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಮ್ರುತ್ತ್ಯುಂಜಯ-೯೫೨ “ಸಾಮಾನ್ಯವಾಗಿ ಇಂತ ಪ್ರಸಂಗಗಳಲ್ಲಿ ಶರಣಾಗತಿ-ಮುಂದಿನ ಕ್ರಮ" “ಅಯೋ!” ಎಂದ ಬಟಾ. ಸ್ನೊಫ಼್ರು ನಿಟ್ಟುಸಿರು ಬಿಟ್ಟ. ಜನ ಚೆದರಬಾರದೆಂದು ಸೆವು ಪುನಃ ಪುನಃ ಕೂಗಿ ನುಡಿದ : "ಸಾವಿನ ಊಟ ಮುಗಿಸಿಕೊಂಡು ಹೋಗಿ. ನಾವೆಲ್ಲ ಒಂದೇ ಬುಡಕಟ್ಟಿನವರು. ಒಟ್ಟಿಗೆ ಈಸೋಣ! ಒಟ್ಟಾಗಿರಿ !” ಮೆನ್ನ ಮೆಲ್ಲನೆ ಬಟಾನಿಗೆ ಹೇಳಿದ: “ಜನ ಒಸೈರಿಸನ, ನಾಯಕರ ನಾಮೋಚಾರ ಮಾಡಿದರೆ ಚೆನ್ನು” ಆರ್ತನಾದದಂತೆ ಕೇಳಿಸಿತು ಬಟಾನ ಧ್ವನಿ : “ಓ ಒಸೈರಿಸ್ ! ಓ ಮೆನೆಪ್ಟಾ !” - ಜನ ಓಗೊಟ್ಟರು. ಮತ್ತೆ ಮತ್ತೆ ಆ ಹೆಸರುಗಳನ್ನು ಉಚ್ಚರಿಸಿದರು. ಆಗ ಕಣ್ಣಿಗೆ ಬಿತ್ತು, ಮುಖ್ಯ ಬೀದಿಯಲ್ಲಿ ರಾಜಗೃಹದತ್ತ ಬರತೊಡ ಗಿದ್ದ ಮೆರವಣಿಗೆ ಸಹಸ್ರ ಸಹಸ್ರ ಜನರ ಕಾಲ್ಕುಳಿತದಿಂದ ಏಳುತ್ತಿದ್ದ ಧೂಳಿನೊಡನೆ, ಪಶ್ಚಿಮಕ್ಕೆ ಬೇಗ ಬೇಗನೆ ತೆರಳುತ್ತಿದ್ದ ರಾನ ಹೊಂಗಿರಣಗಳು ಕಣು ಮುಚಾಲೆಯಾಡಿದುವು. ಪಲ್ಲಕಿಯಲ್ಲಿ ಕುಳಿತಿದ್ದ ಹೇಪಾಟ್ ದೂರದಲ್ಲಿ ಗುಡ್ಡದ ಮೇಲಿದ್ದ ಮಂದಿರವನ್ನು ನೋಡಿದ. ಅರ್ಚಕನ ಗತಿ ಏನಾಗಿದೆಯೊ ? ಅವನನ್ನು ಕರೆಸಬೇಕು-ಎಂದುಕೊಂಡ.. ಕತ್ರಲಾಗುವುದರೊಳಗೆ ಆಕ್ರಮಣ ಮುಗಿಯಿತಲ್ಲ ಸದ್ಯಃ ಎಂದು ಸಮಾಧಾನ ಪಟ್ಟ ಬಕಿಲ ಯೋಚಿಸಿದ: ಬಯಲಿನಲ್ಲಿರುವ ಜನಸಮುದಾಯವನ್ನು ದೇವತಾಮೂರ್ತಿಯನೂ ಮಹಾ ಅರ್ಚಕರೂ ಮಣಿಸುತ್ತಾರೆ. ಅವರ ರಕ್ಷಣೆಗೆ ಕೆಲವರನ್ನು ಬಿಟ್ಟು ಉಳಿದೆಲ್ಲ ಸೈನಿಕರು ರಾಜಗೃಹವನ್ನು ಸುತ್ತುವರಿಯುವ್ಂತೆ ಮಾಡಬೇಕು. ಅಲ್ಲಿ ಸ್ಂಪತ್ತು ಇದ್ದೀತು......ಸಾಧ್ಯವಾದರೆ........... ಕತ್ತಲಾದ ಮೇಲೆ ಮಹಾ ಅರ್ಚಕರನ್ನು ದೇವಮಂದಿರಕ್ಕೆ ಕಳುಹಿಸಿಬಿಡ ಬೇಕು...ಆಗ..ಆಗ

                   ೪೨